ಜಗತ್ತಿನಲ್ಲಿ ಮಾನವೀಯತೆ, ಸ್ಥಿರತೆ ಮತ್ತು ಶಾಂತಿಯ ಸಂವರ್ಧನೆಯಲ್ಲಿ ಭಾರತದ ಕೊಡುಗೆ ದೊಡ್ಡದು ! – ಅಲ್-ಇಸಾ, ವರ್ಲ್ಡ್ ಮುಸ್ಲಿಂ ಲೀಗ್ ನ ಮುಖ್ಯಸ್ಥ

ವರ್ಲ್ಡ್ ಮುಸ್ಲಿಂ ಲೀಗನ ಮುಖ್ಯಸ್ಥ ಮಹಮ್ಮದ್ ಬಿನ್ ಅಬ್ದುಲ್ ಕರೀಂ ಅಲ್-ಇಸಾ

ನವದೆಹಲಿ – ವರ್ಲ್ಡ್ ಮುಸ್ಲಿಂ ಲೀಗನ ಮುಖ್ಯಸ್ಥ ಮಹಮ್ಮದ್ ಬಿನ್ ಅಬ್ದುಲ್ ಕರೀಂ ಅಲ್-ಇಸಾ ಇವರು ೫ ದಿನದ ಪ್ರವಾಸದಲ್ಲಿ ಇದ್ದಾರೆ. ಅವರು ಖುಸರೋ ಫೌಂಡೇಶನ್ ನ ‘ಇಂಡಿಯಾ ಇಸ್ಲಾಮಿ ಕಲ್ಚರ್ ಸೆಂಟರ್’ ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆ ಸಮಯದಲ್ಲಿ ಅವರು, ಜಗತ್ತಿನಲ್ಲಿನ ಮಾನವೀಯತೆ, ಸ್ಥಿರತೆ ಮತ್ತು ಶಾಂತಿಯ ಸಂವರ್ಧನೆಗಾಗಿ ಭಾರತ ದೊಡ್ಡ ಯೋಗದಾನವೇ ನೀಡಿದೆ ಎಂದು ಹೇಳಿ ಭಾರತದ ಸಂವಿಧಾನವನ್ನು ಹೊಗಳಿದರು.

ಭಾರತೀಯ ಮುಸಲ್ಮಾನರಿಗೆ ಹಿಂದುಸ್ತಾನಿ ಇರುವ ಅಭಿಮಾನ – ಅಲ್-ಇಸಾ

ಆಲ್-ಇಸಾ ಇವರು, ಭಾರತ ಇದು ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿದೆ. ಆದರೂ ಕೂಡ ಅದರ ಸಂವಿಧಾನ ಜಾತ್ಯತೀತವಾಗಿದೆ. ಜಗತ್ತಿನಲ್ಲಿ ನಕಾರಾತ್ಮಕ ವಿಚಾರಗಳು ಪಸರಿಸಲಾಗುತ್ತದೆ. ಸಮಾನ ಅಧಿಕಾರ ನೀಡುವ ಮತ್ತು ಎಲ್ಲಾ ಜಾತಿ-ಧರ್ಮದ ಜನರನ್ನು ಒಟ್ಟಾಗಿ ಇಡುವ ಭಾರತೀಯ ಸಂವಿಧಾನ ಪವಿತ್ರವಾಗಿದೆ. ಭಾರತೀಯ ಮುಸಲ್ಮಾನರಿಗೆ ಹಿಂದುಸ್ತಾನಿ ಇರುವ ಅಭಿಮಾನ ಇದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ’, ಎಂದು ಹೇಳುವ ಭಾರತದಲ್ಲಿನ ಜಾತ್ಯತೀತರಿಗೆ ಇದರ ಬಗ್ಗೆ ಏನು ಹೇಳುವುದಿದೆ ?