
ನವದೆಹಲಿ – ‘ಆದಿಪುರುಷ’ ಈ ವಿವಾದಿತ ಚಲನಚಿತ್ರದಲ್ಲಿ ಅಯೋಗ್ಯ ಸಂಭಾಷಣೆಗಳನ್ನು ಬರೆದಿದ್ದಕ್ಕಾಗಿ ಲೇಖಕ ಮನೋಜ ಮುಂತಶೀರ ಅವರು ಕ್ಷಮೆಯಾಚಿಸಿದ್ದಾರೆ. ಮುಂತಶೀರ್ ಅವರ ಲೇಖನದಿಂದ ರಾಮಾಯಣದ ವಿಡಂಬನೆಯಾಗಿತ್ತು ಮತ್ತು ಇದರಿಂದ ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿತ್ತು. ಮುಂತಶೀರ ಅವರು ಆರಂಭದಲ್ಲಿ ಶ್ರೀ ಹನುಮಂತನ ವಿವಾದಾತ್ಮಕ ಸಂಭಾಷಣೆಯನ್ನು ಬಲವಾಗಿ ಬೆಂಬಲಿಸಿದ್ದರು. ಈಗ ಅವರಿಗೆ ಬುದ್ದಿ ಬಂದು ಕ್ಷಮೆ ಕೇಳಿದ್ದಾರೆ.
ಮುಂತಶೀರ್ ಇವರು ಜುಲೈ ೮ ರಂದು ಟ್ವೀಟ್ ಮಾಡಿ, ‘ಆದಿಪುರುಷ’ ಚಲನಚಿತ್ರದಿಂದ ಜನರ ಭಾವನೆಗಳನ್ನು ನೋಯಿಸಲಾಗಿದೆ. ಎಂಬುದನ್ನು ನಾನು ಒಪ್ಪುತ್ತೇನೆ. ನನ್ನ ಎಲ್ಲಾ ಸಹೋದರ ಸಹೋದರಿಯರು, ಹಿರಿಯರು, ಗೌರವಾನ್ವಿತ ಋಷಿ-ಮುನಿಗಳು ಮತ್ತು ಶ್ರೀರಾಮನ ಭಕ್ತರಿಗೆ ನಾನು ಕೈ ಮುಗಿದು ಕ್ಷಮೆಯಾಚಿಸುತ್ತೇನೆ.
ಭಜರಂಗಬಲಿ ನಮ್ಮೆಲ್ಲರನ್ನು ಆಶೀರ್ವದಿಸಲಿ. ನಾವೆಲ್ಲರೂ ಒಂದಾಗಿ ಮತ್ತು ಅಖಂಡವಾಗಿ ಉಳಿಯಲು ಹಾಗೂ ನಮ್ಮ ಪವಿತ್ರ ಶಾಶ್ವತ ಮತ್ತು ಶ್ರೇಷ್ಠ ದೇಶಕ್ಕೆ ಸೇವೆ ಮಾಡುವ ಶಕ್ತಿ ನೀಡಲಿ.’ ಎಂದು ಹೇಳಿದ್ದಾರೆ.
ಸಂಭಾಷಣೆ ಏನಿತ್ತು ?
‘ಆದಿಪುರುಷ’ ಸಿನಿಮಾದಲ್ಲಿ ಹನುಮಂತನು ‘ಕಪಡಾ ತೇರೆ ಬಾಪ್ ಕಾ, ಆಗ್ ತೇರೆ ಬಾಪ್ ಕಿ, ತೇಲ್ ತೇರೆ ಬಾಪ್ ಕಾ, ಜಲೇಗಿ ಭಿ ತೇರೇ ಬಾಪ್ ಕಿ’, ಎಂಬ ಆಕ್ಷೇಪಾರ್ಹ ಹೇಳಿಕೆಗಳು ಮಾತನಾಡಿರುವುದಾಗಿ ತೋರಿಸಲಾಗಿವೆ.
ಮುಂತಶೀರ ಅವಕಾಶವಾದಿ ! – ಸಾರ್ವಜನಿಕರಿಂದ ಖೇದಕರ ಪ್ರತಿಕ್ರಿಯೆ
ಮನೋಜ್ ಮುಂತಶೀರ ಅವರ ಕ್ಷಮೆಯಾಚನೆಯ ಟ್ವೀಟ್ನಲ್ಲಿ ವೈರಲ್ ಆದ ನಂತರ, ಅನೇಕ ಟ್ವಿಟ್ಟರ್ ಬಳಕೆದಾರರು ಮುಂತಶೀರ ಅವರನ್ನು ಕಟುವಾದ ಪದಗಳಲ್ಲಿ ಟೀಕಿಸಿದ್ದಾರೆ. ಓರ್ವ ‘ಸಂಭಾಷಣೆ ಬರೆಯುವ ಮುನ್ನ ಯೋಚಿಸಬೇಕಿತ್ತು’ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ‘ನೀವು ಅವಕಾಶವಾದಿ’ ಎಂದು ಕಪಾಳಮೋಕ್ಷ ಮಾಡಿದ್ದಾರೆ.
#ManojMuntashir apologises for #Adipurush‘s dialogues post massive backlash! https://t.co/jlPHM1IBJ8
— TIMES NOW (@TimesNow) July 8, 2023
ಸಂಪಾದಕರ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!