ಮದರಸದ ಮೌಲ್ವಿಯಿಂದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅನೇಕ ಬಾರಿ ಬಲಾತ್ಕಾರ !

  • ಕಾನಪುರ(ಉತ್ತರ ಪ್ರದೇಶ) ಇಲ್ಲಿಯ ಘಟನೆ

  • ಮೌಲ್ವಿಯ ಬಂಧನ !

(ಮೌಲ್ವಿ ಎಂದರೆ ಇಸ್ಲಾಮಿನ ಧಾರ್ಮಿಕ ನಾಯಕ)

ಕಾನಪುರ(ಉತ್ತರಪ್ರದೇಶ) – ಇಲ್ಲಿಯ ಒಂದು ಮದರಸಾದ ಮೌಲ್ವಿಯನ್ನು ಬಲಾತ್ಕಾರದ ಆರೋಪದಲ್ಲಿ ಬಂಧಿಸಲಾಗಿದೆ. ಸಂತ್ರಸ್ತೆಯು ಅವನ ಮದರಸಾದಲ್ಲಿ ಕಲಿಯುವ ಅಪ್ರಾಪ್ತ ಹುಡುಗಿ ಆಗಿದ್ದಾಳೆ. ಕಾರಿ ಮಹಮ್ಮದ್ ಅಹಮದ್ ಎಂದು ಈ ಮೌಲ್ವಿಯ ಹೆಸರಾಗಿದ್ದು ಅವನು ಜನವರಿ ೨೦೨೨ ರಲ್ಲಿ ಸಂತ್ರಸ್ತೆಗೆ ಮಾದಕ ಪದಾರ್ಥ ತಿನಿಸಿ ಆಕೆಯ ಮೇಲೆ ಬಲಾತ್ಕಾರ ಮಾಡಿದನು ಮತ್ತು ಅಶ್ಲೀಲ ವಿಡಿಯೋ ತಯಾರಿಸಿದನು. ಅದರ ನಂತರ ಅವನು ನೀನು ಬಾಯಿ ಬಿಟ್ಟರೆ ಮಾಟ ಮಂತ್ರ ಮಾಡಿ ನಿನ್ನ ಕುಟುಂಬವನ್ನು ಮುಗಿಸಿ ಬಿಡುವೆ ಎಂದು ಸಂತ್ರಸ್ತೇಗೆ ಬೆದರಿಸುತ್ತಾ ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ ಮಾಡಿದನು. ಕೊನೆಗೆ ಈ ಕಿರುಕುಳಕ್ಕೆ ಬೇಸತ್ತು ಜೂನ್೨೬ ರಂದು ಪೊಲೀಸರಿಗೆ ಆಕೆ ದೂರು ನೀಡಿದಳು. ಪೊಲೀಸರು ಜೂನ್ ೨೭ ರಂದು ಮೌಲ್ವಿಯನ್ನು ಬಂಧಿಸಿದರು.

ಸಂಪಾದಕೀಯ ನಿಲುವು

  • ಮುಸಲ್ಮಾನ ಹುಡುಗರಿಗೆ ಇಸ್ಲಾಮಿ ಶಿಕ್ಷಣ ನೀಡುವ ಹೆಸರಿನಲ್ಲಿ ಮದರಸಾಧಲ್ಲಿನ ಮೌಲ್ವಿ, ಶಿಕ್ಷಕ ಮುಂತಾದವರು ಅವರ ಲೈಂಗಿಕ ಶೋಷಣೆ ಮಾಡುತ್ತಾರೆ, ಇದು ಅನೇಕ ಘಟನೆಗಳಿಂದ ಬೆಳಕಿಗೆ ಬಂದಿದೆ. ಆದ್ದರಿಂದ ಈಗ ದೇಶದಲ್ಲಿನ ಎಲ್ಲಾ ಮದರಸಾಗಳನ್ನು ಮುಚ್ಚಬೇಕೆಂದು ಯಾರಾದರೂ ಬೇಡಿಕೆ ಮಾಡಿದರೆ ಅದರಲ್ಲಿ ತಪ್ಪೇನಿದೆ ?
  • ಹಿಂದುಗಳ ಸಂತರ ಮೇಲೆ ತಥಾ ಕಥಿತ ಆರೋಪ ಆದ ನಂತರ ಆಕಾಶ ಪಾತಾಳ ಒಂದು ಮಾಡುವ ಹಿಂದೂ ದ್ವೇಷಿ ಪ್ರಸಾರ ಮಾಧ್ಯಮಗಳು ಇಂತಹ ಪ್ರಕರಣಗಳ ಸಮಯದಲ್ಲಿ ಮಾತ್ರ ಮೌನವಾಗಿ ಇರುತ್ತಾರೆ, ಇದನ್ನು ತಿಳಿದುಕೊಳ್ಳಿ !