ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್

ದೆಹಲಿ – ಇಂದಿನ ಯುವ ಪೀಳಿಗೆಯು ದಾರಿ ತಪ್ಪಿಲ್ಲ ಅಥವಾ ದಿಕ್ಕುಗೆಟ್ಟಿಲ್ಲ. ಅವರನ್ನು ಅರ್ಥಮಾಡಿಕೊಳ್ಳಲು ಅವರಿಗೆ ಆಜ್ಞೆ ಮಾಡುವ ಅಗತ್ಯವಿಲ್ಲ, ಅವರೊಂದಿಗೆ ಚರ್ಚಿಸುವ ಅಗತ್ಯವಿದೆ. ನಾವು ಯುವಕರಾಗಿದ್ದಾಗ, ಅದು ಆಜ್ಞಾಪಾಲನೆಯ ಕಾಲವಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಇಂದಿನ ಯುವ ಪೀಳಿಗೆಗೆ ಪ್ರಶ್ನೆಗಳನ್ನು ಕೇಳುವ ಕಡೆಗೆ ಹೆಚ್ಚಿನ ಒಲವಿದೆ. ಆದ್ದರಿಂದ ಪೋಷಕರು ಮತ್ತು ಹಿರಿಯರು ಅವರೊಂದಿಗೆ ಸಂವಾದ ನಡೆಸುವುದು ಅಗತ್ಯವಾಗಿದೆ. ಕುಟುಂಬಗಳಲ್ಲಿ ಪರಸ್ಪರ ಸಂವಾದ ಕಡಿಮೆಯಾಗುತ್ತಿದೆ. ಹೊಸ ಪೀಳಿಗೆಗೆ ನಾವು ಅಪಾರ ಪ್ರೀತಿ ನೀಡಬೇಕು, ಅವರೊಂದಿಗೆ ಸಮಯ ಕಳೆಯುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕರಾದ ಡಾ. ಮೋಹನ್ ಜಿ ಭಾಗವತ್ ಹೇಳಿದ್ದಾರೆ. ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ನಡೆಯುತ್ತಿರುವ ಹೋರಾಟದ ಕುರಿತು ಅವರು ಮಾತನಾಡುತ್ತಿದ್ದರು.