‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪ

ನವ ದೆಹಲಿ – ಹೊಣೆಗಾರಿಕೆ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ಆಗ್ರಹಿಸುತ್ತಿರುವ ವಿದ್ಯಾರ್ಥಿಗಳನ್ನು ಭವಿಷ್ಯದ ಸೂಕ್ತ ಪಾಲುದಾರರೆಂದು ಗುರುತಿಸುವ ಬದಲಿಗೆ, ಮೋದಿ ಸರಕಾರವು ಅವರನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ. ವಿದ್ಯಾರ್ಥಿಗಳು ನ್ಯಾಯಯುತ ಬೇಡಿಕೆಗಳೊಂದಿಗೆ ರಸ್ತೆಗಿಳಿದಾಗ, ಸರಕಾರವು ಅವರ ಧೈರ್ಯಕ್ಕೆ ಹೇಡಿತನ ಮತ್ತು ಅನ್ಯಾಯದ ವರ್ತನೆಯ ಮೂಲಕ ಪ್ರತಿಕ್ರಿಯಿಸುತ್ತಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ ‘ಶಿಕ್ಷಣ ವ್ಯವಸ್ಥೆಯ ಪತನ, ಯುವ ಭಾರತಕ್ಕೆ ಆಘಾತ’ ಎಂಬ ಲೇಖನವನ್ನು ಬರೆಯುವ ಮೂಲಕ ಅವರು ಈ ಆರೋಪಗಳನ್ನು ಮಾಡಿದ್ದಾರೆ.

ಗಾಂಧಿ ಅವರು,

1. ದೇಶಾದ್ಯಂತ ವಿದ್ಯಾರ್ಥಿಗಳು ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಕುಸಿಯುತ್ತಿರುವ ಶಿಕ್ಷಣ ವ್ಯವಸ್ಥೆಯ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಅವರ ಬೇಡಿಕೆಗಳು ಸ್ಪಷ್ಟವಾಗಿವೆ – ಸರಕಾರವು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಶಿಕ್ಷಣದಲ್ಲಿ ಸುಧಾರಣೆಗಳನ್ನು ತರಬೇಕು.

2. ಮೋದಿ ಸರಕಾರವು ಒಟ್ಟು ಬಜೆಟ್‌ನಲ್ಲಿ ಶಾಲಾ ಶಿಕ್ಷಣದ ಪಾಲು ಶೇ. 50 ರಷ್ಟು ಮತ್ತು ಉನ್ನತ ಶಿಕ್ಷಣದ ಪಾಲನ್ನು ಶೇ. 33 ರಷ್ಟು ಕಡಿಮೆ ಮಾಡಿದೆ. ಕಳೆದ 12 ವರ್ಷಗಳಲ್ಲಿ ಸರಕಾರವು ಸುಮಾರು 1 ಲಕ್ಷ ಸರಕಾರಿ ಶಾಲೆಗಳನ್ನು ಮುಚ್ಚಿದ್ದಾರೆ ಹಾಗೂ 43 ಸಾವಿರ ಖಾಸಗಿ ಶಾಲೆಗಳನ್ನು ತೆರೆದಿದೆ. ಇವುಗಳಲ್ಲಿ ಹೆಚ್ಚಿನ ಭಾಗವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಸಂಯೋಜಿತ ಸಂಘಟನೆಗಳು ನಡೆಸುತ್ತಿವೆ. (ರಾಷ್ಟ್ರಪ್ರೇಮಿ ಸಂಘದ ಶಾಲೆಗಳು ಪ್ರಾರಂಭವಾಗುತ್ತಿರುವುದು ಗಾಂಧಿ ಅವರಿಗೆ ಹೊಟ್ಟೆಯುರಿ ತಂದಿದೆ. – ಸಂಪಾದಕರು)

3. ಶಿಕ್ಷಣ ಮುಗಿದ ನಂತರ ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳು ಸಿಗುತ್ತಿಲ್ಲ. ಹೀಗಿದ್ದರೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಂಸದೀಯ ಸಮಿತಿಯ ಶಿಫಾರಸುಗಳನ್ನು ತಿರಸ್ಕರಿಸಿದ್ದಾರೆ ಮತ್ತು ಇಂತಹ ದೊಡ್ಡ ಘಟನೆಗಳ ನಂತರವೂ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. (ಕಾಂಗ್ರೆಸ್ 6 ದಶಕಗಳ ಕಾಲ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ಅದು ಏನು ಮಾಡಿತು ಎಂಬುದನ್ನು ಗಾಂಧಿ ಏಕೆ ಹೇಳುತ್ತಿಲ್ಲ? – ಸಂಪಾದಕರು)

4. ದೆಹಲಿ ಪೊಲೀಸ್ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಹತೋಟಿಗೆ ತರಲು ಲಾಠಿಚಾರ್ಜ್, ಅಶ್ರುವಾಯು ಮತ್ತು ಪೆಲೆಟ್ ಗನ್‌ಗಳಂತಹ ಹಿಂಸಾಚಾರವನ್ನು ಬಳಸಿದವು. ಈ ಹಿಂಸಾಚಾರದಲ್ಲಿ ಹಲವು ನಿರಾಪರಾದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಸಂಪಾದಕೀಯ ನಿಲುವು

  • ಈ ರೀತಿ ರಾಜಕೀಯ ಮಾಡುವ ಸೋನಿಯಾ ಗಾಂಧಿ ಅವರಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಎಂದಿಗೂ ಕಾಳಜಿ ಮೂಡಲು ಸಾಧ್ಯವಿಲ್ಲ ಎಂಬುದೇ ನಿಜ!
  • ವಿದ್ಯಾರ್ಥಿಗಳ ಮೇಲೆ ದಾಳಿ ಮಾಡುವುದು ಸಂಪೂರ್ಣವಾಗಿ ಅಯೋಗ್ಯವೇ ಆಗಿದೆ. ಆದಾಗ್ಯೂ, ವಿದ್ಯಾರ್ಥಿ ಚಳವಳಿಯನ್ನು ಹಿಂಸಾತ್ಮಕಗೊಳಿಸಲು ಕಾಂಗ್ರೆಸ್, ಕಮ್ಯುನಿಸ್ಟ್, ಮುಸ್ಲಿಂ ಸಂಘಟನೆಗಳು ಮತ್ತು ರಾಷ್ಟ್ರವಿರೋಧಿ ಶಕ್ತಿಗಳು ಯತ್ನಿಸುತ್ತಿರುವಾಗ, ಸರಕಾರ ಅದನ್ನು ತಡೆಯುವುದು ಅತ್ಯಗತ್ಯ!
  • ವಿದ್ಯಾರ್ಥಿಗಳೇ, ನಿಮಗೆ ಅನ್ಯಾಯವಾಗಿದೆ ಎಂಬುದು ಸೂರ್ಯನಷ್ಟೇ ಸತ್ಯ, ಆದರೆ ಅದರ ಮೇಲೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬುದನ್ನೂ ಮರೆಯಬೇಡಿ!