ಭಾರತದಿಂದ ಚೀನಾಗೆ ತರಾಟೆ!

ನವದೆಹಲಿ – ಭಾರತವು ಯಾವಾಗಲೂ ಚೀನಾದ ಸಾರ್ವಭೌಮತ್ವವನ್ನು ಗೌರವಿಸಿದೆ; ಆದರೆ ಗಡಿಯಲ್ಲಿ ಚೀನಾ ವ್ಯವಹಾರದ ಕುರಿತು ಹಾಗೆ ಹೇಳಲಾಗುವುದಿಲ್ಲ. ಸಾರ್ವಭೌಮತ್ವದ ವಿಷಯ ಬಂದಾಗ, ವಾಸ್ತವವಾಗಿ ಭಾರತವೇ ಈ ವಿಷಯಗಳನ್ನು ಮಂಡಿಸುತ್ತಾ ಬಂದಿದೆ. ಭಾರತವು ಯಾವುದೇ ರೀತಿಯಲ್ಲಿ ಚೀನಾದ ಸಾರ್ವಭೌಮತ್ವವನ್ನು ಉಲ್ಲಂಘಿಸುವುದಿಲ್ಲ. ಈ ವಿಷಯದಲ್ಲಿ ನಮ್ಮ ನಿಲುವು ಯಾವಾಗಲೂ ಒಂದೇ ರೀತಿಯಾಗಿದೆ. ೧೯೬೩ರಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ನ ಕೆಲವು ಭಾಗಗಳ ಮೇಲೆ ಚೀನಾ ಅಕ್ರಮವಾಗಿ ನಿಯಂತ್ರಣ ಸಾಧಿಸಿದೆ. ಈ ಭಾಗಗಳ ಮೇಲೆ ಭಾರತದ ಹಕ್ಕಿದೆ ಎಂಬುದನ್ನು ಸ್ವತಃ ಚೀನಾ ಕೂಡ ಅಧಿಕೃತವಾಗಿ ಒಪ್ಪಿಕೊಳ್ಳುತ್ತದೆ. ಜಮ್ಮು-ಕಾಶ್ಮೀರದಲ್ಲಿನ ಭಾರತದ ಒಡೆತನದ ಪ್ರದೇಶದಲ್ಲಿ ಚೀನಾದ ಯೋಜನೆಗಳೂ ನಡೆಯುತ್ತಿದ್ದು, ನಾವು ಅದನ್ನು ವಿರೋಧಿಸುತ್ತೇವೆ, ಎಂದು ಭಾರತದ ವಿದೇಶಾಂಗ ಸಚಿವಾಲಯವು ಚೀನಾಗೆ ಚುರುಕು ಮುಟ್ಟಿಸಿತು. ಭಾರತವು ಚೀನಾದ ಭಾಗಗಳ ಮೇಲೆ ನಿಯಂತ್ರಣ ಸಾಧಿಸಿದೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು. ಅದಕ್ಕೆ ಸರಕಾರ ಈ ಮೇಲಿನಂತೆ ಪ್ರತ್ಯುತ್ತರ ನೀಡಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ನಡುವಿನ ಸಭೆಯ ಅಧಿಕೃತ ವಿವರಗಳನ್ನು ಚೀನಾ ಪ್ರಕಟಿಸಿದ ನಂತರ ಈ ಹೇಳಿಕೆ ಬಂದಿದೆ. ತೈವಾನ್ ಮತ್ತು ಟಿಬೆಟ್ ಕುರಿತು ಭಾರತದ ನಿಲುವು ಮುಂಚಿನಂತೆಯೇ ಇದ್ದು, ಭಾರತವು ಚೀನಾದ ಸಾರ್ವಭೌಮತ್ವವನ್ನು ಗೌರವಿಸುತ್ತದೆ ಎಂದು ಜೈಶಂಕರ್ ಹೇಳಿದ್ದಾರೆಂದು ಚೀನಾ ಹೇಳಿತ್ತು.
‘ಮೋದಿ ಸರಕಾರವು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ‘ರಾಷ್ಟ್ರದ ಶತ್ರುಗಳು’ ಎಂದು ಪರಿಗಣಿಸುತ್ತದೆ!’(ಅಂತೆ)
ಕಾಕ್ರೋಚ್ ಜನತಾ ಪಕ್ಷದ ಹೋರಾಟ ಮುಕ್ತಾಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕೊನೆಗೂ ರಾಜೀನಾಮೆ !
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!