ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕಾಗಬಹುದು ! – ಕೊಣ್ಣಿಯೂರ ಪಿ.ಪಿ.ಎಮ್. ನಾಯರ್’ ಆಚಾರ್ಯರು, ‘ಕೇರಳೀಯ ಕ್ಷೇತ್ರ ಪರಿಪಾಲನಾ ಸಮಿತಿ’ ಮುಂಬಯಿ

ಕೊಣ್ಣಿಯೂರ ಪಿ.ಪಿ.ಎಮ್. ನಾಯರ್

ಪ್ರತಿಯೊಬ್ಬ ವ್ಯಕ್ತಿಯು ಪ್ರಭು ಶ್ರೀರಾಮನಂತೆ ವರ್ತಿಸುವನೋ, ಆಗ ರಾಮರಾಜ್ಯ ಬರಲಿದೆ. ರಾಮರಾಜ್ಯಕ್ಕಾಗಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಆವಶ್ಯಕತೆಯಿದೆ. ಚುನಾವಣೆಯ ಸಮಯದಲ್ಲಿ ನಾಯಕರು ಮತಕ್ಕಾಗಿ ನಮ್ಮ ಬಳಿ ಕೈಯೊಡ್ಡುತ್ತಾರೆ; ಆದರೆ ಭಗವಂತನು ನಮ್ಮ ಮುಖ್ಯ ನಾಯಕನಾಗಿದ್ದಾನೆ. ಆ ಮುಖ್ಯ ನಾಯಕನೊಂದಿಗೆ ಅನುಸಂಧಾನ ಇಟ್ಟುಕೊಳ್ಳಬೇಕು. ನಮಗೆ ಸಂವಿಧಾನದಲ್ಲಿ ತಿದ್ದುಪಡಿ ಮಾಡಿಯೇ ಹಿಂದೂ ರಾಷ್ಟ್ರ ಸ್ಥಾಪಿಸ ಬೇಕಿದೆ. ಭಾರತದಲ್ಲಿ ಸಮಾನ ನಾಗರಿಕ ಕಾನೂನು, ಹಾಗೆಯೇ ಮತಾಂತರವನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ರಚಿಸಬೇಕು. ಕೃಷಿ ಮತ್ತು ಋಷಿಗಳ ರಕ್ಷಣೆ ಮಾಡಬೇಕು ಎಂದು ಹೇಳಿದರು.

(ಸೌಜನ್ಯ – Hindu Janajagruti Samiti)