ಮುಂಬಯಿಯಲ್ಲಿ ಮೊಬೈಲ್ ಆಟದ ಮಾಧ್ಯಮದಿಂದ ಹಿಂದೂ ಮಕ್ಕಳ ಮತಾಂತರ !

  • ಮತಾಂಧರ ಮೊಬೈಲ ಮೂಲಕ `ಗೇಮ್ ಜಿಹಾದ’

  • ಮುಂಬ್ರಾದ ಆರೋಪಿ ಶಾಹನವಾಜ ಕುಟುಂಬದೊಂದಿಗೆ ಪರಾರಿ

ಮುಂಬಯಿ – ಮುಂಬ್ರಾದ ಶಾಝಿಯಾ ಅಪಾರ್ಟಮೆಂಟನಲ್ಲಿ ವಾಸಿಸುವ ಶಾಹನವಾಜ ಮಕಸೂದ ಖಾನನು ಹಿಂದೂ ಮಕ್ಕಳಿಗೆ 2015 ರಿಂದ ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಮತ್ತು ಹಿಂದುದ್ವೇಷಿ ಝಾಕೀರ ನಾಯಿಕನ ವಿಡಿಯೋ ನೋಡಲು ಹೇಳಿ, ಮಕ್ಕಳ ಬ್ರೈನ್ ವಾಶ ಮಾಡುತ್ತಿದ್ದನು. ಅವನನ್ನು ಬಂಧಿಸಲು ಉತ್ತರಪ್ರದೇಶ ಪೊಲೀಸರ ವಿಶೇಷ ದಳ ಮುಂಬ್ರಾ ತಲುಪಿದರು. ಆದರೆ ಪೊಲೀಸರು ಬರುವ ಮೊದಲೇ ಅವನು ಕುಟುಂಬದೊಂದಿಗೆ ಪರಾರಿಯಾಗಿದ್ದಾನೆ.

3 ಹಿಂದೂಗಳು ಮತ್ತು 1 ಜೈನ ಹುಡುಗನನ್ನು ಮುಸ್ಲಿಂ ಧರ್ಮ ಸ್ವೀಕರಿಸುವಂತೆ ಮಾಡಿದ !

ಗಾಝಿಯಾಬಾದ ಪೊಲೀಸರು ನೀಡಿದ ಮಾಹಿತಿಯನುಸಾರ ಜೈನ ಸಮಾಜದ ಓರ್ವ ಅಪ್ರಾಪ್ತ ಹುಡುಗನಿಗೆ ಇಸ್ಲಾಂ ಸ್ವೀಕರಿಸಲು ಆಮಿಷ ತೋರಿಸಲಾಯಿತು. ಈ ಪ್ರಕರಣದಲ್ಲಿ ಅಪ್ರಾಪ್ತ ಹುಡುಗನ ಪೋಷಕರು ಮೇ 30 ರಂದು ಕವಿ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮತಾಂತರದ ಕಪಿಮುಷ್ಟಿಯಲ್ಲಿ ಇಲ್ಲಿಯವರೆಗೆ 3 ಹಿಂದೂ ಮತ್ತು 1 ಜೈನ ಹುಡುಗ ಸಿಲುಕಿದ್ದಾನೆ. ಅವರ ಬ್ರೈನ್ ವಾಶ್ ಮಾಡಿ ಅವರಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಮಾಡಲಾಗಿದೆ. ಇದರಲ್ಲಿ ಮತಾಂತರದ ಮತ್ತಷ್ಟು ಪ್ರಕರಣಗಳು ಹೊರಬರಬಹುದು. `ಗೇಮ ಜಿಹಾದ’ (ಜಿಹಾದ ಆಟ) ಪ್ರಕರಣದಲ್ಲಿ ಅಪ್ರಾಪ್ತ ಹುಡುಗರು ಮತಾಂತರಗೊಂಡಿರುವ ದೊಡ್ಡ ಅಂಕಿ ಅಂಶ ಹೊರಗೆ ಬರಬಹುದು. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಇಂತಹ ಘಟನೆಗಳ ವಿಷಯದಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ ಪಕ್ಷ ಸಮಾಜವಾದಿ ಪಕ್ಷ, ಬಸಪ ಪ್ರಗತಿ(ಅಧೋ)ಪರರು, ಜಾತ್ಯತೀತವಾದಿಗಳು ಅಥವಾ ಮುಸ್ಲಿಂ ಸಂಘಟನೆಗಳು ಬಾಯಿ ಬಿಡುವುದಿಲ್ಲ ಎನ್ನುವುದನ್ನು ಗಮನಿಸಬೇಕು !
  • ಹಿಂದುತ್ವನಿಷ್ಠ ಸರಕಾರದ ರಾಜ್ಯದಲ್ಲಿ ಮತಾಂಧರು ಈ ರೀತಿ ಧೈರ್ಯವನ್ನು ತೋರಿಸಬಾರದೆಂದು ಇಂತಹವರಿಗೆ ಕಠಿಣ ಶಿಕ್ಷೆಯಾಗಲು ಸರಕಾರವು ಪ್ರಯತ್ನಿಸಬೇಕು !
  • ಮತಾಂತರ ವಿರೋಧಿ ಕಾನೂನಿನ ಆವಶ್ಯಕತೆಯನ್ನು ಗಮನಕ್ಕೆ ತಂದುಕೊಡುವ ಘಟನೆ !