ಕಳೆದ ವಾರದಲ್ಲಿ ದರೋಡೆಕೋರರು ಮತ್ತು ಕಳ್ಳಸಾಗಾಣಿಕೆದಾರರು ೫೦ ಸಾವಿರ ಕೋಟಿ ರೂಪಾಯಿಗಳ ೨ ಸಾವಿರ ರೂಪಾಯಿಯ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ !

ನ್ಯಾಯವಾದಿ ಶ್ರೀ. ಅಶ್ವಿನಿಕುಮಾರ್ ಉಪಾಧ್ಯಾಯರವರ ದಾವೆ !

ನವ ದೆಹಲಿ – ೨ ಸಾವಿರ ರೂಪಾಯಿ ನೋಟುಗಳ ಕುರಿತ ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ತಕ್ಷಣವೇ ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಈ ಅರ್ಜಿಯ ಮೂಲಕ ೨ ಸಾವಿರ ರೂಪಾಯಿಯ ನೋಟುಗಳನ್ನು ಬದಲಾಯಿಸುವಾಗ ಗುರುತಿನ ಚೀಟಿಯನ್ನು ಪರಿಶೀಲಿಸುವಂತೆ ಒತ್ತಾಯಿಸಲಾಗಿತ್ತು. ಅದನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಭಾಜಪದ ಮುಖಂಡ ಹಾಗೂ ನ್ಯಾಯವಾದಿ ಶ್ರೀ. ಅಶ್ವಿನಿಕುಮಾರ್ ಉಪಾಧ್ಯಾಯ ಅವರು ಈ ಅರ್ಜಿ ಸಲ್ಲಿಸಿದ್ದರು. ದರೋಡೆಕೋರರು ಮತ್ತು ಕಳ್ಳಸಾಗಾಣಿಕೆದಾರರು ಕಳೆದ ವಾರದಲ್ಲಿ ೫೦೦೦೦ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ ಎಂದು ವಕೀಲ ಉಪಾಧ್ಯಾಯರು ಹೇಳಿದ್ದಾರೆ. ಈ ಮೂಲಕ ಎಲ್ಲಾ ಕಪ್ಪುಹಣವನ್ನು ಬಿಳುಪು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.