೧೫ ದಿನಗಳು ಕಳೆದರೂ ಆಗ್ರಾದಲ್ಲಿನ ಪುರಾತನ ಶ್ರೀರಾಮ ದೇವಸ್ಥಾನದಿಂದ ಕಳುವಾದ  ವಿಗ್ರಹಗಳ ಕುರುಹು ಇಲ್ಲ !

ಆಗ್ರಾ (ಉತ್ತರ ಪ್ರದೇಶ) – ೧೫ ದಿನಗಳ ಹಿಂದೆ ಇಲ್ಲಿನ ಶ್ರೀರಾಮ ದೇವಸ್ಥಾನದಿಂದ ೮ ಲೋಹದ ಮತ್ತು ಕೆಲವು ಕಲ್ಲಿನ ವಿಗ್ರಹಗಳ ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸರಲ್ಲಿ ದೂರು ನೀಡಲಾಗಿದ್ದರೂ ಇನ್ನೂ ವಿಗ್ರಹ ಹಾಗೂ ಕಳ್ಳರ ಸುಳಿವು ಸಿಕ್ಕಿಲ್ಲ. ಸ್ಥಳೀಯರು, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ದೇಶದಾದ್ಯಂತ ಪ್ರಸಿದ್ಧವಾಗಿರುವ ಆಗ್ರಾದ ಸಾಂಪ್ರದಾಯಿಕ ಐತಿಹಾಸಿಕ ದಸರಾವು ಇದೇ ಶ್ರೀರಾಮ ದೇವಸ್ಥಾನದಿಂದ ಆರಂಭವಾಗಿ ನಗರದಲ್ಲಿ ರಾವಣನ ಪ್ರತಿಮೆಯನ್ನು ಸುಡುವುದರೊಂದಿಗೆ ಕೊನೆಗೊಳ್ಳುತ್ತದೆ.

ದೇವಸ್ಥಾನದ ಸುತ್ತಲೂ ಮತಾಂಧ ಮುಸಲ್ಮಾನರ ಅಂಗಡಿಗಳಿವೆ !

ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬರುವ ಭಕ್ತರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸಲಾಗುತ್ತಿದೆ. ಅವರನ್ನು ಪೂಜೆ ಮಾಡದಂತೆ ತಡೆಯುತ್ತಾರೆ. ಇದೆಲ್ಲವನ್ನೂ ಮಾಡುತ್ತಿರುವುದು ದೇವಸ್ಥಾನದ ಜಾಗವನ್ನು ಕಬಳಿಸುವ ಮತಾಂಧ ಮುಸಲ್ಮಾನ  ಅಂಗಡಿಕಾರರೇ ಹೊರತು ಬೇರಾರೂ ಅಲ್ಲ. ಮತಾಂಧ ಮುಸಲ್ಮಾನ ಬಾಡಿಗೆದಾರರು ಇಡೀ ದೇವಸ್ಥಾನದ ಮೇಲೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆ. ಅವರು ದೇವಸ್ಥಾನದಿಂದ ಬರುವ ಆದಾಯವನ್ನೂ ಕಬಳಿಸುತ್ತಿದ್ದಾರೆ. ವಿಗ್ರಹ ನಾಪತ್ತೆಯಾಗಿರುವ ಬಗ್ಗೆ ಅವರ ಮೇಲೆಯೇ ಸಂದೇಹ ವ್ಯಕ್ತಪಡಿಸಲಾಗುತ್ತಿದೆ.

ಸಂಪಾದಕರ ನಿಲುವು

ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಪರಿಸ್ಥಿತಿ ಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !