ಕದ್ದ ನಂತರ, ಕಳ್ಳನಿಗೆ ಅನೇಕ ಸಮಸ್ಯೆಗಳು ಎದುರಾಯಿತು !

ಭುವನೇಶ್ವರ (ಒಡಿಶಾ) – ಇಲ್ಲಿನ ಗೋಪಿನಾಥಪುರ ಗ್ರಾಮದಲ್ಲಿರುವ ಗೋಪಿನಾಥ ದೇವಾಲಯದಲ್ಲಿ ೨೦೧೪ರಲ್ಲಿ ಕಳ್ಳತನವಾಗಿತ್ತು. ದೇವರ ಬೆಳ್ಳಿ ಕೊಳಲು, ಛತ್ರಿ, ಕಿರೀಟ, ಬೆಳ್ಳಿ ಕಣ್ಣುಗಳು, ತಟ್ಟೆ, ಗಂಟೆಗಳನ್ನು ಕಳ್ಳರು ಕದ್ದೊಯ್ದಿದ್ದರು. ಆ ಸಮಯದಲ್ಲಿ ಗ್ರಾಮಸ್ಥರು ಲಿಂಗರಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ನಂತರ ತನಿಖೆಯನ್ನು ಪ್ರಾರಂಭಿಸಿದರು; ಆದರೆ ಕಳೆದ ೯ ವರ್ಷಗಳಿಂದ ಅವರ ಪತ್ತೆಯಾಗಲಿಲ್ಲ. ಇದೀಗ ೯ ವರ್ಷಗಳ ನಂತರ ಸ್ವತಃ ಈ ಕಳ್ಳನೇ ದೇವಸ್ಥಾನದಿಂದ ಕದ್ದ ಎಲ್ಲಾ ವಸ್ತುಗಳನ್ನು ವಾಪಸ್ ನೀಡಿದ್ದಾನೆ. ಅವನು ತನ್ನನ್ನು ತಾನೇ ದಂಡಿಸಿಕೊಂಡನು. ೧೦೧ ದಂಡವನ್ನೂ ಪಾವತಿಸಿದ್ದು, ೨೦೧ ರೂಪಾಯಿಯ ದಕ್ಷಿಣೆಯನ್ನು ನೀಡಿದ್ದಾನೆ. ಆತ ಒಂದು ಪತ್ರವನ್ನು ಬರೆದಿದ್ದಾನೆ. ಅದರಲ್ಲಿ ದೇವರ ಒಡವೆಗಳನ್ನು ಕದ್ದು ತಾನು ಎದುರಿಸಿದ ಕಷ್ಟಗಳ ಬಗ್ಗೆ ಬರೆದುಕೊಂಡಿದ್ದಾನೆ. ಈ ಕಾರಣದಿಂದಲೇ ದೇವರ ಆಭರಣಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದೇನೆ ಎಂದು ಆತ ಬರೆದಿದ್ದಾನೆ. ಕಳ್ಳನ ಗುರುತು ಇನ್ನೂ ಪತ್ತೆಯಾಗಲಿಲ್ಲ.
Re-Up: Thief repents, returns silver ornaments stolen from temple 9 years ago https://t.co/efVLxwifXy
— OTV (@otvnews) May 15, 2023
ಸಂಪಾದಕರ ನಿಲುವುಈ ಬಗ್ಗೆ ಅಂನಿಸ ಮತ್ತು ಬುದ್ಧಿವಾದಿಗಳು ಏನು ಹೇಳುತ್ತಾರೆ ? |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !