ಕೇರಳದಲ್ಲಿ ಲವ್ ಜಿಹಾದಿನ ಘಟನೆ ನಡೆಯುತ್ತಿದ್ದರೆ, ರಾಜ್ಯ ಸರಕಾರ ಅದನ್ನು ತಡೆಯಬೇಕು !

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇವರ ‘ದ ಕೇರಳ ಸ್ಟೋರಿ’ ಸಿನೆಮಾದ ಬಗ್ಗೆ ಹೇಳಿಕೆ

ತಿರುವನಂತಪುರ (ಕೇರಳ) – ನಾನು ‘ದ ಕೇರಳ ಸ್ಟೋರಿ’ ಈ ಸಿನೆಮಾ ನೋಡಿಲ್ಲ; ಆದರೆ ಶಾಂತಿಯುತವಾಗಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಯಾರದಿದೆ ಅವರು ಅದರ ಕಡೆ ಗಮನ ನೀಡಬೇಕು. ಕೇರಳದಲ್ಲಿ ‘ಲವ್ ಜಿಹಾದ್’ ನ ಘಟನೆಗಳು ನಡೆಯುತ್ತಿದ್ದರೆ, ಅದರ ವಿರುದ್ಧ ಕ್ರಮ ಕೈಗೊಳ್ಳುವ ಜವಾಬ್ದಾರಿ ರಾಜ್ಯ ಸರಕಾರದ್ದಾಗಿದೆ. ‘ದ ಕೆರಳ ಸ್ಟೋರಿ’ ಇದು ಪ್ರಚಾರದ ಉದ್ದೇಶದಿಂದ ನಿರ್ಮಿಸಿರುವ ಸಿನೆಮಾ ಇದೆ’ ಈ ಆರೋಪವನ್ನು ನಾನು ಚರ್ಚಿಸಲು ಇಚ್ಚಿಸುವುದಿಲ್ಲ, ಎಂದು ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಸಿನೆಮಾದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.