ಪಾಕಿಸ್ತಾನದಿಂದ ಬಂದ ನಿರಾಶ್ರಿತ ಹಿಂದೂಗಳ ಮನೆ ಜೋಧಪೂರ ಪ್ರಾಧಿಕರಣದಿಂದ ನೆಲಸಮ !

ನಿರಾಶ್ರಿತ ಹಿಂದೂಗಳ ಮನೆಗಳು ಜೋಧಪುರ ವಿಕಾಸ ಪ್ರಾಧಿಕರಣವು ಬುಲ್ಡೋಜರ ಮೂಲಕ ನೆಲಸಮ ಮಾಡಿದೆ

ಜೋಧಪುರ (ರಾಜಸ್ಥಾನ) – ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಇಲ್ಲಿಯ ನಿರಾಶ್ರಿತ ಹಿಂದೂಗಳ ೨೦೦ ಮನೆಗಳು ಜೋಧಪುರ ವಿಕಾಸ ಪ್ರಾಧಿಕರಣವು ಬುಲ್ಡೋಜರ ಮೂಲಕ ನೆಲಸಮ ಮಾಡಿದೆ. ಹಿಂದೂಗಳ ಪ್ರಕಾರ ,ಅವರು ಈ ಭೂಮಿಯನ್ನು ಖರೀದಿಸಿ ಅಲ್ಲಿ ಕಟ್ಟಡ ಕಟ್ಟಿದ್ದರು. ಈ ಹಿಂದೂಗಳಿಗೆ ದೀರ್ಘಾವಧಿ ಮಿತಿಯ ವಿಸಾ ದೊರೆತಿದೆ ; ಆದರೆ ಅವರಿಗೆ ಇಲ್ಲಿಯವರೆಗೆ ಭಾರತದ ಪೌರತ್ವ ದೊರೆತಿಲ್ಲ. ಸರಕಾರಿ ಅಧಿಕಾರಿಗಳ ಪ್ರಕಾರ, ಅವರು ಇಲ್ಲಿ ಅನುಮತಿ ಇಲ್ಲದೆ ಕಟ್ಟಡ ಕಟ್ಟಿದ್ದಾರೆ, ಅವರ ಬಳಿ ಭೂಮಿಯ ಬಗ್ಗೆ ಯಾವುದೇ ದಾಖಲೆಗಳು ಇರಲಿಲ್ಲ.

ಸಂಪಾದಕರ ನಿಲುವು

  • ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ಪಾಕಿಸ್ತಾನದಿಂದ ಜೀವಭಯದಿಂದ ಭಾರತಕ್ಕೆ ಬಂದಿರುವ ನಿರಾಶ್ರಿತ ಹಿಂದೂಗಳಿಗೆ ಎರಡನೇ ಪಾಕಿಸ್ತಾನದಲ್ಲಿ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
  • ಹಲವೆಡೆ, ಎಲ್ಲಾ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು, ನಾಯಕರು ಇತ್ಯಾದಿಗಳು ಕಾನೂನುಬಾಹಿರ ಅಲ್ಪಸಂಖ್ಯಾತರ ಕಾಮಗಾರಿಗಳನ್ನು ಕೆಡವಲು ಹೋದ ತಂಡವನ್ನು ತಡೆಯಲು ಮತ್ತು ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ದಾಖಲಿಸಲು ಧಾವಿಸುತ್ತಾರೆ; ಆದರೆ ನಿರಾಶ್ರಿತ ಹಿಂದೂಗಳ ಮನೆಗಳಿಗೆ ಯಾರೂ ಓಡುತವುದಿಲ್ಲ ಎಂಬುದನ್ನು ಗಮನಿಸಿ!