ಬಂಗಾಲದಲ್ಲಿ ದೇವಸ್ಥಾನದ ಹೊರಗೆ ನೇಣು ಬಿಗಿದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ !

ಭಾಜಪದಿಂದ ಪೊಲೀಸ ಮಹಾಸಂಚಾಲಕರಿಗೆ ಯೋಗ್ಯ ತನಿಖೆ ನಡೆಸುವಂತೆ ಆಗ್ರಹ

ಕೊಲಕಾತಾ (ಬಂಗಾಲ) – ಬಂಗಾಲದ ಬೀರಭೂಮ ಜಿಲ್ಲೆಯಲ್ಲಿನ ಪುರಂದರಪುರದ ಬೇಹಿರಾ ಕಾಲಿ ದೇವಸ್ಥಾನದ ಹೊರಗೆ ಭುವನ ಬಾಬಾ ಎಂಬ ಓರ್ವ ಸಾಧುವಿನ ಮೃತ ದೇಹ ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ರಾಜ್ಯದ ವಿರೋಧಿ ಪಕ್ಷದ ನಾಯಕ ಮತ್ತು ಭಾಜಪದ ನಾಯಕ ಸುವೆಂದು ಅಧಿಕಾರಿ ಇವರು ಟ್ವೀಟ್ ಮೂಲಕ ನೀಡಿದ್ದಾರೆ. ಅದರಲ್ಲಿ ಛಾಯಾಚಿತ್ರಗಳು ಕೂಡ ಪೋಸ್ಟ್ ಮಾಡಿದ್ದಾರೆ.

ಸುವೆಂದು ಅಧಿಕಾರಿ ಇವರು, ಅಘೋರಿ ಪಂಥ ಸಾಧುವಿನ ಮೃತ್ಯುವಿನ ಆಘಾತಕಾರಿ ವಾರ್ತೆಯಿಂದ ಜಗತ್ತಿನಾದ್ಯಂತದ ನೊಂದಿರುವ ಅನೇಕ ಹಿಂದೂ ಸಾಧುಗಳು ಮತ್ತು ಆಧ್ಯಾತ್ಮಿಕ ಗುರುಗಳು ನೂರಾರು ಕರೆಗಳು ನನಗೆ ಬರುತ್ತಿವೆ. ನಾನು ರಾಜ್ಯದ ಪೊಲೀಸ ಮಹಾಸಂಚಾಲಕರಾದ ಎಚ್.ಕೆ. ದ್ವಿವೇದಿ ಇವರಲ್ಲಿ, ಅವರು ಈ ಪ್ರಕರಣದ ಯೋಗ್ಯ ತನಿಖೆ ನಡೆಸುವಂತೆ ಹಾಗೂ ಕಾರ್ಯಕಾರಿ ದಂಡಾಧಿಕಾರಿಯ ಉಪಸ್ಥಿತಿಯಲ್ಲಿ ಶವಪರೀಕ್ಷೆಯ ಚಿತ್ರೀಕರಣ ನಡೆಸಬೇಕು. ಇದು ಅಪರಾಧವಾಗಿದ್ದಲ್ಲಿ ಅಪರಾಧಿಯನ್ನು ಬೇಗನೆ ಬಂಧಿಸಬೇಕು ಎಂದು ವಿನಂತಿಸುತ್ತೇನೆ ಎಂದು ಹೇಳಿದರು.