ಪಾಕಿಸ್ತಾನದಲ್ಲಿನ ಪವಿತ್ರ ಗುರುದ್ವಾರದ ದರ್ಶನಕ್ಕಾಗಿ ಹೋದ ಭಾರತೀಯರನ್ನು ಖಲಿಸ್ತಾನಕ್ಕಾಗಿ ಖಲಿಸ್ತಾನಿ ಭಯೋತ್ಪಾದಕರಿಂದ ಪ್ರಚೋದನೆ !

‘ಸಿಖ್ಕರಿಗಾಗಿ ಪ್ರತ್ಯೇಕ ದೇಶ ಬೇಕು’ ! (ಅಂತೆ)

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿರುವ ಸಿಖ್ಕರ ಪವಿತ್ರ ಗುರುದ್ವಾರವಾದ ಶ್ರೀ ಪಂಜಾ ಸಾಹಿಬ್‌ನಲ್ಲಿ ಪಾಕಿಸ್ತಾನದಲ್ಲಿ ನೆಲೆಸಿರುವ ಖಲಿಸ್ತಾನಿ ಭಯೋತ್ಪಾದಕ ಗೋಪಾಲ್ ಸಿಂಗ್ ಚಾವ್ಲಾ ಇವನು, ದರ್ಶನಕ್ಕಾಗಿ ಬಂದಿದ್ದ ಭಾರತೀಯ ಸಿಖ್ಕರನ್ನು ಉದ್ದೇಶಿಸಿ ಖಲಿಸ್ತಾನಕ್ಕಾಗಿ ಅವರನ್ನು ಪ್ರಚೋದಿಸಿದನು. ‘ಸಿಖ್ಕರಿಗಾಗಿ ಸ್ವತಂತ್ರ ದೇಶ ಬೇಕು’ ಎಂದು ಪ್ರಚೋದನಕಾರಿ ಕರೆ ನೀಡಿದನು. ಆತ ಅಲ್ಲಿ ಉಪಸ್ಥಿತರಿಗೆ ‘ಖಾಲಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಹಾಕಲು ಒತ್ತಾಯಿಸಿದನು.

‘ಪಾಕಿಸ್ತಾನ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ’ ಮತ್ತು ‘ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್’ ಅವರು ಗುರುದ್ವಾರದಲ್ಲಿ ಬೈಸಾಖಿ (ಸಿಖ್ ಹಬ್ಬ) ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಗೋಪಾಲ್ ಸಿಂಗ್ ಚಾವ್ಲಾನು, ನಾವು ಶಿರೋಮಣಿ ಸಮಿತಿಯವರು, ಆದರೂ ನಾವು ಸಿಖ್ಕರಾಗಿದ್ದೇವೆ. ನಾವು ದೆಹಲಿ ಸಮಿತಿಯಲ್ಲಿದ್ದೇವೆ, ಆದರೂ ನಾವು ಸಿಖ್ಕರಾಗಿದ್ದೇವೆ. ನಾವು ಬಹಿರಂಗವಾಗಿ ಧ್ವನಿ ಎತ್ತುವಂತಿಲ್ಲ; ಆದರೂ ನಾವು ಸಿಖ್ಕರಾಗಿದ್ದೇವೆ. ನಮ್ಮದೇ ಆದ ದೇಶವನ್ನು ಹೊಂದಲು ನಾವು ಮನಃ ಪೂರ್ವಕವಾಗಿ ಬಯಸಿದ್ದೇವೆ. ಯಾರು ಗುರುವಿನ ಸಿಖ್ಕರಿದ್ದಾರೆ, ಅವರು ನನ್ನ ‘ಖಾಲಿಸ್ತಾನ್ ಜಿಂದಾಬಾದ್’ ಘೋಷಣೆಯಲ್ಲಿ ಭಾಗವಹಿಸುತ್ತಾರೆ.’ ಎಂದು ಹೇಳಿದ.