ಕಾಂಗ್ರೆಸ್ ನಾಯಕ ಸಚಿನ್ ಪಾಯಲಟ್ ಇವರ ಸ್ವಪಕ್ಷದ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ

ಫಲಕದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇವರ ಛಾಯಾಚಿತ್ರಗಳು ಇರಲಿಲ್ಲ !

ಜೈಪುರ (ರಾಜಸ್ಥಾನ) – ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನ ನಾಯಕ ಸಚಿನ್ ಪಾಯಲಟ್ ಇವರು ರಾಜ್ಯದಲ್ಲಿನ ಅವರ ಪಕ್ಷದ ಸರಕಾರದ ವಿರುದ್ಧ ಹುತಾತ್ಮ ಸ್ಮಾರಕದ ಹತ್ತಿರ ಮೌನ ಆಚರಿಸುತ್ತಾ ಪ್ರತಿಭಟನೆ ನಡೆಸಿದರು. ಸರಕಾರದಿಂದ ಭ್ರಷ್ಟಾಚಾರಿಗಳ ಮೇಲೆ ಕ್ರಮ ಕೈಗೊಳ್ಳದಿರುವುದು ಮತ್ತು ಭಾಜಪದ ಭ್ರಷ್ಟಾಚಾರಿ ನಾಯಕರನ್ನು ರಕ್ಷಿಸುತ್ತಿದ್ದಾರೆಂದು ಆರೋಪ ಮಾಡಿದ್ದಾರೆ.

ಈ ಸ್ಥಳದಲ್ಲಿ ಹಾಕಲಾಗಿರುವ ಫಲಕದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ಸಿನ ಯಾವುದೇ ನಾಯಕರ ಛಾಯಾಚಿತ್ರಗಳು ಇರಲಿಲ್ಲ. ಪ್ರತಿಭಟನಾ ಸ್ಥಳದಲ್ಲಿ ಪಾಯಲಟ್ ಇವರ ಬೆಂಬಲಿರು ದೇಶ ಭಕ್ತಿ ಹಾಡಿಗೆ ಕುಣಿಯುತ್ತಾ ಪಾಯಲಟ್ ಇವರನ್ನು ಬೆಂಬಲಿಸಿ ಘೋಷಣೆ ನೀಡುತ್ತಿದ್ದರು.

(ಸೌಜನ್ಯ : First India News)