ಗಲಭೆ ತಡೆಯಲು ಮಾನ್ಯ ಯೋಗಿ ಆದಿತ್ಯನಾಥ ಅವರ ನೀತಿಯನ್ನು ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು ! – ಶ್ರೀ. ಸಮೀರ ಲೋಖಂಡೆ, ಉಪಾಧ್ಯಕ್ಷ ಬಿಜೆಪಿ ಯುವ ಮೋರ್ಚಾ, ಸಂಭಾಜಿನಗರ

ಹಿಂದೂಗಳ ಮೇಲೆ ‘ಹೇಟ್ ಸ್ಪೀಚ್’ನ ಆರೋಪ ಹಾಗಾದರೇ ರಾಮನವಮಿ ಗಲಭೆಕೋರರ ಬಗ್ಗೆ ಮೌನವೇಕೆ ? ಈ ವಿಷಯದ ಕುರಿತು ‘ವಿಶೇಷ ಸಂವಾದ’ !

ಶ್ರೀ. ಸಮೀರ ಲೋಖಂಡೆ

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಗಲಭೆ ಒಂದು ಪಿತೂರಿಯಾಗಿದ್ದು, ‘ಔರಂಗಾಬಾದ್’ ಹೆಸರನ್ನು ಬೆಂಬಲಿಸುವವರ ಸಿದ್ಧಾಂತವೇ ಇದಕ್ಕೆ ಕಾರಣಕರ್ತರಾಗಿದ್ದಾರೆ. ಇದು ಔರಂಗಜೇಬನ ‘ದಾರುಲ್ ಇಸ್ಲಾಂ’ (ಇಸ್ಲಾಂ ಆಳ್ವಿಕೆ) ಗುರಿಯನ್ನು ಸಾಧಿಸುವ ಹೋರಾಟವಾಗಿದೆ. ಹಿಂದೂಗಳ ಏಕೀಕರಣ ಮತ್ತು ಹಿಂದೂಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸಬೇಕು. ಇಂತಹ ಗಲಭೆಗಳನ್ನು ತಡೆಯಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೀತಿಯನ್ನು ಕೇಂದ್ರ ಮತ್ತು ಎಲ್ಲಾ ರಾಜ್ಯಗಳ ಸರಕಾರವು ಜಾರಿಗೆ ತರಬೇಕು ಎಂದು ಸಂಭಾಜಿನಗರದಲ್ಲಿ ಭಾಜಪ ಯುವ ಮೋರ್ಚಾದ ಉಪಾಧ್ಯಕ್ಷ ಶ್ರೀ. ಸಮೀರ ಲೋಖಂಡೆ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದೂಗಳ ಮೇಲೆ ‘ಹೇಟ್ ಸ್ಪೀಚ್’ನ ಆರೋಪ ಹಾಗಾದರೇ ರಾಮನವಮಿ ಗಲಭೆಕೋರರ ಬಗ್ಗೆ ಮೌನವೇಕೆ ?’ ಈ ವಿಷಯದ ಕುರಿತ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

‘ಸುದರ್ಶನ್ ಸ್ಯೂಸ್’ನ ಸಂಭಾಜಿನಗರದ ಪ್ರತಿನಿಧಿ ಬಾಬುಲಾಲ್ ರಾಠೌರ್ ಇವರು ಮಾತನಾಡಿ, ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಗಲಭೆ ಪೂರ್ವಯೋಜಿತವಾಗಿತ್ತು. ಗಲಭೆಕೋರರು ಭಾರೀ ಪ್ರಮಾಣದ ಕಲ್ಲುಗಳು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಹೊಂದಿದ್ದರು. ಪೊಲೀಸರ ಎದುರೇ ಪೊಲೀಸ್ ವಾಹನಗಳನ್ನು ಸುಟ್ಟರೂ ಪೊಲೀಸರು ಲಾಠಿ ಚಾರ್ಜ್ ಸಹ ಮಾಡಲಿಲ್ಲ. ಪೊಲೀಸರು ಗಲಭೆಯ ಸಾಕ್ಷ್ಯ ನಾಶಪಡಿಸಲು ಯತ್ನಿಸಿದರು. ಗಲಭೆಯಲ್ಲಿ ಸುಟ್ಟು ಕರಕಲಾದ ವಾಹನಗಳು ಪಂಚನಾಮೆ ಇಲ್ಲದೆ ತೆರವುಗೊಳಿಸಿದರು, ರಸ್ತೆಗಳು ಸ್ವಚ್ಛಗೊಳಿಸಿದರು. ಎಂ.ಐ.ಎಂ.ನ ಸಂಸದ ಇಮ್ತಿಯಾಜ್ ಜಲೀಲ್ ಇವರಿಗೆ ಗಲಭೆಯ ಮಾಹಿತಿ ಪೊಲೀಸರಿಗಿಂತ ಮೊದಲೇ ಹೇಗೆ ಸಿಕ್ಕಿತು ? ಗಲಭೆ ಯೋಜನೆಯಲ್ಲಿ ಇಮ್ತಿಯಾಜ್ ಜಲೀಲ್ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು. ಗಲಭೆಯ ನಂತರ ಸುಟ್ಟ ವಾಹನಗಳ ಫೋಟೋ ಮತ್ತು ವಿಡಿಯೋ ತೆಗೆಯಲು ಪತ್ರಕರ್ತರಿಗೆ ಪೊಲೀಸರು ಏಕೆ ಅವಕಾಶ ನೀಡಲಿಲ್ಲ? ಸತ್ಯವನ್ನು ಮರೆಮಾಚಲು ಏಕೆ ಪ್ರಯತ್ನಿಸಲಾಯಿತು ? ಈ ಪ್ರಶ್ನೆಗಳು ಗಂಭೀರವಾಗಿವೆ.
ಪಶ್ಚಿಮ ಬಂಗಾಲದ ಹಾವಡಾ ಇಲ್ಲಿಯ ‘ಭಾರತೀಯ ಸಾಧಕ ಸಮಾಜ’ದ ಶ್ರೀ. ಅನಿರ್ಬಾನ್ ನಿಯೊಗಿ ಇವರು ಮಾತನಾಡುತ್ತಾ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಲ್ಲಿಯ ಗಲಭೆಗೆ ಅನುಗುಣವಾಗಿ ನೀಡಿದ ಹಿಂದೂವಿರೋಧಿ ಹೇಳಿಕೆಯಿಂದಲೇ ಅದೂ ವಿಶೇಷವಾಗಿ ಹಿಂದೂ ಸಮುದಾಯಕ್ಕೆ ಸಾಕಷ್ಟು ಹಾನಿ ಆಯಿತು. ಹೇಳಿದ್ದಾರೆ. ಮಮತಾ ಬ್ಯಾನರ್ಜಿಯವರು ಮುಖ್ಯಮಂತ್ರಿಯಾಗಿ ಹೇಳಿಕೆಗಳನ್ನು ನೀಡುವಾಗ ಪ್ರಜ್ಞಾಪೂರ್ವಕವಾಗಿ ಹೇಳಿಕೆ ನೀಡಬೇಕಿತ್ತು. ಮುಖ್ಯಮಂತ್ರಿಗಳ ಹೇಳಿಕೆಯಿಂದ ಗಲಭೆಕೋರರ ವಿರುದ್ಧ ಕ್ರಮಕೈಗೊಳ್ಳಲು ಪೊಲೀಸ್ ಪಡೆ ಕೂಡ ಹೆದರುತ್ತಿತ್ತು. ಪಶ್ಚಿಮ ಬಂಗಾಳದ ಗಲಭೆಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಬೇಕು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ಸತೀಶ ಕೊಚರೇಕರ್ ಇವರು ಮಾತನಾಡುತ್ತಾ, ಗಲಭೆಕೋರರಿಗೆ ಗಲಭೆಯ ತರಬೇತಿ ನೀಡಲಾಗಿದೆ ಎಂಬುದನ್ನು ರಾಮ ನವಮಿ ಗಲಭೆ ತೋರಿಸುತ್ತದೆ. ತಮ್ಮ ಪ್ರಭಾವವನ್ನು ಹಾಗೇ ಉಳಿಸಿಕೊಳ್ಳಲು, ತಾವು ಎಷ್ಟು ಆಕ್ರಮಣಕಾರಿ ಎಂಬುದನ್ನು ತೋರಿಸಲು, ಹಿಂದೂ ಸಮಾಜವನ್ನು ನಿರಂತರ ಭಯದ ನೆರಳಿನಲ್ಲಿ ಬದುಕುವಂತೆ ಮಾಡಲು ಇದು ಮತಾಂಧರ ಪ್ರಯತ್ನವಾಗಿದೆ. ದೇಶವನ್ನು ವಿಭಜಿಸಲು ‘ಮಿನಿ ಪಾಕಿಸ್ತಾನ’ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಹಿಂದೂಗಳು ಹನುಮಂತನಂತೆ ಬಲೋಪಾಸನೆ ಮಾಡುವುದು ಕಾಲಕ್ಕೆ ಅಗತ್ಯವಾಗಿದೆ. ಸಂವಿಧಾನವು ಪ್ರತಿಯೊಬ್ಬರಿಗೂ ಆತ್ಮರಕ್ಷಣೆಯ ಹಕ್ಕನ್ನು ನೀಡಿದ್ದು, ಅದನ್ನು ಚಲಾಯಿಸಬೇಕು ಎಂದು ಹೇಳಿದರು.