‘ವಂದೇ ಭಾರತ್’ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಿದವರಿಗೆ ೫ ವರ್ಷ ಶಿಕ್ಷೆ !

ನವದೆಹಲಿ – ರೈಲುಗಳ ಮೇಲೆ ಕಲ್ಲು ತೂರಾಟ ಮಾಡುವುದು ಅಪರಾಧವಾಗಿದೆ. ತಪ್ಪಿತಸ್ಥರ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ ೧೫೩ ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ೫ ವರ್ಷಗಳವರೆಗೆ ಶಿಕ್ಷೆಯನ್ನು ವಿಧಿಸಲಾಗಿದೆ. ಭಾರತದಲ್ಲಿ ‘ವಂದೇ ಭಾರತ್’ ಎಕ್ಸ್ ‌ಪ್ರೆಸ್ ಪ್ರಾರಂಭವಾದಾಗಿನಿಂದ, ಪ್ರಯಾಣಿಕರಿಗೆ ಪ್ರವಾಸವು ತುಂಬಾ ಸುಲಭ ಮತ್ತು ಆರಾಮದಾಯಕವಾಗಿದೆ; ಆದರೆ ಕೇಂದ್ರ ಸರಕಾರವು ‘ವಂದೇ ಭಾರತ್’ ಎಕ್ಸ್ ‌ಪ್ರೆಸ್ ಅನ್ನು ಹೆಚ್ಚಿನ ಮಾರ್ಗಗಳಲ್ಲಿ ನಡೆಸಿದಂತೆ ಎಕ್ಸ್ ‌ಪ್ರೆಸ್ ಮೇಲೆ ಕಲ್ಲು ತೂರಾಟದ ಘಟನೆಗಳು ಹೆಚ್ಚುತ್ತಿವೆ. ಈ ಕುರಿತು ‘ವಂದೇ ಭಾರತ್’ ಎಕ್ಸ್ ‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಿದರೆ ೫ ವರ್ಷಗಳ ಜೈಲು ಶಿಕ್ಷೆ ವಿಧಿಸುವುದು ಎಂದು ದಕ್ಷಿಣ ಮಧ್ಯ ರೈಲ್ವೆ ಇತ್ತೀಚೆಗೆ ಎಚ್ಚರಿಕೆ ನೀಡಿದೆ.

‘ವಂದೇ ಭಾರತ್’ ಎಕ್ಸ್ ‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ರೈಲ್ವೇ ರಕ್ಷಣಾ ಪಡೆ ಇದುವರೆಗೆ ೩೯ ಅಪರಾಧಿಗಳನ್ನು ಬಂಧಿಸಿದೆ. ದಕ್ಷಿಣ ಪಶ್ಚಿಮ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಜನವರಿ ೨೦೨೩ ರಲ್ಲಿ ೨೧ ಮತ್ತು ಫೆಬ್ರವರಿ ೨೦೨೩ ರಲ್ಲಿ ೧೩ ಕಲ್ಲು ತೂರಾಟ ಪ್ರಕರಣಗಳು ವರದಿಯಾಗಿವೆ.