
ಇಸ್ಲಾಮಾಬಾದ (ಪಾಕಿಸ್ತಾನ) – ಬೇಡಿಕೆಯನುಸಾರ ಬಿರ್ಯಾನಿ ತಯಾರಿಸುವ ಹಿಂದೂ ಅಂಗಡಿಕಾರನನ್ನು ಪೊಲೀಸರು ಥಳಿಸಿದ್ದರಿಂದ ಪೊಲೀಸ ಠಾಣೆಯ ಮುಖ್ಯಾಧಿಕಾರಿಯನ್ನು ಅಮಾನತು ಗೊಳಿಸಿರುವ ಘಟನೆ ಪಾಕಿಸ್ತಾನ ಸಿಂಧ ಪ್ರಾಂತ್ಯದ ಘೋಟಕಿಯಲ್ಲಿ ನಡೆದಿದೆ ; ಆದರೆ ಸ್ಥಳೀಯ ಪ್ರಸಾರ ಮಾಧ್ಯಮಗಳು ಈ ಘಟನೆ ಪಾಕಿಸ್ತಾನದ ಪಂಜಾಬಿನ ಬಹಾವಲಪುರದಲ್ಲಿ ನಡೆದಿದೆಯೆಂದು ತಿಳಿಸಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ವಿಡಿಯೋ ಆಧಾರದಲ್ಲಿ ಸಿಂಧ್ ಮಾನವಾಧಿಕಾರ ಆಯೋಗವು ಹಿರಿಯ ಪೊಲೀಸ ಅಧಿಕಾರಿಗಳಿಗೆ ಪತ್ರ ಬರೆದು ಸಂಬಂಧಿಸಿದ ಪೊಲೀಸರ ಮೇಲೆ ಕ್ರಮ ಕೈಕೊಳ್ಳುವಂತೆ ಮನವಿ ಮಾಡಿದೆ.
Hindu shopkeepers assaulted in Pakistan for ‘violating Ramzan ordinance’ https://t.co/vzUiZIY9yl
— OpIndia.com (@OpIndia_com) March 26, 2023
- ಹಿಂದೂ ಅಂಗಡಿಕಾರ ಬಿರ್ಯಾನಿ ತಯಾರಿಸುತ್ತಿರುವಾಗ ಪೊಲೀಸ ಅಧಿಕಾರಿ ಕಾಬಿಲ ಬಾಯೋ ಪೊಲೀಸ ಸಿಬ್ಬಂದಿಗಳೊಂದಿಗೆ ಅಲ್ಲಿಗೆ ತಲುಪಿ, ರಮಝಾನ ನಿಮಿತ್ತ ಉಪವಾಸ ಮಾಡುವುದರ ಬದಲಾಗಿ ಬಿರ್ಯಾನಿ ತಯಾರಿಸುತ್ತಿದ್ದಾನೆಂದು ಅಂಗಡಿಕಾರ ಮತ್ತು ಅವನ ವಿತರಕನನ್ನು ಥಳಿಸಲು ಪ್ರಾರಂಭಿಸಿದನು. ಅಂಗಡಿಕಾರನು ಉಪವಾಸ ಬಿಡಲು ಗಿರಾಕಿಗಳಿಂದ ಬೇಡಿಕೆ ಬಂದಿದ್ದರಿಂದ ಬಿರ್ಯಾನಿ ತಯಾರಿಸುತ್ತಿರುವುದಾಗಿ ಹೇಳಿದಾಗ ಕಾಬಿಲ್ ಬಾಯೊ ಹಿಂದೂ ಅಂಗಡಿಕಾರನಿಗೆ ಅವನ ಹಿಂದೂ ಧರ್ಮಗ್ರಂಥದ ಶಪಥ ತೆಗೆದುಕೊಳ್ಳುವಂತೆ ಹೇಳಿದನು.
- ಪಾಕಿಸ್ತಾನದ ಮಾಜಿ ನ್ಯಾಯಮೂರ್ತಿ ತಸದ್ದುಕ ಹುಸೈನ ಜಿಲಾನಿಯವರು 19 ಜೂನ 2014 ರಂದು ಪೊಲೀಸ ಅಧಿಕಾರಿ ಕಾಬಿಲ ಭಾಯೊ ಇವನ ವರ್ತನೆ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ವಿರುದ್ಧ ಇದೆಯೆಂದು ಹೇಳಿದ್ದರು.
ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!