ಒಂದು ವರ್ಷದಲ್ಲೇ ತೀರ್ಪು ಪ್ರಕಟ !

ಕಲಿತಲಾಯಿ (ಮಧ್ಯಪ್ರದೇಶ) – ಇಲ್ಲಿಯ ಕಾಡಿನಲ್ಲಿ ನಡೆದ ಸಾಮೂಹಿಕ ಬಲತ್ಕಾರದ ಪ್ರಕರಣದಲ್ಲಿನ ಆರೋಪಿಗಳು ಶೆಹಬಾಜ್, ರಿಯಾಜ್ ಮತ್ತು ಮೋಹಸಿನ್ ಇವರನ್ನು ಶ್ಯೋಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರದೀಪ ಮಿತ್ತಲ ಇವರು ಆರೋಪಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ ಪ್ರತಿಯೊಬ್ಬ ಆರೋಪಿಗೆ ೧೦ ಸಾವಿರ ರೂಪಾಯಿ ದಂಡ ವಿಧಿಸಿದೆ. ವಿಶೇಷವೆಂದರೆ ಒಂದು ವರ್ಷದ ಹಿಂದೆ ಮಾರ್ಚ್ ೧೭, ೨೦೨೨ ರಂದು ಒಬ್ಬ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರದ ಈ ಘಟನೆ ನಡೆದಿತ್ತು. ಒಂದು ವರ್ಷದ ನಂತರ ಅಂದರೆ ಮಾರ್ಚ್ ೧೭, ೨೦೨೨ ರಂದು ತೀರ್ಪು ನೀಡಲಾಗಿದೆ. ಮಾರ್ಚ್ ೧೭, ೨೦೨೨ ರಂದು ಸಂತ್ರಸ್ತ ಹುಡುಗಿ ತನ್ನ ಪರಿಚಯದ ಯುವಕನ ಜೊತೆಗೆ ಕಲಿತಲಾಯಿ ಕಾಡಿನಿಂದ ಹೋಗುವಾಗ ಬಾಲಾಪುರದ ನಿವಾಸಿ ಶಹಬಾಜ, ರಿಯಾಜ್ ಮತ್ತು ಮೊಹಸಿನ್ ಅಲ್ಲಿಗೆ ಬಂದರು ಮತ್ತು ಅವರು ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಈ ಪ್ರಕರಣ ದೇಹಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಕೇವಲ ೧೨ ದಿನದಲ್ಲಿ ಪೋಲಿಸರು ತನಿಖೆಯ ವರದಿ ನ್ಯಾಯಾಲಯಕ್ಕೆ ನೀಡಿದರು. (ಇದೇ ರೀತಿಯ ತತ್ಬರತೆ ಪೊಲೀಸರು ಎಲ್ಲಾ ಸಂದರ್ಭದಲ್ಲಿ ತೋರಿಸಬೇಕು ! – ಸಂಪಾದಕರು)
(ಸೌಜನ್ಯಾ : NEWS 18)
ಸಂಪಾದಕರ ನಿಲುವು* ಇಂತಹ ಕೃತ್ಯಗಳನ್ನು ಮಾಡುವವರ ಮೇಲೆ ಅಂಕುಶ ಇಡಬೇಕಾದರೆ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು ! |
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept