ಹಿಂದೂ ಸಮುದಾಯದ ಜನರನ್ನು ಗ್ರಾಮದಿಂದ ಹೊರಹಾಕಲಾಯಿತು !

ಥಾರಪಾರಕರ – ಸಿಂಧ್ ಪ್ರಾಂತ್ಯದ ಥಾರಪಾರಕರ ಜಿಲ್ಲೆಯ ಛಾಪರ್ ಖೋಸೋ ಗ್ರಾಮದ ಹಿಂದೂ ಮೇಘಾವರ್ ಸಮುದಾಯದ ಜನರಿಗೆ ನೀರು ಸರಬರಾಜು ನಿರಾಕರಿಸಲಾಗಿದೆ. ಅದರೊಂದಿಗೆ ಈ ಸಮಾಜದ ಜನರಿಗೆ ಗ್ರಾಮದ ರಾಜು ಖೋಸೋ, ಸಿಕಂದರ್ ಖೋಸೋ ಮತ್ತು ಇತರ ಮುಸ್ಲಿಮರು ಓಡಿಸಿದರು. ಇದರಿಂದ ಗ್ರಾಮದ ಮೇಘಾವರ ಸಮುದಾಯದ ಹಿಂದೂಗಳು ಪೊಲೀಸ್ ಠಾಣೆ ಪರಿಸರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಜನರು ಮುಸ್ಲಿಮರ ವಿರುದ್ಧ ದೂರು ನೀಡಲು ಪ್ರಯತ್ನಿಸಿದರು; ಆದರೆ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ.
Hindu Meghwar community denied water, kicked out of village in Tharparkar, Sindh https://t.co/Ley0iyXd52
— HinduPost (@hindupost) March 13, 2023
ಥಾರಪರಕರ್ ಜಿಲ್ಲೆಯು ಭಾರತ-ಪಾಕಿಸ್ತಾನ ಗಡಿಯಲ್ಲಿದೆ. ಈ ಜಿಲ್ಲೆ ಪಾಕಿಸ್ತಾನದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ. ಇಲ್ಲಿ ವಾಸಿಸುವ ಅಲ್ಪಸಂಖ್ಯಾತ ಹಿಂದೂಗಳ ಸಮಸ್ಯೆಗಳನ್ನು ಸರಕಾರ, ಆಡಳಿತ ಮತ್ತು ಪೊಲೀಸರು ನಿರ್ಲಕ್ಷಿಸಿದ್ದಾರೆ. ಈ ಪ್ರದೇಶದಲ್ಲಿ ಹಿಂದೂಗಳ ಮೇಘಾವರ್, ಭಿಲ್ ಮತ್ತು ಜೋಗಿ ಸಮುದಾಯದ ಜನರು ವಾಸಿಸುತ್ತಾರೆ. ಇಲ್ಲಿ ಹಿಂದೂಗಳ ಅಪಹರಣ, ಹಿಂದೂ ಹುಡುಗಿಯರ ಮತಾಂತರ, ಯುವಕರ ಆತ್ಮಹತ್ಯೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತವೆ.
ಸಂಪಾದಕರ ನಿಲುವು* ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು ! ಭಾರತದಲ್ಲಿ ಅಲ್ಪಸಂಖ್ಯಾತರಿಗೆ ತಥಾಕಥಿತ ಅನ್ಯಾಯವಾಗಿದೆ ಎಂದು ಆರೋಪಿಸಿದ ಕೋಲಾಹಲವೆಬ್ಬಿಸುವ ಆಕಾಶ ಪಾತಾಳ ಒಂದುಮಾಡುವ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳಿಗೆ, ಹಿಂದೂಗಳಿಗೆ ನೀರಿನಂತಹ ಮೂಲಭೂತ ಅವಶ್ಯಕತೆಗಳನ್ನು ಸಹ ಒದಗಿಸದ ಪಾಕಿಸ್ತಾನದ ಅಮಾನವೀಯತೆ ಕಾಣುತ್ತಿಲ್ಲವೇ? ಅಥವಾ ಅವರು ಅದನ್ನು ಬೇಕೆಂದು ನಿರ್ಲಕ್ಷಿಸುತ್ತಾರೆಯೇ? ಭಾರತವು ಪಾಕಿಸ್ತಾನದ ಜೊತೆಗೆ ಇಂತಹ ಸಂಘಟನೆಗಳಿಗೆ ಛೀಮಾರಿ ಹಾಕಬೇಕು ! |
ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!