ಮಾವೊವಾದಿಗಳ ಹಿಂಸಾಚಾರದಲ್ಲಿ 5 ಸಾವಿರ ಜನರು ಸಾವನ್ನಪ್ಪಿದ ಪ್ರಕರಣ

ಕಾಠಮಂಡು (ನೇಪಾಳ) – ನೇಪಾಳದ ಸರ್ವೋಚ್ಚ ನ್ಯಾಯಾಲಯವು ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡರಿಗೆ ಕಾರಣ ನೀಡಿ ನೊಟಿಸ್ ಜಾರಿಮಾಡಿದೆ. ಒಂದು ದಶಕಗಳಿಂದ ನಡೆಯುತ್ತಿರುವ ಮಾವೋವಾದಿ ಹಿಂಸಾಚಾರದಲ್ಲಿ 5 ಸಾವಿರ ಜನರ ಹತ್ಯೆಯ ಪ್ರಕರಣದಲ್ಲಿ ಪ್ರಚಂಡರ ಪಾತ್ರದ ಬಗ್ಗೆ ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಒಂದು ದೂರು ದಾಖಲಿಸಲಾಗಿದೆ. ಈ ಬಗ್ಗೆ ನ್ಯಾಯಾಲಯವು ಒಂದು ನೋಟೀಸನ್ನು ಜಾರಿಗೊಳಿಸಿದೆ. ಪ್ರಚಂಡ ಇವರು ಇಂತಹ ಹತ್ಯೆಯಾಗಿದೆಯೆಂದು ಈ ಹಿಂದೆ ಒಪ್ಪಿಕೊಂಡಿದ್ದರು. ತದನಂತರ ಈ ದೂರನ್ನು ದಾಖಲಿಸಲಾಗಿತ್ತು. ಇದರಿಂದ ಕಾರಣ ನೀಡಿ ನೊಟೀಸ್ ಜಾರಿಗೊಳಿಸುವಾಗ ನ್ಯಾಯಾಲಯವು ಪ್ರಚಂಡ ಇವರಿಗೆ `ಆಗ ಏನು ನಡೆದಿತ್ತು ಮತ್ತು ದೂರುದಾರನ ಮನವಿಯಂತೆ ನಿಮ್ಮ ವಿಚಾರಣೆ ಏಕೆ ನಡೆಸಬಾರದು ?, ಎಂದು ಕೇಳಿದೆ. ದೂರುದಾರನು ಪ್ರಚಂಡ ಇವರನ್ನು ಬಂಧಿಸುವಂತೆ ಕೋರಿದ್ದನು; ಆದರೆ ನ್ಯಾಯಾಲಯ ಅದಕ್ಕೆ ಒಪ್ಪಿಗೆ ನೀಡಲಿಲ್ಲ.
नेपाल के सुप्रीम कोर्ट ने PM प्रचंड को जारी किया कारण बताओ नोटिस, देश में पांच हजार मौतों की ली थी जिम्मेदारी #News #Dailyhunt #NepalPM https://t.co/RWZkXSaTLV
— Dailyhunt Hindi (@DH_Hindi) March 11, 2023
ಜನೇವರಿ 15, 2020 ರಂದು ಕಾಠಮಂಡುವಿನ ಮಾಘಿ ಉತ್ಸವದಲ್ಲಿ ಪ್ರಚಂಡ ಇವರು, `ಒಂದು ದಶಕಕ್ಕಿಂತ ಹೆಚ್ಚು ಕಾಲಾವಧಿಯಿಂದ ನಡೆದಿರುವ ವಿದ್ರೋಹಿಗಳ ನೇತೃತ್ವ ವಹಿಸಿಕೊಂಡಿರುವ ಮಾವೋವಾದಿ ಪಕ್ಷದ ಮುಖಂಡನೆಂದು 5 ಸಾವಿರ ಜನರ ಸಾವಿನ ಹೊಣೆಯನ್ನು ನಾನು ತೆಗೆದುಕೊಳ್ಳುತ್ತೇನೆ ಮತ್ತು ಇನ್ನುಳಿದ ಸಾವಿನ ಹೊಣೆಯನ್ನು ಸಂಬಂಧಪಟ್ಟವರು ತೆಗೆದುಕೊಳ್ಳಬೇಕು’ ಎಂದು ಹೇಳಿದ್ದರು. ಈ ವಿದ್ರೋಹಿಗಳ ಹಿಂಸಾಚಾರದಲ್ಲಿ 17 ಸಾವಿರ ಜನರು ಸಾವನ್ನಪ್ಪಿದ್ದರು. ಪ್ರಚಂಡ ಇವರು `ಪೀಪಲ್ಸ ವಾರ’ ಈ ಹೆಸರಿನಡಿಯಲ್ಲಿ ಸಶಸ್ತ್ರ ಆಂದೋಲನ ನಡೆಸಿದ್ದರು.
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !