ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕಿಸ್ತಾನದ ಮೇಲೆ ಟೀಕಾಸ್ತ್ರ

ನ್ಯೂಯಾರ್ಕ – ವಿಶ್ವ ಸಂಸ್ಥೆಯಲ್ಲಿ ಭಾರತವು ಪುನಃ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಟೀಕಾಸ್ತ್ರ ಮಾಡಿದೆ. `ಗ್ಲೋಬಲ ಕೌಂಟರ – ಟೆರರಿಸಂ ಸ್ಟ್ರ್ಯಾಟಜಿ’ (ಜಿ.ಸಿ.ಟಿ.ಎಸ್.) 8 ನೇ ಪುನರಾವಲೋಕನ ಠರಾವಿನ ಕುರಿತು ಚರ್ಚೆ ಮಾಡುವಾಗ ವಿಶ್ವ ಸಂಸ್ಥೆಯ ಭಾರತದ ಸ್ಥಾಯಿ ಪ್ರತಿನಿಧಿಯಾಗಿರುವ ರುಚಿರಾ ಕಂಬೋಜ ಇವರು ಭಯೋತ್ಪಾದಕತೆಯ ವಿಷಯದಲ್ಲಿ ಮುಕ್ತವಾಗಿ ವಿಚಾರ ಮಂಡಿಸಿದರು. ಭಯೋತ್ಪಾದಕರು ಕೇವಲ ಭಯೋತ್ಪಾದಕರೇ ಆಗಿರುತ್ತಾರೆ. ಇವರಲ್ಲಿ `ಒಳ್ಳೆಯ ಅಥವಾ ಕೆಟ್ಟ ಭಯೋತ್ಪಾದಕರು’ ಎಂದು ಇರುವುದಿಲ್ಲ. ಭಯೋತ್ಪಾದಕತೆ ಘಟನೆಯ ಹಿಂದಿನ ಉದ್ದೇಶದ ಆಧಾರದಲ್ಲಿ ಭಯೋತ್ಪಾದಕರಲ್ಲಿ ವ್ಯತ್ಯಾಸ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಇದರ ಪರಿಣಾಮ ವಿಶ್ವ ಮಟ್ಟದಲ್ಲಿ ಭಯೋತ್ಪಾದಕತೆಯ ವಿರುದ್ಧ ನಡೆದಿರುವ ಚಳುವಳಿಯ ಮೇಲೆ ಆಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
UN में भारत ने पाक को लताड़ा: कहा- आतंकवादी सिर्फ आतंकवादी होते हैं, अच्छे या बुरे नहीं, इन्हें बांटा न जाएhttps://t.co/TSsRaBOgpa pic.twitter.com/MpfaWDZiUX
— Shining India News (@shiningindnews) March 10, 2023
ರುಚಿರಾ ಕಂಬೋಜ ಮಾತನ್ನು ಮುಂದುವರೆಸುತ್ತಾ, ಎಲ್ಲ ಪ್ರಕಾರದ ಭಯೋತ್ಪಾದಕ ಆಕ್ರಮಣಗಳು ಅದು ಸಿಖ್ ವಿರೋಧಿಯಾಗಿರಲಿ, ಬೌದ್ಧವಿರೋಧಿಯಾಗಿರಲಿ ಅಥವಾ ಹಿಂದೂ ವಿರೋಧಿಯಾಗಿರಲಿ ಅವುಗಳನ್ನು ನಿಷೇಧಿಸಲೇ ಬೇಕು. ಅಂತರರಾಷ್ಟ್ರೀಯ ಸಮುದಾಯವು ಹೊಸ ಸಂಜ್ಞೆ ಮತ್ತು ತಪ್ಪು ಪ್ರಾಧಾನ್ಯತೆಯ ವಿರುದ್ಧ ಸೆಟೆದು ನಿಲ್ಲುವ ಆವಶ್ಯಕತೆಯಿದೆ. ಭಯೋತ್ಪಾದಕತೆಯನ್ನು ಎಲ್ಲ ರೀತಿಯಲ್ಲಿ ನಿಷೇಧಿಸಬೇಕು. ಭಯೋತ್ಪಾದಕತೆಯ ಯಾವುದೇ ಕೃತ್ಯವನ್ನು ಬೆಂಬಲಿಸಬಾರದು. ಕಂಬೋಜ ಇವರು ಪಾಕಿಸ್ತಾನದೆಡೆಗೆ ಬೊಟ್ಟು ಮಾಡಿ ಭಯೋತ್ಪಾದಕತೆಗೆ ಆಶ್ರಯ ನೀಡುವ ದೇಶವೆಂದು ಗುರುತಿಸಬೇಕು. ಅವರಿಗೆ ಅವರ ಕೃತ್ಯಕ್ಕಾಗಿ ಜವಾಬ್ದಾರರನ್ನಾಗಿ ಮಾಡಬೇಕು. ಎಂದು ಹೇಳಿದರು.
ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!
ಶೀಘ್ರದಲ್ಲೇ ಶಾಂತಿ ಒಪ್ಪಂದ: ಇರಾನ್ ಯುದ್ಧ ಅಂತ್ಯ! – ಟ್ರಂಪ್ ಹೇಳಿಕೆ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ಭಾರತದ ಮಹಾನ್ ಗಣಿತಜ್ಞ ‘ಆರ್ಯಭಟ’ ಅವರ ವಿಡಂಬನೆ; ಹಿಂದೂ ಜನಜಾಗೃತಿ ಸಮಿತಿಯಿಂದ ‘ಅಮೆಜಾನ್ ಇಂಡಿಯಾ’ಗೆ ಕಾನೂನು ನೋಟಿಸ್ !
ಬ್ರಿಟನ್ : ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪಾಕಿಸ್ತಾನಿ ಪ್ರಜೆ ಶೇರಾಜ್ ಮಲಿಕ್ಗೆ 10 ವರ್ಷಗಳ ಜೈಲು ಶಿಕ್ಷೆ!
ರಾವಲಕೋಟ್ (ಪಾಕ್ ಆಕ್ರಮಿತ ಕಾಶ್ಮೀರ) : ಪಾಕ್ ಸೇನೆಯು ಮತ್ತೆ 16 ನಾಗರಿಕರನ್ನು ಕೊಂದಿದೆ !