‘ನಾನು ಬ್ರಿಟನ್ ನಲ್ಲಿ ಮಾತನಾಡಬಹುದು; ಆದರೆ ಭಾರತೀಯ ಸಂಸತ್ತಿನಲ್ಲಿ ಚೀನಾದ ನುಸುಳುವಿಕೆಯ ವಿಷಯ ಮಂಡಿಸಲು ಅನುಮತಿ ಇಲ್ಲ !’ (ಅಂತೆ)

ಬ್ರಿಟನ್ ಗೆ ಹೋಗಿರುವ ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಇವರ ಇನ್ನೊಂದು ಬಾಲಿಶ ಹೇಳಿಕೆ !

ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ

ಲಂಡನ್ (ಬ್ರಿಟನ್) – ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಮಾರ್ಚ್ ೫ ರಂದು ಇಲ್ಲಿಯ ಹಂಸ್ಲೋ ದಲ್ಲಿ ೧ ಲಕ್ಷ ೫೦೦ ವಿದೇಶಿ ಭಾರತೀಯರ ಎದುರು ಚೀನಾದ ವಿಷಯ ಮಂಡಿಸುತ್ತಾ ಮೋದಿ ಸರಕಾರವನ್ನು ಟೇಕಿಸಿದರು. ಅವರು, ಭಾರತೀಯ ಸಂಸತ್ತಿನಲ್ಲಿ ಚೀನಾ ಸೈನ್ಯದಿಂದ ನಡೆಯುತ್ತಿರುವನು ಭಾಋತದಲ್ಲಿನ ಸುಳುವಿಕೆಯ ವಿಷಯ ವಿರೋಧಿಗಳಿಗೆ ಮಂಡಿಸಲು ಅನುಮತಿ ಇಲ್ಲ. ನಾನು ಬ್ರಿಟನ್ ನಲ್ಲಿ ಮಾತನಾಡಬಹುದು ಆದರೆ ಭಾರತದ ಸಂಸತ್ತಿನಲ್ಲಿ ಇಲ್ಲ. ಇದು ಲಚಾಸ್ಪದವಾಗಿದೆ ಎಂದು ಹೇಳಿದರು.

‘ಇಂಡಿಯನ್ ಜರ್ನಲಿಸ್ಟ್ ಅಸೋಸಿಯೇಷನ್’ ನ ‘ಇಂಡಿಯಾ ಇನ್ ಸೈಟ್ಸ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ರಾಹುಲ್ ಅವರು,

೧. ಭಾರತಕ್ಕೆ ಚೀನಾದಿಂದ ಜಾಗೃತವಾಗಿರುವ ಅವಶ್ಯಕತೆ ಇದ್ದು ಚೀನಾ ಗಡಿಯಲ್ಲಿ ಬಹಳ ಸಕ್ರಿಯ ಮತ್ತು ಆಕ್ರಮಕವಾಗಿರುವುದು ಕಾಣುತ್ತದೆ.

೨. ಭಾರತ ಇದು ಮುಕ್ತ ವಿಚಾರಗಳ ದೇಶವಾಗಿತ್ತು; ಆದರೆ ಈಗ ಹಾಗೆ ಉಳಿದಿಲ್ಲ. ಈಗ ಅದು ಎಲ್ಲವೂ ನಾಶವಾಗುತ್ತಿದೆ. ಆದ್ದರಿಂದ ನಾವು ‘ಭಾರತ ಜೋಡು ಯಾತ್ರೆ’ ನಡೆಸುವ ನಿರ್ಣಯ ತೆಗೆದುಕೊಂಡುವು.

೩. ದೇಶದ ಅವಮಾನ ನಾನಲ್ಲ ಸ್ವತಃ ಪ್ರಧಾನಮಂತ್ರಿ ಮೋದಿ ಅವರು ಮಾಡುತ್ತಿದ್ದಾರೆ. ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ರಾಜ್ಯಗಳಲ್ಲಿ ಭಾಜಪ ಅಥವಾ ಭಾಜಪ ಬೆಂಬಲಿತ ಸರಕಾರ ಇರುವಾಗ ಮತ್ತು ಕಾಂಗ್ರೆಸ್ಸಿನ ‘ಭಾರತ ಜೋಡೋ ಯಾತ್ರೆ’ ಈ ಎಲ್ಲಾ ೬ ರಾಜ್ಯಗಳಿಂದಲೂ ನಿರ್ವಿಘ್ನವಾಗಿ ಹೋಗಿದ್ದರೂ ರಾಹುಲ್ ಗಾಂಧಿಯವರ ಈ ಹೇಳಿಕೆಯ ಬಗ್ಗೆ ಚಿಕ್ಕ ಮಗು ಕೂಡ ವಿಶ್ವಾಸ ಇಡುವುದೆ ?