
ತರಣತಾರಣ (ಪಂಜಾಬ) – ಇಲ್ಲಿಯ ಗೋಯಿಂದವಾಲ ಸಾಹಿಬ ಜೈಲಿನಲ್ಲಿ ಪಂಜಾಬಿ ಗಾಯಕ ಸಿದ್ಧು ಮೂಸೆವಾಲಾನ ಹತ್ಯೆಯ ಪ್ರಕರಣದ 3 ಆರೋಪಿಗಳ ನಡುವೆ ನಡೆದ ಕಾದಾಟದಲ್ಲಿ ಮನದೀಪ ತುಫಾನ ಮತ್ತು ಮನಮೋಹನ ಸಿಂಹ ಈ 2 ಆರೋಪಿಗಳು ಸಾವನ್ನಪ್ಪಿದ್ದು, ಕೇಶವ ಹೆಸರಿನ ಮೂರನೇ ಆರೋಪಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Gang war in Goindwal Sahib Jail, death of accused Mandeep and Manmohan in Moosewala case https://t.co/nzavd7QEag
— Swarajya Times (@SwarajyaTimes) February 27, 2023
ಪೊಲೀಸ ಉಪಅಧೀಕ್ಷಕ ಜಸಪಾಲಸಿಂಹ ಢಿಲ್ಲನ ನೀಡಿರುವ ಮಾಹಿತಿಯನುಸಾರ ಫೆಬ್ರವರಿ 26 ರಂದು ಸಾಯಂಕಾಲ 3 ಆರೋಪಿಗಳ ನಡುವೆ ವಾದ ನಡೆದು ಹೊಡದಾಟ ಆರಂಭವಾಯಿತು. ಅವರು ಒಬ್ಬರಿಗೊಬ್ಬರಿಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದರು. (ಕಾರಾಗೃಹದಲ್ಲಿ ಆರೋಪಿಗಳಿಗೆ ಕಬ್ಬಿಣದ ಸಲಾಕೆ ಹೇಗೆ ದೊರೆಯಿತು ? ಇದನ್ನು ಗಮನಿಸಿದಾಗ ಕಾರಾಗೃಹದ ಆಡಳಿತದ ವೈಫಲ್ಯತೆ ಕಂಡು ಬರುತ್ತದೆ – ಸಂಪಾದಕರು) ಈ ಹಲ್ಲೆಯಲ್ಲಿ ಮೂವರೂ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಇಬ್ಬರು ಸಾವನ್ನಪ್ಪಿದರು. ಮೂರನೇಯವನ ಮೇಲೆ ಚಿಕಿತ್ಸೆ ಮುಂದುವರಿದಿದೆ.
ಸಂಪಾದಕೀಯ ನಿಲುವುಆಪ್ ಅಧಿಕಾರದಲ್ಲಿರುವ ಪಂಜಾಬ್ ನಲ್ಲಿ ಎಲ್ಲೆಡೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದು ಗಮನಕ್ಕೆ ಬರುತ್ತಿದೆ, ಸರಕಾರ ಈಗ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ