ದೆಹಲಿಯಲ್ಲಿ ದೇವಸ್ಥಾನದ ಪಕ್ಕದಲ್ಲಿ ಗೋಹತ್ಯೆ ಮಾಡಿದ ಪ್ರಕರಣದಲ್ಲಿ ಮುಸಲ್ಮಾನ ಯುವಕನ ಬಂಧನ

ನವ ದೆಹಲಿ – ದೆಹಲಿ ಪೊಲೀಸರು ಗೋಹತ್ಯೆ ನಡೆದ ಪ್ರಕರಣದಲ್ಲಿ ಅಫ್ತಾಬ ಹೆಸರಿನ 22 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಹಾಗೆಯೇ ಘಟನಾಸ್ಥಳದಿಂದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಅಫ್ತಾಬ ಮತ್ತು ಅವನ ಸಹಚರ ಅಕ್ರಮ, ಸಲೀಮ,ಮಾರುಫ, ಅಲ್ತಾಮಸ ಇವರು ಒಂದು ದೇವಸ್ಥಾನದ ಹತ್ತಿರ ಇರುವ ಮುಕ್ತ ಸ್ಥಳದಲ್ಲಿ ಗೋಹತ್ಯೆ ಮಾಡಿದ್ದರು. ಪೊಲೀಸರು ಅಫ್ತಾಬನ ಸಹಚರರನ್ನು ಹುಡುಕುತ್ತಿದ್ದಾರೆ. ರೋಹಿಣಿ ಪ್ರದೇಶದಲ್ಲಿ ನಡೆದ ಗೋಹತ್ಯೆ ಪ್ರಕರಣದಲ್ಲಿಯೂ ಈ ಆರೋಪಿಗಳೇ ಸಹಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಸಂಪಾದಕೀಯ ನಿಲುವು

ಹಾಡುಹಗಲೇ ಗೋಹತ್ಯೆ ನಡೆಯುತ್ತಿದ್ದರೂ ಅದರ ಮಾಹಿತಿಯಿಲ್ಲದಿರುವ ಪೊಲೀಸರಿದ್ದೂ ಏನು ಪ್ರಯೋಜನ ?