ರಾತ್ರಿ ಜಾಗರಣೆ ಮಾಡುವುದನ್ನು ತಡೆದು ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿ !

ವೈದ್ಯ ಮೇಘರಾಜ ಪರಾಡಕರ್

‘ಕೆಲವು ಸಾಧಕರು ನಾಮಜಪ ಅಥವಾ ಸ್ವಭಾವದೋಷ ನಿರ್ಮೂಲನೆ ಪಟ್ಟಿಯನ್ನು ಬರೆಯಲು ರಾತ್ರಿ ಜಾಗರಣೆ ಮಾಡುತ್ತಾರೆ, ಹೀಗೆ ಮಾಡುವ ಬದಲು ರಾತ್ರಿ ಬೇಗನೇ ಮಲಗಿ ಅಷ್ಟು ಸಮಯ ಬೇಗನೇ ಎದ್ದು ನಾಮಜಪ, ಸ್ವಭಾವದೋಷ ನಿರ್ಮೂಲನ ಪಟ್ಟಿಯನ್ನು ಬರೆಯುವುದು ಮುಂತಾದವುಗಳನ್ನು ಮಾಡಬಹುದು, ಅಂದರೆ ವ್ಯಷ್ಟಿ ಸಾಧನೆಯನ್ನು ಮಾಡಬಹುದು.

ಕೆಲವೊಂದು ಸೇವೆಗಳು ಪರಸ್ಪರರ ಮೇಲೆ ಅವಲಂಬಿಸಿರುವುದರಿಂದ ಕೆಲವರಿಗೆ ರಾತ್ರಿ ಜಾಗರಣೆ ಮಾಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಸಾಧ್ಯವಿದ್ದರೆ ಎಲ್ಲರೂ ‘ರಾತ್ರಿ ಜಾಗರಣೆ ಮಾಡುವ ಬದಲು ಅದೇ ಸೇವೆಯನ್ನು ಬೆಳಗ್ಗೆ ಬೇಗನೇ ಎದ್ದು ಮಾಡಬಹುದೇ ? ಎಂಬುದರ ಕುರಿತು ಸಕಾರಾತ್ಮಕ ಚಿಂತನೆಯನ್ನು ಮಾಡಿ ನಿರ್ಣಯವನ್ನು ತೆಗೆದುಕೊಳ್ಳಬೇಕು.

ಒಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆಯನ್ನು ಮಾಡಿದರೆ ಕೆಲವೊಮ್ಮೆ ‘ನಿದ್ರೆ ಪೂರ್ಣ ಆಗುವುದಿಲ್ಲ’, ಆದುದರಿಂದ ಒಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ನಿಧಾನವಾಗಿ ಹಿಂದೆ ತರಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೧.೨೦೨೩)