ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ ಪಾಠಕ್ ಇವರ ಘೋಷಣೆ !

ಭದೊಹಿ (ಉತ್ತರಪ್ರದೇಶ) – ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ ಪಾಠಕ್ ಇವರು ರಾಜ್ಯದ ರಾಜಧಾನಿ ಲಖ್ನೌನ ಹೆಸರನ್ನು ಬದಲಾಯಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ಪಾಠಕ್ ಇವರು, ಲಖ್ನೌ ಲಕ್ಷ್ಮಣನ ನಗರವಾಗಿದೆ, ಈ ವಿಷಯ ಎಲ್ಲರಿಗೂ ತಿಳಿದಿದೆ, ಆದ್ದರಿಂದ ಸರಕಾರ ಶೀಘ್ರದಲ್ಲೇ ಈ ನಗರಕ್ಕೆ ಮರು ನಾಮಕರಣ ಮಾಡಲಿಕ್ಕಿದೆ, ಎಂದು ಹೇಳಿದರು.
Lucknow can be soon renamed as ‘Lakshman Nagari’: UP Dy CM Brajesh Pathak#Lucknow https://t.co/2LLBIBCEzr
— Catch News (@CatchNews) February 8, 2023
ಭಾಜಪದ ಸಂಸದ ಸಂಗಮ ಗುಪ್ತಾ ಇವರು ಕೇಂದ್ರೀಯ ಗೃಹ ಸಚಿವ ಅಮೀತ್ ಶಾಹ ಇವರಿಗೆ ಪತ್ರ ಬರೆದು ಲಖ್ನೌ ಈ ಹೆಸರನ್ನು ಬದಲಾಯಿಸುವ ಬಗ್ಗೆ ವಿನಂತಿಸಿದ್ದಾರೆ. ಲಖ್ನೌ ನಗರವನ್ನು ತ್ರೇತಾಯುಗದಲ್ಲಿ ಭಗವಾನ ರಾಮನು ತನ್ನ ಸಹೋದರ ಲಕ್ಷ್ಮಣನಿಗೆ ಉಡುಗೊರೆಯಾಗಿ ಕೊಟ್ಟಿದ್ದರಿಂದ ಅದನ್ನು ‘ಲಖನಪುರ’ ಅಥವಾ ‘ಲಕ್ಷ್ಮಣಪುರ’ ಎಂದು ಗುರುತಿಸಲಾಗುತ್ತಿತ್ತು. ೧೮ ನೇ ಶತಮಾನದಲ್ಲಿ ನವಾಬ ಅಸಫ್-ಉದ್-ದೌಲಾ ಇವನು ಆ ಹೆಸರನ್ನು ಬದಲಾಯಿಸಿ ‘ಲಖ್ನೌ’ ಎಂದು ಮಾಡಿದ್ದನು ಎಂದು ಹೇಳಿದರು.
ಹೈದ್ರಾಬಾದನ್ನು ಭಾಗ್ಯನಗರ ಮಾಡಬೇಕೆಂಬ ಬೇಡಿಕೆ ಆರಂಭವಾಗಿದೆ !
ತೆಲಂಗಾಣದ ರಾಜಧಾನಿ ಹೈದ್ರಾಬಾದ್ ಹೆಸರನ್ನು ಬದಲಾಯಿಸಿ ಭಾಗ್ಯನಗರ ಮಾಡಬೇಕೆಂಬ ಬೇಡಿಕೆಯೂ ಕಳೆದ ಹಲವಾರು ವರ್ಷಗಳಿಂದ ಬರುತ್ತಿದೆ. ಜುಲೈ ೨೦೨೨ ರಲ್ಲಿ ಭಾಜಪದ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಂಬೋಧಿಸುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೆಲಂಗಾಣದ ರಾಜಧಾನಿಯನ್ನು ‘ಭಾಗ್ಯನಗರ’ ಎಂದು ಉಲ್ಲೇಖಿಸಿದ್ದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ