ಅಂಗಡಿಗಳ ವಿರುದ್ಧ ಬಿತ್ತಿ ಪತ್ರಗಳನ್ನು ಅಂಟಿಸಿದ್ದ ವಿಶ್ವ ಹಿಂದೂ ಪರಿಷತ್ತು !

ದಕ್ಷಿಣ ಕನ್ನಡ (ಕರ್ನಾಟಕ) – ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸಮಯದಲ್ಲಿ ಮುಸಲ್ಮಾನರಿಂದ ಹಾಕಲಾಗಿರುವ ಅಂಗಡಿಗಳನ್ನು ತೆರೆವು ಗೊಳಿಸಲಾಗಿದೆ. ಈ ಜಾತ್ರಾ ಮಹೋತ್ಸವ ಆರಂಭವಾಗುವ ಮೊದಲು ವಿಶ್ವ ಹಿಂದೂ ಪರಿಷತ್ತಿನಿಂದ ಮುಸಲ್ಮಾನರ ಅಂಗಡಿಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ಕೈಗೆತ್ತಿಕೊಂಡು ಅಲ್ಲಲ್ಲಿ ಬಿತ್ತಿ ಪತ್ರಕಗಳನ್ನು ಅಂಟಿಸಲಾಗಿತ್ತು. ಅನೇಕ ವಾಟ್ಸಪ್ ಗ್ರೂಪಗಳಿಂದ ಅಹಿಂದೂ ವ್ಯಾಪಾರಿಗಳಿಗೆ ಅಂಗಡಿ ಹಾಕಲು ನಿಷೇಧಿಸುವ, ಸಂದೇಶ ಪ್ರಸಾರ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಒಬ್ಬ ಮುಸಲ್ಮಾನನು ಜಾತ್ರೆಯಲ್ಲಿ ಅಂಗಡಿ ಹಾಕಿದ್ದನು, ಅದನ್ನು ತೆರವುಗೊಳಿಸಲಾಯಿತು. ಹಾಗೂ ಇಬ್ಬರು ಮುಸಲ್ಮಾನರ ಅಂಗಡಿ ಹಾಕುವ ಅನುಮತಿ ರದ್ದು ಪಡಿಸಲಾಯಿತು.
Muslim man forced to vacate shop by right-wing workers at Panchalingeshwara temple fair in #Karnatakahttps://t.co/ILcZCup0Z6
— TIMES NOW (@TimesNow) January 21, 2023
೧. ಜನವರಿ ೧೪ ರಿಂದ ೨೨ ರ ಕಾಲಾವಧಿಯಲ್ಲಿ ಈ ಜಾತ್ರೆಯ ಆಯೋಜನೆ ಮಾಡಲಾಗಿತ್ತು. ವಿಶ್ವ ಹಿಂದೂ ಪರಿಷತ್ತಿನಿಂದ ಅಂಟಿಸಲಾದ ಬಿತ್ತಿ ಪತ್ರಕಗಳ ಮೇಲೆ ನವೆಂಬರ್ ೨೦೨೨ ರಲ್ಲಿ ನಡೆದಿರುವ ಕುಕ್ಕರ್ ಸ್ಫೋಟದ ಉಲ್ಲೇಖ ಮಾಡುತ್ತಾ, ಈ ಸ್ಫೋಟದ ಗುರಿ ಕದ್ರಿ ಮಂಜುನಾಥ ದೇವಸ್ಥಾನ ಇದೆ, ಎಂದು ಹೇಳಲಾಗಿತ್ತು. ಮೂರ್ತಿ ಪೂಜೆಯನ್ನು ವಿರೋಧಿಸುವವರು ದೇವಸ್ಥಾನದ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಕೇವಲ ಹಿಂದೂ ಧರ್ಮದ ಪಾಲನೆ ಮಾಡುವವರು ಇಲ್ಲಿ ವ್ಯಾಪಾರ ಮಾಡಬಹುದು. ಪೊಲೀಸರು ಈ ಬಿತ್ತಿ ಪತ್ರಕಗಳು ತೆಗೆದಿದ್ದರೂ ಮತ್ತು ದೇವಸ್ಥಾನ ಆಡಳಿತವು ಕೂಡ ಈ ಬಿತ್ತಿ ಪತ್ರಕಗಳಲ್ಲಿ ಬರೆದಿರುವ ವಿಷಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
೨. ಈ ದೇವಸ್ಥಾನದ ಜಾತ್ರೆಯಲ್ಲಿ ಒಂದು ಕಿಲೋ ಮೀಟರ್ ಪರಿಸರದಲ್ಲಿ ಅಂಗಡಿಗಳನ್ನು ಹಾಕಲಾಗುತ್ತದೆ. ಇದರಲ್ಲಿ ಮುಸಲ್ಮಾನರ ಅಂಗಡಿಗಳು ಕೂಡ ಇರುತ್ತವೆ. ಕಳೆದ ಕೆಲವು ತಿಂಗಳಿಂದ ರಾಜ್ಯದಲ್ಲಿ ದೇವಸ್ಥಾನದ ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿ ಹಾಕಲು ಹಿಂದೂ ಸಂಘಟನೆಗಳಿಂದ ಬಹಿಷ್ಕಾರದ ಚಳುವಳಿ ನಡೆಸಲಾಗುತ್ತಿದೆ. ಕಳೆದ ಕೆಲವು ತಿಂಗಳಿಂದ ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸ್ಥಳಗಳಲ್ಲಿ ಬಿತ್ತಿ ಪತ್ರಗಳನ್ನು ಅಂಟಿಸಲಾಗಿತ್ತು. ಇದರಲ್ಲಿ ಮುಸಲ್ಮಾನರ ಅಂಗಡಿಗಳಿಗೆ ವಿರೋಧಿಸಲಾಗಿತ್ತು.
ಯಾರು ದೇಶದ ಕಾನೂನು ಪಾಲನೆಯನ್ನು ಮಾಡುವುದಿಲ್ಲವೋ, ಅವರಿಗೆ ವ್ಯಾಪಾರ ಮಾಡುವ ಅನುಮತಿ ನೀಡಲಾಗುವುದಿಲ್ಲ, ಈ ರೀತಿ ನಿಲುವನ್ನು ತಾಳಲಾಗಿತ್ತು.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ