ಜೋಶಿಮಠದಲ್ಲಿ ತೊಂದರೆಗಿಡಾದವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಶಂಕರಾಚಾರ್ಯರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ

ನ್ಯಾಯಾಲಯದಿಂದ ತಕ್ಷಣ ವಿಚಾರಣೆಗೆ ನಿರಾಕರಣೆ !

ನವ ದೆಹಲಿ – ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತದ ಸಂಬಂಧಪಟ್ಟಂತೆ ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಆದರೆ ಈ ಕುರಿತು ತುರ್ತಾಗಿ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿದೆ. ಮುಖ್ಯ ನ್ಯಾಯಾಧೀಶರಾದ ಧನಂಜಯ ಚಂದ್ರಚೂಡ ಇವರು, `ಜನವರಿ ೧೦ ರಂದು ಈ ಅರ್ಜಿಯನ್ನು ಸೂಚಿಯಲ್ಲಿ ಸಮಾವೇಶಗೊಳಿಸಿದ ನಂತರ ಅದರ ಬಗ್ಗೆ ವಿಚಾರಣೆ ನಡೆಸಲಾಗುವುದೆಂದು’, ಹೇಳಿದರು.

ಈ ಅರ್ಜಿಯಲ್ಲಿ ಜೋಶಿಮಠದಲ್ಲಿ ತೊಂದರೆಗಿಡಾಗಿರುವ ಜನರಿಗೆ ಪುನರ್ವಸತಿ ಜೊತೆಗೆ ಅವರಿಗೆ ಆರ್ಥಿಕ ಸಹಾಯ ನೀಡುವಂತೆ ಆದೇಶ ನೀಡಬೇಕೆಂದು ಆಗ್ರಹಿಸಲಾಗಿದೆ. ಹಾಗೂ ಈ ಘಟನೆಗೆ ರಾಷ್ಟ್ರೀಯ ದುರಂತ ಎಂದು ಘೋಷಿಸಬೇಕೆಂದು ಅರ್ಜಿಯ ಮೂಲಕ ವಿನಂತಿಸಲಾಗಿದೆ.

ಸಂಪಾದಕೀಯ ನಿಲುವು

ಸರಕಾರಿ ವ್ಯವಸ್ಥೆ ತೊಂದರೆಗಿಡಾದವರಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸುವುದರಲ್ಲಿ ವಿಫಲವಾಗಿದ್ದರಿಂದಲೇ ಹಿಂದೂಗಳ ಧರ್ಮ ಗುರುಗಳಿಗೆ ಈ ರೀತಿಯ ಮನವಿ ದಾಖಲಿಸಲು ಅನಿವಾರ್ಯವಾಗಿದೆ !