ಮೂವರ ಬಂಧನ.

ಬೆಳಗಾವಿ – ಇಲ್ಲಿ ಜನೇವರಿ 8 ರಂದು ಜರುಗಲಿದ್ದ ಹಿಂದೂ ಸಭೆಯ ಸಿದ್ಧತೆಯ ವರದಿಯನ್ನು ತೆಗೆದುಕೊಂಡು ಸಂಜೆ ಮನೆಗೆ ಹಿಂತಿರುವುವಾಗ ಶ್ರೀರಾಮ ಸೇನೆ ಮತ್ತು ಹಿಂದೂ ರಾಷ್ಟ್ರ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀ ರವಿಕುಮಾರ ಕೋಕಿತಕರ ಇವರ ಮೇಲೆ ಜನೇವರಿ 7 ರಂದು ಹಿಂಡಲಗಾದ ಮರಾಠಿ ಶಾಲೆಯ ಹತ್ತಿರ ಅಜ್ಞಾತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಶ್ರೀ ಕೋಕಿತಕರ ಇವರ ಮುಖಕ್ಕೆ 2 ಗುಂಡುಗಳು ತಾಗಿ ಹೋಗಿದ್ದರಿಂದ ಅವರು ಗಾಯಗೊಂಡಿದ್ದಾರೆ. ಅವರ ವಾಹನ ಚಾಲಕನ ಎಡ ಭುಜಕ್ಕೆ ಗುಂಡು ತಗುಲಿರುವುದರಿಂದ ಅವರೂ ಕೂಡ ಗಾಯಗೊಂಡಿದ್ದಾರೆ. ಇಬ್ಬರನ್ನೂ `ಕೆ.ಎಲ್.ಇ.’ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಗಿದ್ದು, ಇಬ್ಬರ ಆರೋಗ್ಯಕ್ಕೆ ಅಪಾಯವಿಲ್ಲವೆಂದು ಆಧುನಿಕ ವೈದ್ಯರು ಹೇಳಿದ್ದಾರೆ. ಈ ಪ್ರಕರಣದಿಂದ ನಗರದಲ್ಲಿ ಪೊಲೀಸ ಬಂದೋಬಸ್ತನ್ನು ಹೆಚ್ಚಿಸಲಾಗಿದೆ. ಈ ಪ್ರಕರಣದಲ್ಲಿ ಅಭಿಜಿತ ಭಾತಕಾಂಡೆ, ರಾಹುಲ ಕೋಡಚವಾಡ ಮತ್ತು ಜ್ಯೋತಿಬಾ ಮುತಗೇಕರ ಹೆಸರಿನ ಮೂವರನ್ನು ಬಂಧಿಸಲಾಗಿದೆಯೆಂದು ಬೆಳಗಾವಿ ಪೊಲೀಸ ಆಯುಕ್ತ ಡಾ. ಎಂ.ಬಿ. ಬೋರಲಿಂಗಯ್ಯ ಇವರು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಿರಿ- ಶ್ರೀ ಪ್ರಮೋದ ಮುತಾಲಿಕ , ಶ್ರೀರಾಮ ಸೇನೆ

ಈ ಘಟನೆಯ ವಿಷಯದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಶ್ರೀ ಪ್ರಮೋದ ಮುತಾಲಿಕ ಇವರು ಮಾತನಾಡುತ್ತಾ, `ಈ ಘಟನೆಯನ್ನು ನಾವು ಬಲವಾಗಿ ನಿಷೇಧಿಸುತ್ತೇವೆ. ಈ ಕೃತ್ಯ ಮಾಡಿರುವವರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು’.ಎಂದು ಹೇಳಿದ್ದಾರೆ.
ಸಭೆ ನಡೆಸುವ ಬಗ್ಗೆ ಇರುವ ವಿರೋಧದ ಕಾರಣದಿಂದ ಗೋಲಿಬಾರ ?
ಜನೇವರಿ 8 ರಂದು ನಗರದಲ್ಲಿ ಛತ್ರಪತಿ ಸಂಭಾಜಿ ಮೈದಾನದಲ್ಲಿ ವಿರಾಟ ಹಿಂದೂ ಸಭೆಯ ಆಯೋಜನೆ ಮಾಡಲಾಗಿತ್ತು. ಆ ಸಭೆಗೆ ಹಿಂದೂ ರಾಷ್ಟ್ರ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಧನಂಜಯ ದೇಸಾಯಿ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಮೋದ ಮುತಾಲಿಕ ಇವರು ಮಾರ್ಗದರ್ಶನ ಮಾಡಿದರು. ಸಭೆಗೆ ಇದ್ದ ವಿರೋಧದ ಕಾರಣದಿಂದ ಈ ಘಟನೆ ನಡೆದಿದೆಯೆಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿ ಮತ್ತು ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುವ ಆಕ್ರಮಣಗಳು ಚಿಂತಾಜನಕವಾಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರವೊಂದೇ ಪರ್ಯಾಯವಾಗಿದೆ. |
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case