ಸಂತ್ರಸ್ತೇ ಮತ್ತು ಆಕೆಯ ತಂದೆಗೆ ದೂರು ನೀಡಿದರೆ ಕೊಲ್ಲುವ ಬೆದರಿಕೆ

ಬರೆಲಿ (ಉತ್ತರಪ್ರದೇಶ) – ಇಲ್ಲಿಯ ಒಂದು ಹಿಂದೂ ಕುಟುಂಬದ ಮನೆಯಲ್ಲಿ ತಂದೆಯ ಜೊತೆಗೆ ಟೈಲ್ಸ್ ಹಾಕುವ ಕೆಲಸಕ್ಕಾಗಿ ಹೋಗಿದ್ದ ಫರ್ಮಾನ ಅಲಿ ಇವನು ಆ ಮನೆಯಲ್ಲಿನ ಅಪ್ರಾಪ್ತ ಹುಡುಗಿಯ ಅಪಹರಣ ಮಾಡಿ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಲಾತ್ಕಾರದ ನಂತರ ಅವನು ಹುಡುಗಿಗೆ ಕೊಲ್ಲುವ ಬೆದರಿಕೆ ನೀಡಿದ್ದ. ಫರ್ಮಾನ ಈ ಹುಡುಗಿ ಶಾಲೆಗೆ ಹೋಗುವಾಗ ಬರುವಾಗ ಹಿಂಬಾಲಿಸುತ್ತಿದ್ದನು. ಫರ್ಮಾನ ಇವನು ನವಂಬರ್ ೨೨ ರಂದು ಆಕೆಯ ಅಪಹರಣ ಮಾಡಿ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ನಶೆಯ ಪದಾರ್ಥ ತಿನ್ನಲು ನೀಡಿ ಆಕೆಯ ಮೇಲೆ ಬಲತ್ಕಾರ ಮಾಡಿದನು. ಹುಡುಗಿಯ ತಂದೆಗೆ ಇದರ ಮಾಹಿತಿ ದೊರೆಯುತ್ತಲೇ ಅವರು ಪೊಲೀಸ ಠಾಣೆಗೆ ದೂರು ನೀಡಲು ಹೋಗುವಾಗ ಫರ್ಮಾನ ಮತ್ತು ಅವನ ತಂದೆ ಅವರ ಹುಡುಗಿಯ ತಂದೆಯನ್ನು ದಾರಿಯಲ್ಲಿ ತಡೆದು ಅವರಿಗೆ ಅವಾಚ್ಯಪದಗಳಲ್ಲಿ ಬೈದು ಕೊಲ್ಲುವ ಬೆದರಿಕೆ ನೀಡಿದ್ದಾರೆ. ಇದರ ನಂತರ ಹುಡುಗಿಯ ತಂದೆ ವಿಶ್ವ ಹಿಂದೂ ಪರಿಷತ್ತಿನ ಸಹಾಯ ಪಡೆದು ಫರ್ಮಾನ ಮತ್ತು ಅವನ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ತಕ್ಷಣ ಬಂದಿಸಲು ಇಲ್ಲಿಯ ನಾಗರೀಕರು ರಸ್ತೆ ತಡೆ ಆಂದೋಲನ ಕೂಡ ನಡೆಸಿದ್ದಾರೆ.
ಸಂಪಾದಕೀಯ ನಿಲುವು
|
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ