
ನವದೆಹಲಿ – ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ಇಲ್ಲಿಯ ಶರಣಾರ್ಥಿ ಎಂದು ಬಂದಿರುವ ಹಿಂದೂ, ಸಿಖ್ಖ್ , ಬೌದ್ಧ, ಜೈನ್, ಪಾರಸಿ ಮತ್ತು ಕ್ರೈಸ್ತ ಇವರಿಗೆ ೧೯೫೫ ರ ನಾಗರಿಕತ್ವ ಕಾನುನಿನ ಪ್ರಕಾರ ಭಾರತೀಯ ನಾಗರಿಕತ್ವ ನೀಡಲು ಕೇಂದ್ರ ಸರಕಾರವು ನಿರ್ಣಯ ತೆಗೆದುಕೊಂಡಿದೆ. ಪ್ರಸ್ತುತ ಈ ನಾಗರಿಕರು ಗುಜರಾತಿನ ಆಣಂದ ಮತ್ತು ಮೇಹಸಣ ಈ ೨ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ನಾಗರಿಕತ್ವ ಸುಧಾರಣಾ ಕಾನೂನು, ೨೦೧೯ ಬದಲು ಈ ಎಲ್ಲರಿಗೂ ೧೯೫೫ ರ ನಾಗರಿಕತ್ವ ಕಾನೂನಿನ ಪ್ರಕಾರ ನಾಗರಿಕತ್ವ ನೀಡುವ ನಿರ್ಣಯ ಬಹಳ ಮಹತ್ವದ್ದಾಗಿದೆ. ೨೦೧೯ ರಲ್ಲಿನ ಸುಧಾರಿತ ನಾಗರಿಕತ್ವ ಕಾನೂನಿನ ಅಂತರ್ಗತ ಅಲ್ಪಸಂಖ್ಯಾತರಿಗೆ ನಾಗರಿಕತ್ವ ನೀಡುವ ವ್ಯವಸ್ಥೆ ಇದೆ ಆದರೆ ಈ ಕಾನೂನಿನ ನಿಯಮ ಸರಕಾರ ಇನ್ನು ಸಿದ್ಧಗೊಳಿಸಿಲ್ಲ. ಆದ್ದರಿಂದ ಇದರ ಅಂತರ್ಗತ ಯಾರಿಗೂ ಕೂಡ ನಾಗರಿಕತ್ವ ನೀಡಲು ಸಾಧ್ಯವಿಲ್ಲ.
MHA directs 2 Gujarat districts to grant citizenship to persecuted minorities from Afghanistan, Pakistan, Bangladesh: Detailshttps://t.co/mjtpdiZckq
— OpIndia.com (@OpIndia_com) November 1, 2022
ಈ ಅಲ್ಪಸಂಖ್ಯಾತರಿಗೆ ನಾಗರಿಕತ್ವಕ್ಕಾಗಿ ಆನ್ಲೈನ ಅರ್ಜಿ ತುಂಬಿಸಬೇಕಾಗುತ್ತದೆ. ಅದರ ನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಅರ್ಜಿಯ ಪರಿಶೀಲನೆ ನಡೆಸಲಾಗುವುದು. ಪರಿಶೀಲನೆಯ ಪ್ರಕ್ರಿಯೆ ಪೂರ್ಣವಾದನಂತರ ಯಾವ ಅರ್ಜಿಗಳು ಯೋಗ್ಯವಾಗಿರುವುದು ಅವರಿಗೆ ಜಿಲ್ದಾಧಿಕಾರಿ ನೋಂದಣಿ ಮತ್ತು ನಾಗರಿಕತ್ವ ಪ್ರಮಾಣ ಪತ್ರ ನೀಡುವರು.
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ