
ನವದೆಹಲಿ – ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ಇಲ್ಲಿಯ ಶರಣಾರ್ಥಿ ಎಂದು ಬಂದಿರುವ ಹಿಂದೂ, ಸಿಖ್ಖ್ , ಬೌದ್ಧ, ಜೈನ್, ಪಾರಸಿ ಮತ್ತು ಕ್ರೈಸ್ತ ಇವರಿಗೆ ೧೯೫೫ ರ ನಾಗರಿಕತ್ವ ಕಾನುನಿನ ಪ್ರಕಾರ ಭಾರತೀಯ ನಾಗರಿಕತ್ವ ನೀಡಲು ಕೇಂದ್ರ ಸರಕಾರವು ನಿರ್ಣಯ ತೆಗೆದುಕೊಂಡಿದೆ. ಪ್ರಸ್ತುತ ಈ ನಾಗರಿಕರು ಗುಜರಾತಿನ ಆಣಂದ ಮತ್ತು ಮೇಹಸಣ ಈ ೨ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ನಾಗರಿಕತ್ವ ಸುಧಾರಣಾ ಕಾನೂನು, ೨೦೧೯ ಬದಲು ಈ ಎಲ್ಲರಿಗೂ ೧೯೫೫ ರ ನಾಗರಿಕತ್ವ ಕಾನೂನಿನ ಪ್ರಕಾರ ನಾಗರಿಕತ್ವ ನೀಡುವ ನಿರ್ಣಯ ಬಹಳ ಮಹತ್ವದ್ದಾಗಿದೆ. ೨೦೧೯ ರಲ್ಲಿನ ಸುಧಾರಿತ ನಾಗರಿಕತ್ವ ಕಾನೂನಿನ ಅಂತರ್ಗತ ಅಲ್ಪಸಂಖ್ಯಾತರಿಗೆ ನಾಗರಿಕತ್ವ ನೀಡುವ ವ್ಯವಸ್ಥೆ ಇದೆ ಆದರೆ ಈ ಕಾನೂನಿನ ನಿಯಮ ಸರಕಾರ ಇನ್ನು ಸಿದ್ಧಗೊಳಿಸಿಲ್ಲ. ಆದ್ದರಿಂದ ಇದರ ಅಂತರ್ಗತ ಯಾರಿಗೂ ಕೂಡ ನಾಗರಿಕತ್ವ ನೀಡಲು ಸಾಧ್ಯವಿಲ್ಲ.
MHA directs 2 Gujarat districts to grant citizenship to persecuted minorities from Afghanistan, Pakistan, Bangladesh: Detailshttps://t.co/mjtpdiZckq
— OpIndia.com (@OpIndia_com) November 1, 2022
ಈ ಅಲ್ಪಸಂಖ್ಯಾತರಿಗೆ ನಾಗರಿಕತ್ವಕ್ಕಾಗಿ ಆನ್ಲೈನ ಅರ್ಜಿ ತುಂಬಿಸಬೇಕಾಗುತ್ತದೆ. ಅದರ ನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಅರ್ಜಿಯ ಪರಿಶೀಲನೆ ನಡೆಸಲಾಗುವುದು. ಪರಿಶೀಲನೆಯ ಪ್ರಕ್ರಿಯೆ ಪೂರ್ಣವಾದನಂತರ ಯಾವ ಅರ್ಜಿಗಳು ಯೋಗ್ಯವಾಗಿರುವುದು ಅವರಿಗೆ ಜಿಲ್ದಾಧಿಕಾರಿ ನೋಂದಣಿ ಮತ್ತು ನಾಗರಿಕತ್ವ ಪ್ರಮಾಣ ಪತ್ರ ನೀಡುವರು.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram