
ಸಮಸ್ತಿಪುರ (ಬಿಹಾರ) – ಇಲ್ಲಿಯ ಧಮೌನ ಗ್ರಾಮದಲ್ಲಿ ೩ ಕಳ್ಳರನ್ನು ಗ್ರಾಮಸ್ಥರು ಹಿಡಿದು ಅಮಾನುಷವಾಗಿ ಥಳಸಿದ್ದಾರೆ. ಅವರಿಗೆ ನೀರಲ್ಲಿ ಮುಳುಗಿಸಿ ಥಳಿಸಲಾಯಿತು. ಇದರಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.
Mob lynches robber in Bihar’s Samastipur https://t.co/HiB5E8rKvb
— ETV Bharat (@ETVBharatEng) October 28, 2022
ಈ ಗ್ರಾಮದಲ್ಲಿ ಅಕ್ಟೋಬರ ೨೬ ರಂದು ಸಂಜೆ ೩ ಕಳ್ಳರು ಒಂದು ಸಂಸ್ಥೆಯ ಸಂಚಾಲಕರಿಗೆ ಬೆದರಿಕೆಯೊಡ್ಡಿ ಹಣ ಲೂಟಿ ಮಾಡುತ್ತಿದ್ದರು. ಸಂಚಾಲಕರು ಕಿರಿಚಿದಾಗ ಕಳ್ಳರು ಗುಂಡು ಹಾರಿಸುತ್ತ ಓಡಿ ಹೋದರು. ಗ್ರಾಮಸ್ಥರು ಇಟ್ಟಿಗೆ ಮತ್ತು ಕಲ್ಲನ್ನು ಎಸೆಯುತ್ತಾ ಅವರನ್ನು ಹಿಂಬಾಲಿಸಿದರು. ಕಳ್ಳರು ತಮ್ಮನ್ನು ಕಾಪಾಡಿಕೊಳ್ಳಲು ನೀರಿನಿಂದ ತುಂಬಿದ್ದ ಒಂದು ಗದ್ದೆಗೆ ಹೋದರು; ಆದರೆ ಜನ ಸಮೂಹವು ಅವರನ್ನು ಹಿಡಿದರು. ಆ ಸ್ಥಳದಲ್ಲಿ ಅವರನ್ನು ನೀರಲ್ಲಿ ಮುಳುಗಿಸಿ ಥಳಿಸಲಾಯಿತು. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಕಳ್ಳರನ್ನು ಬಿಡುಗಡೆಗೊಳಿಸಿದರು. ಗಲಾಟೆಯಲ್ಲಿ ಗಾಯಗೊಂಡಿದ್ದ ಕಳ್ಳರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರಲ್ಲಿನ ಒಬ್ಬ ವಿಕಾಸ ಕುಮಾರ ಎಂಬವನು ಮರುದಿನ ಸಾವನ್ನಪ್ಪಿದನು. ಇನ್ನಿಬ್ಬರು ಪಿಂಕೇಶ ಮತ್ತು ರವಿ ಎಂದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ