ಹಿಂದೂಗಳ ಅಂಗಡಿಯಿಂದ ದೀಪಾವಳಿಯ ವಸ್ತುಗಳನ್ನು ಖರೀದಿಸಲು ಕರೆ ನೀಡಿದ್ದ ತಮಿಳುನಾಡಿನ ಹಿಂದೂ ಕಾರ್ಯಕರ್ತನ ಬಂಧನ

ಹಿಂದೂ ಮುನ್ನಾಮಿ ಈ ಸಂಘಟನೆಯ ಕಾರ್ಯಕರ್ತ ಶಕ್ತಿ

ಚೆನ್ನೈ (ತಮಿಳುನಾಡು) – ಇಲ್ಲಿಯ ಹಿಂದೂ ಮುನ್ನಾಮಿ ಈ ಸಂಘಟನೆಯ ಕಾರ್ಯಕರ್ತ ಶಕ್ತಿ (ವಯಸ್ಸು ೩೨ ವರ್ಷ) ಇವರನ್ನು ಸಮಾಜದಲ್ಲಿ ಬಿರುಕು ಮೂಡಿಸುವ ಪ್ರಯತ್ನ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರಿಗೆ ನ್ಯಾಯಾಲಯ ಕಸ್ಟಡಿಯಲ್ಲಿ ಇರಿಸಲು ನ್ಯಾಯಾಲಯ ಆದೇಶ ನೀಡಿದೆ. ಶಕ್ತಿ ವೆಂಗಾಮೇಡು ಜ್ಯೋತಿದಾರ ಸ್ಟ್ರೀಟ್ ಇಲ್ಲಿ ವಾಸವಾಗಿದ್ದು ಈ ಸಂಘಟನೆಯ ಅವರು ಕರೂರ ಜಿಲ್ಲೆಯ ಸಮನ್ವಯಕರಾಗಿದ್ದಾರೆ. ಅವರು ಹಿಂದೂಗಳಿಗೆ ದೀಪಾವಳಿಯ ಸಮಯದಲ್ಲಿ ಹಿಂದುಗಳು ಹಾಕುವ ಅಂಗಡಿಯಿಂದಲೇ ವಸ್ತುಗಳನ್ನು ಖರೀದಿಸುವ ಕರೆ ನೀಡಿರುವ ಕರಪತ್ರಗಳನ್ನು ವಿತರಿಸಿದ್ದರು. ಹಿಂದೂಗಳ ಅಂಗಡಿಯಿಂದ ವಸ್ತುಗಳನ್ನು ಖರೀದಿಸುವ ಮೊದಲು ‘ಅಂಗಡಿಯಲ್ಲಿ ಹಿಂದೂಗಳ ದೇವತೆಯ ಚಿತ್ರಗಳು ಇದೆಯಾ ?’, ಇದನ್ನು ನೋಡುವಂತೆ ಕರಪತ್ರದಲ್ಲಿ ಇತ್ತು. ಇದರಿಂದ ಅವರ ಮೇಲೆ ಭಾ.ದಂ.ವಿ. ಕಲಂ ೧೫೩ ಅ (ಧರ್ಮ, ವಂಶ, ಜನ್ಮಸ್ಥಾನ, ನಿವಾಸಸ್ಥಾನ, ಭಾಷೆ ಮುಂತಾದ ಕಾರಣಗಳಿಂದ ವಿವಿಧ ಗುಂಪುಗಳಲ್ಲಿ ಶತ್ರುತ್ವ ಹೆಚ್ಚಿಸುವುದು ಮತ್ತು ಸದ್ಭಾವನೆ ಕಾಪಾಡುವುದಕ್ಕೆ ಪ್ರತಿಕೂಲ ಕೃತ್ಯಗಳು ನಡೆಸುವುದು) ಮತ್ತು ೫೦೫(ಸಾರ್ವಜನಿಕ ರೋಷ ನಿರ್ಮಾಣ ಮಾಡುವ ಹೇಳಿಕೆ) ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

  • ಹಿಂದೂಗಳಿಗೆ ಹಿಂದೂಗಳ ಅಂಗಡಿಯಿಂದಲೇ ವಸ್ತುಗಳು ಖರೀದಿಸಲು ಕರೆ ನೀಡಿರುವುದು ಈ ದೇಶದಲ್ಲಿ ಅಪರಾಧವಾಗಿದೆ, ಇದು ಹಿಂದೂಗಳಿಗೆ ಯಾವಾಗ ಗಮನಕ್ಕೆ ಬರುವುದು ? ಈ ಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ !
  • ತಮಿಳುನಾಡಿನಲ್ಲಿ ಮುಸಲ್ಮಾನ ಪ್ರೇಮಿ ಇರುವ ತಥಾಕಥಿತ ನಾಸ್ತಿಕವಾದಿ ದ್ರಾವಿಡ ಮುನ್ನೆತ್ರಿ ಕಳಘಂ (ದ್ರಾವಿಡ ಪ್ರಗತಿ ಸಂಘ) ಈ ಪಕ್ಷದ ಸರಕಾರ ಇರುವಾಗ ಇದಕ್ಕಿಂತ ಬೇರೆ ಏನು ಘಟಿಸಲು ಸಾಧ್ಯ ?