‘ದೇವಸ್ಥಾನದಲ್ಲಿ ಮಹಿಳೆಯರ ಶೋಷಣೆ ಆಗುತ್ತದೆ !’ (ಅಂತೆ)

ಆಮ್ ಆದ್ಮಿ ಪಕ್ಷದ ಗುಜರಾತ ಪ್ರದೇಶಾಧ್ಯಕ್ಷ ಗೋಪಾಲ ಇಟಾಲಿಯಾ ಇವರ ಖೇದಕರ ಹೇಳಿಕೆ

ಆಮ್ ಆದ್ಮಿ ಪಕ್ಷದ ಗುಜರಾತ ಪ್ರದೇಶಾಧ್ಯಕ್ಷ ಗೋಪಾಲ ಇಟಾಲಿಯಾ

ಕರ್ಣಾವತಿ (ಗುಜರಾತ) – ಆಮ್ ಆದ್ಮಿ ಪಕ್ಷದ ಗುಜರಾತ ರಾಜ್ಯದ ಪ್ರದೇಶಾಧ್ಯಕ್ಷ ಗೋಪಾಲ್ ಇಟಾಲಿಯಾ ಇವರು, ‘ದೇವಸ್ಥಾನಕ್ಕೆ ಹಾಗೂ ಪ್ರವಚನಕ್ಕೆ ಮಹಿಳೆಯರು ಹೋಗಬಾರದು, ಅಲ್ಲಿ ಅವರ ಶೋಷಣೆ ಮಾಡಲಾಗುತ್ತದೆ’, ಎಂದು ಹೇಳಿಕೆ ನೀಡಿದ್ದಾರೆ. ಭಾಜಪದ ಸಾಮಾಜಿಕ ಮಾಧ್ಯಮದ ಪ್ರಮುಖ ಅಮಿತ ಮಾನವಿಯ ಇವರು ಅವರ ಟ್ವಿಟರ್ ಖಾತೆಯಿಂದ ಗೋಪಾಲ್ ಇಟಾಲಿಯಾ ಇವರ ಈ ಹೇಳಿಕೆಯ ವಿಡಿಯೋ ಪ್ರಸಾರ ಮಾಡಿದ್ದಾರೆ. ಈ ಮೊದಲು ಇಟಾಲಿಯಾ ಇವರು ಪ್ರಧಾನಿ ಮೋದಿಯವರಿಗೆ ‘ನೀಚ’ ಎಂದಿದ್ದರು ಹಾಗೂ ಹಿಂದೂ ದೇವತೆಗಳ ವಿಷಯವಾಗಿ ಕೂಡ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

ಈ ವಿಡಿಯೋದಲ್ಲಿ ಗೋಪಾಲ್ ಇಟಾಲಿಯಾ ಇವರು ಹರಿ ಮೋಹನ್ ಧವನ ಮತ್ತು ಅರುಣ ಕುಮಾರ ಇವರ ಒಂದು ಪುಸ್ತಕ ತೋರಿಸುತಿದ್ದಾರೆ. ಆ ಸಮಯದಲ್ಲಿ ಅವರು, ‘ನಾನು ನನ್ನ ಮಾತೆಯರಿಗೆ ಮತ್ತು ಭಗಿನಿಯರಿಗೆ ದೇವಸ್ಥಾನಕ್ಕೆ ಮತ್ತು ಪ್ರವಚನಕ್ಕೆ ಹೋಗಬೇಡಿ. ಅಲ್ಲಿ ಹೋಗಿ ನಿಮಗೆ ಏನೂ ಸಿಗುವುದಿಲ್ಲ. ಇವು ಮಹಿಳೆಯರ ಶೋಷಣೆ ಮಾಡುವ ಸ್ಥಳಗಳಾಗಿವೆ. ನಿಮಗೆ ಏನಾದರೂ ನಿಮ್ಮ ಹಕ್ಕು ಬೇಕೆಂದರೆ ಹಾಗೂ ನಿಮಗೆ ಈ ದೇಶದ ಮೇಲೆ ಅಧಿಕಾರ ನಡೆಸುವುದಿದ್ದರೆ, ಪ್ರವಚನದಲ್ಲಿ ನೃತ್ಯ ಮಾಡುವುದಕ್ಕಿಂತ ಈ ಪುಸ್ತಕ ಓದಿರಿ, ಎಂದು ಗೋಪಾಲ್ ಇಟಾಲಿಯಾ ಇವರು ಮನವಿ ಮಾಡಿದರು.

ಸಂಪಾದಕೀಯ ನಿಲುವು

  • ಗುಜರಾತನಲ್ಲಿ ಭಾಜಪ ಸರಕಾರ ಇರುವಾಗ ಇಟಾಲಿಯಾ ಇವರ ಮೇಲೆ ಇಲ್ಲಿಯವರೆಗೆ ಏಕೆ ಕ್ರಮ ಕೈಗೊಂಡಿಲ್ಲ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಮೂಡುತ್ತದೆ !
  • ಮದರಸಾಗಳಲ್ಲಿ ಮತ್ತು ಚರ್ಚಗಳಲ್ಲಿ ಮಹಿಳೆಯರ ಶೋಷಣೆ ಆಗುತ್ತದೆ, ಇದರ ಹಲವಾರು ಉದಾಹರಣೆಗಳು ದೇಶದಲ್ಲಿ ಮತ್ತು ವಿದೇಶದಲ್ಲಿ ಕಂಡು ಬಂದಿದೆ ಮತ್ತು ಕಾಣುತ್ತಿದೆ, ಹೀಗಿರುವಾಗ ಈ ಸಂದರ್ಭದಲ್ಲಿ ಯಾವುದೇ ಜಾತ್ಯತೀತ ನಾಯಕರು ಬಾಯಿ ತೆರೆಯುವುದಿಲ್ಲ ಇದನ್ನು ಅರಿತುಕೊಳ್ಳಿರಿ !
  • ದೆಹಲಿಯ ಮುಖ್ಯಮಂತ್ರಿ, ಅರವಿಂದ ಕೇಜ್ರಿವಾಲ ಇವರ ಸರಕಾರದಿಂದ ಹಿರಿಯ ನಾಗರೀಕರಿಗೆ ದೇಶದಲ್ಲಿನ ತೀರ್ಥಕ್ಷೇತ್ರಗಳು ಹಾಗೂ ದೇವಸ್ಥಾನದಲ್ಲಿ ನಿಶುಲ್ಕ ದರ್ಶನಕ್ಕಾಗಿ ಯೋಜನೆಗಳು ಜಾರಿಗೊಳಿಸಲಾಗುತ್ತಿದೆ. ಆದ್ದರಿಂದ ಕೇಜ್ರಿವಾಲರಿಗೆ ಇಟಾಲಿಯಾ ಇವರ ಹೇಳಿಕೆ ಒಪ್ಪಿಗೆ ಇದೆಯೇ ? ಇಲ್ಲವಾದರೆ ಅವರ ಮೇಲೆ ಯಾವಾಗ ಕ್ರಮ ತೆಗೆದುಕೊಳ್ಳಲಾಗುವುದು, ಇದನ್ನು ಅವರು ಹೇಳಬೇಕು !