‘ಭಾಗ್ಯನಗರದಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ ಮುಸಲ್ಮಾನ ಮಹಿಳೆಯರು ಮನೋರೋಗಿಗಳು !’(ಅಂತೆ) – ಪೊಲೀಸರು ಹೇಳಿಕೆ

ಭಾಗ್ಯನಗರ (ತೆಲಂಗಾಣ) : ಸೆಪ್ಟೆಂಬರ್ ೨೭ ರಂದು ಖೈರಾತಾಬಾದ್‌ನಲ್ಲಿ ಬುರ್ಖಾ ಧರಿಸಿದ್ದ ಇಬ್ಬರು ಮುಸಲ್ಮಾನ ಮಹಿಳೆಯರನ್ನು ಶ್ರೀ ದುರ್ಗಾ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸ ಉಪಾಯುಕ್ತ ರಾಜೆಶ ಕುಮಾರ ಇವರು, ಇಬ್ಬರೂ ಮನೋರೋಗಿಗಳಾಗಿದ್ದರು ಎಂದು ತಿಳಿಸಿದ್ದಾರೆ. ಈ ಹಿಂದೆ ಚರ್ಚ್‌ನ ಹೊರಗಿರುವ ಮೇರಿಯ ವಿಗ್ರಹವನ್ನು ಮುರಿಯಲು ಪ್ರಯತ್ನಿಸಿದ ಆರೋಪವೂ ಈ ಮಹಿಳೆಯರ ಮೇಲಿದೆ. ಅವರು ೨೦೧೮ ರಲ್ಲಿ ಜೆದ್ದಾದಿಂದ ಭಾರತಕ್ಕೆ ಮರಳಿದ್ದರು. ಅಂದಿನಿಂದ ಅವರು ಮಾನಸಿಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

೧. ಈ ಇಬ್ಬರು ಮಹಿಳೆಯರ ಸಹೋದರನಾದ ಅಸೀಮುದ್ದೀನ್‌ನು, ನನ್ನ ಸಹೋದರಿಯರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರು ಈ ಹಿಂದೆ ಯವತ್ತೂ ಹೀಗೆ ಮಾಡಿಲ್ಲ. ನಾನು ಕ್ಷಮೆ ಕೇಳುತ್ತಾನೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದನು.

೨. ಈ ಪ್ರಕರಣದಲ್ಲಿ ನಾಮಪಲ್ಲಿ ಮತದಾನ ಕ್ಷೇತ್ರದ ಶಾಸಕ ಜೆ.ಎಚ್. ಮೆರಾಜ ಇವನು ಪ್ರಸಾರ ಮಾಧ್ಯಮಗಳಿಗೆ, ಈ ವಿಚಾರದಲ್ಲಿ ನಾನು ಪೊಲೀಸ್ ಆಯುಕ್ತರ ಬಳಿ ಸರಿಯಾಗಿ ತನಿಖೆಗೆ ಒತ್ತಾಯಿಸಿದ್ದೇನೆ ಒಬ್ಬ ವ್ಯಕ್ತಿಯು ಈ ಮಹಿಳೆಯರನ್ನು ವಿಗ್ರಹವನ್ನು ಧ್ವಂಸ ಮಾಡುತ್ತಿರುವುದನ್ನು ತಡೆಯಲು ಪ್ರಯತ್ನಿಸಿದರು. ಆ ವ್ಯಕ್ತಿಯ ಮೇಲೆಯೂ ಹಲ್ಲೆ ನಡೆಸಿದ ಆರೋಪವೂ ಅವರ ಮೇಲಿದೆ.

ಸಂಪಾದಕೀಯ ನಿಲುವು

  • ಮುಸಲ್ಮಾನರು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದಾಗ, ಹಲವಾರು ಬಾರಿ ಪೊಲೀಸರು ಅವರನ್ನು ಮನೋರೋಗಿಗಳು’ ಎಂದು ಕರೆಯುವ ಮೂಲಕ ಹಿಂದೂಗಳ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಾರೆ. ಈಗಲೂ ಹಾಗೆ ಮಾಡುತ್ತಿದ್ದಾರೆಂದು ಹೇಳಬಹುದು !
  • ಒಂದು ವೇಳೆ ಈ ಮಹಿಳೆಯರು ಮನೋರೋಗಿಯಾಗಿದ್ದರೆ ಹಿಂದೂಗಳ ಮತ್ತು ಕ್ರೈಸ್ತರ ಧಾರ್ಮಿಕ ವಿಗ್ರಹಗಳನ್ನು ಧ್ವಂಸಗೊಳಿಸುವ ಬುದ್ಧಿ ಹೇಗೆ ಬರುತ್ತದೆ ? ಅವರು ಮಸೀದಿಗೆ ಅಥವಾ ಮಸಲ್ಮಾನರ ಗೋರಿಗೆ ಹೋಗಿ ಅದನ್ನು ಏಕೆ ಮಾಡುವುದಿಲ್ಲ ? ಇದಕ್ಕೆ ಪೊಲೀಸರು ಉತ್ತರಿಸುವರೇ ?