ಕರ್ನಾಟಕದಲ್ಲಿ ಬಾಂಬ್ ಸ್ಫೋಟ ಮಾಡಲು ಯತ್ನಿಸಿದ ಇಸ್ಲಾಮಿಕ್ ಸ್ಟೇಟ್‌ನ ೩ ಭಯೋತ್ಪಾದಕರನ್ನು ಶಿವಮೊಗ್ಗದಿಂದ ವಶಕ್ಕೆ !

ಮೂವರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಭಯೋತ್ಪಾದಕನೇ ಅವರ ನಾಯಕ !

ಶಿವಮೊಗ್ಗ – ಕರ್ನಾಟಕ ಪೊಲೀಸರು ಶಿವಮೊಗ್ಗದಿಂದ ಮೂರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ‘ಈ ಮೂವರೂ ರಾಜ್ಯದಲ್ಲಿ ದೊಡ್ಡಪ್ರಮಾಣದಲ್ಲಿ ಬಾಂಬ್ ಸ್ಫೋಟವನ್ನು ನಡೆಸುವ ಸಿದ್ಧತೆಯಲ್ಲಿದ್ದರು’, ಎಂದು ಗುಪ್ತಚರ ಸಂಸ್ಥೆಗಳ ಮೂಲಕ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮೂವರನ್ನು ಶಾರೀಕ್, ಮಾಜಿ ಮತ್ತು ಸೈಯದ್ ಯಾಸಿನ್ ಎಂದು ಗುರುತಿಸಲಾಗಿದ್ದು, ಅವರಲ್ಲಿ ಓರ್ವ ಎಲೆಕ್ಟ್ರಿಕಲ್ ಎಂಜಿನಿಯರ್ ಮತ್ತು ಅವನೇ ಅವರ ನಾಯಕನಾಗಿದ್ದಾನೆ.

೧. ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿಗನುಸಾರ ಈ ಮೂವರು ಇಸ್ಲಾಮಿಕ್ ಸ್ಟೇಟ್ ಹೇಳಿದಂತೆ ಭಯೋತ್ಪಾದಕ ತರಬೇತಿಯನ್ನು ಪಡೆದಿದ್ದರು. ಅವರು ಶಿವಮೊಗ್ಗ ಮತ್ತು ತೀರ್ಥಹಳ್ಳಿಯಳ್ಳಿದ್ದು, ಮಂಗಳೂರಿನೊಂದಿಗೆ ಸಂಪರ್ಕ ಹೊಂದಿದ್ದರು.

೨. ಶಿವಮೊಗ್ಗ ಇದು ದೇಶವಿರೋಧಿ ಚಟುವಟಿಕೆಗಳ ಕೇಂದ್ರವಾಗಿದೆ. ಕಳೆದ ತಿಂಗಳು, ಆಗಸ್ಟ್ ೧೫ ರಂದು ಶಿವಮೊಗ್ಗದಲ್ಲಿ ಸ್ವತಂತ್ರವೀರ ಸಾವರಕರ ಅವರ ಭಿತ್ತಿಚಿತ್ರಗಳನ್ನು ಹರಿದುಹಾಕಲಾಗಿತ್ತು ಮತ್ತು ರಾಷ್ಟ್ರಧ್ವಜವನ್ನು ಸಹ ಅಗೌರವಿಸಲಾಯಿತು. ಈ ಕೃತ್ಯ ಎಸಗಿದ ಮತಾಂಧ ಮುಸ್ಲಿಮರು ಟಿಪ್ಪು ಸುಲ್ತಾನ್ ಮತ್ತು ಮಹಮ್ಮದ್ ಅಲಿ ಜಿನ್ನಾ ಅವರ ಭಿತ್ತಿಚಿತ್ರಗಳನ್ನು ಹಾಕಲು ಪ್ರಯತ್ನಿಸುತ್ತಿದ್ದರು. ಇಲ್ಲಿಯೇ ಪ್ರೇಮ್ ಸಿಂಗ್ ಎಂಬ ಹಿಂದೂ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಯಿತು.

ಸಂಪಾದಕೀಯ ನಿಲುವು

  • ‘ಮುಸ್ಲಿಂ ಯುವಕರಿಗೆ ಮುಖ್ಯವಾಹಿನಿಯ ಶಿಕ್ಷಣ ನೀಡಿದರೆ ಜಿಹಾದಿ ಭಯೋತ್ಪಾದನೆಯಿಂದ ಅವರನ್ನು ಹಿಮ್ಮೆಟ್ಟಿಸುತ್ತಾರೆ’, ಎನ್ನುವವರಿಗೆ ಕಪಾಳಮೋಕ್ಷ !
  • ಕರ್ನಾಟಕ ಪೊಲೀಸರು ಈ ಭಯೋತ್ಪಾದಕರ ಹಿಂದಿರುವ ಇಡೀ ಗುಂಪನ್ನು ಪತ್ತೆಹಚ್ಚಿ, ಕಠಿಣ ಕ್ರಮಕೈಗೊಳ್ಳಬೇಕು !