ಹಿಂದೂಗಳ ಮೆರವಣಿಗೆಗಳ ಮೇಲೆ ಮಸೀದಿಯಿಂದ ಕಲ್ಲು ತೂರಾಟ : ೬ ಪೊಲೀಸ ಸಹಿತ ಅನೇಕ ಜನರಿಗೆ ಗಾಯ !

ಸೀವಾನ (ಬಿಹಾರ) – ಇಲ್ಲಿಯ ಮಹಾವೀರಿ ಅಖಾಡಾದ ಮೆರವಣಿಗೆಯ ಮೇಲೆ ಮಸೀದಿಯ ಬಳಿ ನಡೆದ ವಿವಾದದಲ್ಲಿ ಮತಾಂಧ ಮುಸಲ್ಮಾನರು ಮಸೀದಿಯಿಂದ ಕಲ್ಲುತೂರಾಟ ನಡೆಸಿದರು. ಇದರಲ್ಲಿ ೬ ಕ್ಕಿಂತ ಹೆಚ್ಚಿನ ಪೊಲೀಸರು ಗಾಯಗೊಂಡರು ಹಾಗೂ ಎರಡೂ ಬದಿಯ ಕೆಲವು ಜನರು ಗಾಯಗೊಂಡರು.
ಕಲ್ಲುತೂರಾಟದ ನಂತರ ಓಡಿ ಹೋಗುವ ಪೊಲೀಸರ ಬೆನ್ನಹತ್ತಿ ಹೋಗಿ ಅವರನ್ನು ಹೊಡೆಯಲಾಯಿತು. ಪೊಲೀಸರು ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೦ ಜನರನ್ನು ಬಂಧಿಸಿದ್ದಾರೆ. ಹಿಂಸಾಚಾರದ ಈ ಘಟನೆ ಸಪ್ಟೆಂಬರ್ ೮ ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.

ಪಾಟಲಿಪುತ್ರದಲ್ಲಿ ಮಸೀದಿಯ ಬಳಿ ಮತಾಂಧದಿಂದ ಪೊಲೀಸರ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಿಡಿಸಿಕೊಂಡು ಓಡಿ ಹೋಗಲು ಬಿಟ್ಟರು !

ಇಲ್ಲಿಯ ಪಿರ ಬಹೊರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಶಿಯಾ ಮಸಿದಿಯ ಹತ್ತಿರ ಕೆಲವು ಜನರು ಶಸ್ತ್ರಾಸ್ತ್ರ ಸಹಿತ ಇರುವ ಮಾಹಿತಿ ದೊರೆತ ನಂತರ ಪೊಲೀಸರು ಅವರನ್ನು ಬಂಧಿಸುವುದಕ್ಕೆ ಘಟನಾ ಸ್ಥಳಕ್ಕೆ ಹೋಗಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು; ಆದರೆ ನೆರೆಯ ಮತಾಂಧನಿಂದ ಪೊಲೀಸರ ಮೇಲೆ ದಾಳಿ ನಡೆಸಲಾಯಿತು. ಅವನು ಪೊಲೀಸರ ವಶದಲ್ಲಿರುವ ಅಪರಾಧಿಯನ್ನು ಬಿಡಿಸಿ ಅವನಿಗೆ ಓಡಿ ಹೋಗಲು ನೆರವಾದನು. ಆ ಸಮಯದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡನು ನಂತರ ಮತಾಂಧರ ಗುಂಪು ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಗಲಾಟೆ ಮಾಡಿದರು. ಪೊಲೀಸರು ದೂರನ್ನು ದಾಖಲಿಸಿದ್ದು ಅಪರಾಧಿಯ ಶೋಧ ನಡೆಸಿದ್ದಾರೆ.

ಸಂಪಾದಕೀಯ ನಿಲುವು

  • ಹಿಂದೂಗಳ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ತೂರಾಟ ನಡೆಯುತ್ತಿದೆ, ಇದು ಗೊತ್ತಿದ್ದರೂ ಪೊಲೀಸರು ಮೊದಲೇ ಈ ಬಗ್ಗೆ ಏಕೆ ಕಾಳಜಿ ತೆಗೆದುಕೊಳ್ಳಲಿಲ್ಲ ? ಮಸೀದಿಯಿಂದ ಆಗುವ ಈ ರೀತಿಯ ದಾಳಿಯ ಬಗ್ಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ಸಮಾಜವಾದಿ ಪಕ್ಷ, ಎಂಐಎಂ ಮುಂತಾದ ಕಪಟ ಜಾತ್ಯತೀತರು ಬಾಯಿ ಬಿಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಹಿಂದೂಗಳ ಮೆರವಣಿಗೆಯ ಮೇಲೆ ಮಸೀದಿಯಿಂದ ನಡೆಯುವ ಕಲ್ಲುತೂರಾಟವನ್ನು ಶಾಶ್ವತವಾಗಿ ನಿಲ್ಲಿಸುವುದಕ್ಕೆ ಹಿಂದೂ ರಾಷ್ಟ್ರವೇ ಬೇಕು !