
ಸೀವಾನ (ಬಿಹಾರ) – ಇಲ್ಲಿಯ ಮಹಾವೀರಿ ಅಖಾಡಾದ ಮೆರವಣಿಗೆಯ ಮೇಲೆ ಮಸೀದಿಯ ಬಳಿ ನಡೆದ ವಿವಾದದಲ್ಲಿ ಮತಾಂಧ ಮುಸಲ್ಮಾನರು ಮಸೀದಿಯಿಂದ ಕಲ್ಲುತೂರಾಟ ನಡೆಸಿದರು. ಇದರಲ್ಲಿ ೬ ಕ್ಕಿಂತ ಹೆಚ್ಚಿನ ಪೊಲೀಸರು ಗಾಯಗೊಂಡರು ಹಾಗೂ ಎರಡೂ ಬದಿಯ ಕೆಲವು ಜನರು ಗಾಯಗೊಂಡರು.
ಕಲ್ಲುತೂರಾಟದ ನಂತರ ಓಡಿ ಹೋಗುವ ಪೊಲೀಸರ ಬೆನ್ನಹತ್ತಿ ಹೋಗಿ ಅವರನ್ನು ಹೊಡೆಯಲಾಯಿತು. ಪೊಲೀಸರು ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೦ ಜನರನ್ನು ಬಂಧಿಸಿದ್ದಾರೆ. ಹಿಂಸಾಚಾರದ ಈ ಘಟನೆ ಸಪ್ಟೆಂಬರ್ ೮ ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.
बिहार के सीवान में महावीरी अखाड़ा शोभायात्रा पर असामाजिक तत्वों ने पथराव किया; दो समुदाय आए आमने-सामने; 6 पुलिसकर्मी भी घायल #siwan #bihar https://t.co/khSxPo3Niv
— Dainik Bhaskar (@DainikBhaskar) September 9, 2022
ಪಾಟಲಿಪುತ್ರದಲ್ಲಿ ಮಸೀದಿಯ ಬಳಿ ಮತಾಂಧದಿಂದ ಪೊಲೀಸರ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಿಡಿಸಿಕೊಂಡು ಓಡಿ ಹೋಗಲು ಬಿಟ್ಟರು !
ಇಲ್ಲಿಯ ಪಿರ ಬಹೊರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಶಿಯಾ ಮಸಿದಿಯ ಹತ್ತಿರ ಕೆಲವು ಜನರು ಶಸ್ತ್ರಾಸ್ತ್ರ ಸಹಿತ ಇರುವ ಮಾಹಿತಿ ದೊರೆತ ನಂತರ ಪೊಲೀಸರು ಅವರನ್ನು ಬಂಧಿಸುವುದಕ್ಕೆ ಘಟನಾ ಸ್ಥಳಕ್ಕೆ ಹೋಗಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು; ಆದರೆ ನೆರೆಯ ಮತಾಂಧನಿಂದ ಪೊಲೀಸರ ಮೇಲೆ ದಾಳಿ ನಡೆಸಲಾಯಿತು. ಅವನು ಪೊಲೀಸರ ವಶದಲ್ಲಿರುವ ಅಪರಾಧಿಯನ್ನು ಬಿಡಿಸಿ ಅವನಿಗೆ ಓಡಿ ಹೋಗಲು ನೆರವಾದನು. ಆ ಸಮಯದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡನು ನಂತರ ಮತಾಂಧರ ಗುಂಪು ಪೊಲೀಸ್ ಠಾಣೆಗೆ ಹೋಗಿ ಅಲ್ಲಿ ಗಲಾಟೆ ಮಾಡಿದರು. ಪೊಲೀಸರು ದೂರನ್ನು ದಾಖಲಿಸಿದ್ದು ಅಪರಾಧಿಯ ಶೋಧ ನಡೆಸಿದ್ದಾರೆ.
ಸಂಪಾದಕೀಯ ನಿಲುವು
|
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!