ಯುಗಗಳಿಗನುಸಾರ ಮನುಷ್ಯನಿಗೆ ಭೋಗಿಸಬೇಕಾಗುವ ರೋಗಗಳು, ಅವುಗಳ ಸ್ವರೂಪ ಮತ್ತು ಅವುಗಳ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಅಧರ್ಮಾಚರಣೆ ಮತ್ತು ಅದರಿಂದ ನಿರ್ಮಾಣವಾದ ಪಾಪ, ಇದು ಪ್ರತಿಯೊಂದು ರೋಗದ ಮೂಲ ಕಾರಣವಾಗಿದೆ. ಸತ್ಯಯುಗದಲ್ಲಿ ಎಲ್ಲ ಜನರೂ ಧರ್ಮಾಚರಣಿಗಳಾಗಿದ್ದರು. ಆದುದರಿಂದ ಆಗ ಮನುಷ್ಯನಿಗೆ ದುಃಖ ಅಥವಾ ತೊಂದರೆಗಳನ್ನು ಭೋಗಿಸಬೇಕಾಗುತ್ತಿರಲಿಲ್ಲ. ತ್ರೇತಾಯುಗದಲ್ಲಿ ಹೆಚ್ಚಿನ ಜನರು ಧರ್ಮಾಚರಣೆಯನ್ನು ಮಾಡುತ್ತಿದ್ದರು; ಆದರೆ ಅವರಿಂದ ತಿಳಿದು ಅಥವಾ ತಿಳಿಯದೇ ಕೆಲವು ಪಾಪಕರ್ಮಗಳೂ ಆಗುತ್ತಿದ್ದವು. ದ್ವಾಪರಯುಗದಲ್ಲಿ ಮನುಷ್ಯನ ಮಟ್ಟ ಇನ್ನೂ ಕುಸಿಯಿತು. ಆದುದರಿಂದ ಅನೇಕ ಜನರು ಉದ್ದೇಶಪೂರ್ವಕವಾಗಿ ಪಾಪಕರ್ಮಗಳನ್ನು ಮಾಡತೊಡಗಿದರು. ಇದರಿಂದ ಮನುಷ್ಯನಿಗೆ ವಿವಿಧ ರೀತಿಯ ತೊಂದರೆಗಳಾಗತೊಡಗಿದವು. ಕಲಿಯುಗದ ಪ್ರಭಾವದಿಂದ ಹೆಚ್ಚಿನ ಮನುಷ್ಯರು ಅಧರ್ಮಾಚರಣೆಯನ್ನು ಮಾಡುತ್ತಾರೆ. ಆದುದರಿಂದ ಅವರಿಗೆ ಬಹಳಷ್ಟು ಪಾಪ ತಗಲುತ್ತದೆ. ಆದುದರಿಂದ ಅವರಿಗೆ ವಿವಿಧ ರೀತಿಯ ದುಃಖ ಮತ್ತು ತೊಂದರೆಗಳನ್ನು ಭೋಗಿಸಬೇಕಾಗುತ್ತದೆ.

೧. ಯುಗಗಳು, ಮನುಷ್ಯ ಧರ್ಮಾಚರಣೆ ಮಾಡುವ ಪ್ರಮಾಣ, ಮನುಷ್ಯನಿಗೆ ಪಾಪ ತಗಲುವ ಪ್ರಮಾಣ ಮತ್ತು ಮನುಷ್ಯನಿಗಾಗುವ ರೋಗಗಳ ಪ್ರಮಾಣ

೨. ಕಲಿಯುಗದಲ್ಲಿ ಮನುಷ್ಯನ ದುರ್ಗತಿ ಮತ್ತು ಅವನಿಗೆ ಭೋಗಿಸಬೇಕಾಗುವ ವಿವಿಧ ರೀತಿಯ ತೊಂದರೆಗಳು

ಕಲಿಯುಗದಲ್ಲಿ ಮನುಷ್ಯನು ಅಧರ್ಮಾಚರಣಿ ಆಗಿರುವುದರಿಂದ ಅವನ ಲಿಂಗದೇಹವು ಬಹಳಷ್ಟು ಪ್ರಮಾಣದಲ್ಲಿ ರಜ ತಮ ಪ್ರಧಾನವಾಗಿದೆ. ಅದೇ ರೀತಿ ಮನುಷ್ಯನು ಮಾಡಿದ ಅಧರ್ಮಾಚರಣೆಯಿಂದ ಪೃಥ್ವಿಯ ಮೇಲಿನ ವಾಯುಮಂಡಲವೂ ರಜ-ತಮ ಲಹರಿಗಳಿಂದ ಕಲುಷಿತಗೊಂಡಿದೆ. ಇದರಿಂದ ಪಾತಾಳದಲ್ಲಿ ವಾಸಿಸುವ ವಿವಿಧ ರೀತಿಯ ರಜ-ತಮ ಪ್ರಧಾನ ಕೆಟ್ಟ ಶಕ್ತಿಗಳು ಕಲಿಯುಗದಲ್ಲಿ ಪೃಥ್ವಿಯ ಮೇಲೆ ಮುಕ್ತವಾಗಿ ಸಂಚಾರ ಮಾಡುತ್ತಿವೆ. ಆದುದರಿಂದ ಇತರ ಯುಗಗಳ ತುಲನೆಯಲ್ಲಿ ಕಲಿಯುಗದ ಮನುಷ್ಯನಿಗೆ ಕೆಟ್ಟ ಶಕ್ತಿಗಳ ತೀವ್ರ ತೊಂದರೆಗಳನ್ನು ಭೋಗಿಸಬೇಕಾಗುತ್ತಿದೆ. ಪೃಥ್ವಿಯ ಮೇಲಿನ ಶೇ. ೮೦ ರಷ್ಟು ವ್ಯಕ್ತಿಗಳ ಜೀವನದಲ್ಲಿ ಕೆಟ್ಟ ಶಕ್ತಿಗಳು ಹಸ್ತಕ್ಷೇಪ ಮಾಡಿದುದರಿಂದ ಅವರಿಗೆ ಶಾರೀರಿಕ ಸ್ತರದಲ್ಲಿ ವಿವಿಧ ಪ್ರಕಾರದ ರೋಗಗಳು, ಮಾನಸಿಕ ಸ್ತರದಲ್ಲಿ ಒತ್ತಡ, ಭಯ ಮತ್ತು ಮನೋರಾಜ್ಯದಲ್ಲಿ ರಮಿಸುವುದು, ಬೌದ್ಧಿಕ ಸ್ತರದಲ್ಲಿ ಬುದ್ಧಿ ಭ್ರಷ್ಟವಾದುದರಿಂದ ವ್ಯಕ್ತಿಗಳು ಅಧರ್ಮಾಚರಣೆಯನ್ನು ಮಾಡುವುದು ಮತ್ತು ಕೆಟ್ಟ ಶಕ್ತಿಗಳು ಮನುಷ್ಯರ ಮೇಲೆ ಆಕ್ರಮಣ ಮಾಡಿ ತೊಂದರೆಗಳನ್ನು ಕೊಡುವುದು’, ಇಂತಹ ವಿವಿಧ ರೀತಿಯ ತೊಂದರೆಗಳು ಆಗುತ್ತಿವೆ. ಮನುಷ್ಯನು ಸ್ವತಃ ಅಧರ್ಮಾಚರಣೆಯನ್ನು ಮಾಡುತ್ತಿರುವುದರಿಂದ ಅವನ ಮೃತ್ಯುವಿನ ನಂತರ ಅವನು ಸ್ವತಃ ಕೆಟ್ಟ ಶಕ್ತಿಯಾಗಿ ಪೃಥ್ವಿಯ ಮೇಲಿನ ತೊಂದರೆದಾಯಕ ವಾತಾವರಣದಲ್ಲಿ ಸಿಲುಕಿಕೊಳ್ಳುತ್ತಾನೆ. ಆದುದರಿಂದ ಕಲಿಯುಗದಲ್ಲಿ ಪೃಥ್ವಿಯ ಮೇಲೆ ಅನೇಕ ಪ್ರಕಾರದ ಕೆಟ್ಟ ಶಕ್ತಿಗಳ ಸಂಚಾರ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ.

ಕು. ಮಧುರಾ ಭೋಸಲೆ

೩. ಕಲಿಯುಗದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ವ್ಯಕ್ತಿಗಳಿಗೂ ಕೆಟ್ಟಶಕ್ತಿಗಳ ತೊಂದರೆಗಳನ್ನು ಭೋಗಿಸಬೇಕಾಗುವುದು

೩ ಅ. ವ್ಯಷ್ಟಿ ಸ್ತರದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ವ್ಯಕ್ತಿಗಳಿಗೆ ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುವುದು : ಕಲಿಯುಗದಲ್ಲಿ ಮನುಷ್ಯನ ಮತ್ತು ಪೃಥ್ವಿಯ ಮೇಲಿನ ವಾಯುಮಂಡಲದ ಒಟ್ಟು ಸಾತ್ತ್ವಿಕತೆ ನಾಶವಾದುದರಿಂದ ಎಲ್ಲೆಡೆ ಕೆಟ್ಟ ಶಕ್ತಿಗಳ ಸಂಚಾರ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ವ್ಯಷ್ಟಿ ಸ್ತರದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ವ್ಯಕ್ತಿಗಳಿಂದ ವಾತಾವರಣದಲ್ಲಿ ಸಾತ್ತ್ವಿಕ ಲಹರಿಗಳ ಪ್ರಕ್ಷೇಪಣೆಯಾಗುವುದರಿಂದ ವಿಶಿಷ್ಟ ಸ್ಥಾನಗಳಲ್ಲಿನ ಮತ್ತು ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳಿಗೆ ತೊಂದರೆಯಾಗುತ್ತದೆ. ಆದುದರಿಂದ ಕನಿಷ್ಠ ಸ್ತರದಲ್ಲಿನ ಕೆಟ್ಟ ಶಕ್ತಿಗಳು ವ್ಯಷ್ಟಿ ಸ್ತರದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ಸಾಧಕರಿಗೆ ಮಂದ ಮತ್ತು ಮಧ್ಯಮ ಸ್ವರೂಪದ ತೊಂದರೆಗಳನ್ನು ಕೊಡುತ್ತವೆ.

೩ ಆ. ಸಮಷ್ಟಿ ಸ್ತರದಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ವ್ಯಕ್ತಿಗಳಿಗೆ ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುವುದು :

ಬೇರೆ ಬೇರೆ ಸ್ಥಳಗಳಿಗೆ ಹೋಗಿ ಯಜ್ಞಯಾಗಗಳನ್ನು ಮಾಡುವಂತಹ ಸಮಷ್ಟಿ ಸ್ತರದಲ್ಲಿನ ಧರ್ಮಾಚರಣೆಯನ್ನು ಮಾಡುವುದು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡಲು ಸಮಾಜವನ್ನು ಉದ್ಯುಕ್ತಗೊಳಿಸುವುದು ಇವುಗಳಂತಹ ಸಮಷ್ಟಿ ಸಾಧನೆಯನ್ನು ಮಾಡುವ ಸಾಧಕರಿಗೆ ಕೇವಲ ಪೃಥ್ವಿಯ ಮೇಲಿರುವ ಕೆಟ್ಟ ಶಕ್ತಿಗಳಷ್ಟೇ ಅಲ್ಲ, ಪಾತಾಳದಲ್ಲಿನ ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳೂ ಬಹಳಷ್ಟು ಪ್ರಮಾಣದಲ್ಲಿ ತೊಂದರೆಗಳನ್ನು ಕೊಡುತ್ತವೆ. ಆದುದರಿಂದ ಸಾಧಕರಿಗೆ ವಿವಿಧ ರೀತಿಯ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ವರೂಪದ ವಿವಿಧ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ತೊಂದರೆಗಳನ್ನು ಕೇವಲ ಸಾಧಕರಿಗಷ್ಟೇ ಅಲ್ಲ, ಸಮಷ್ಟಿ ಸಂತರು ಮತ್ತು ಸದ್ಗುರುಗಳಿಗೂ ಭೋಗಿಸಬೇಕಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಂತಹ ಸಮಷ್ಟಿ ಮತ್ತು ಅವತಾರಿ ಪರಾತ್ಪರ ಗುರುಗಳು, ಸಾಧಕರು ಮತ್ತು ಸಂತರ ಪ್ರಾಣದ ರಕ್ಷಣೆಯನ್ನು ಮಾಡಲು ಅವರ ಮೇಲಿನ ಕೆಟ್ಟ ಶಕ್ತಿಗಳ ಸಮಷ್ಟಿ ಆಕ್ರಮಣಗಳನ್ನು ತಾವೇ ಸಹಿಸಿ ಸಾವಿರಾರು ಸಾಧಕರ ರಕ್ಷಣೆಯನ್ನು ಮಾಡುತ್ತಿದ್ದಾರೆ.

೪. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪಾತಾಳದಲ್ಲಿನ ವಿವಿಧ ಪ್ರಕಾರದ ಕೆಟ್ಟ ಶಕ್ತಿಗಳ ಅಧ್ಯಯನ ಮಾಡಿ ಅವುಗಳ ತೊಂದರೆಗಳಿಂದ ಸಾಧಕರ ರಕ್ಷಣೆಯನ್ನು ಮಾಡಲು ವಿವಿಧ ಪ್ರಕಾರದ ಆಧ್ಯಾತ್ಮಿಕ ಉಪಾಯಗಳನ್ನು ಕಂಡು ಹಿಡಿಯುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವರ್ಷ ೨೦೦೦ ದಿಂದ ಸಾಧಕರಿಗೆ ತೊಂದರೆಗಳನ್ನು ಕೊಡುವ ಪಾತಾಳದಲ್ಲಿನ ವಿವಿಧ ಪ್ರಕಾರದ ಕೆಟ್ಟ ಶಕ್ತಿಗಳ ಆಳವಾದ ಅಧ್ಯಯನ ಮಾಡಿದರು. ‘ಯಾವ ಪಾತಾಳದಲ್ಲಿನ ಮತ್ತು ಯಾವ ಪ್ರಕಾರದ ಕೆಟ್ಟ ಶಕ್ತಿ ಯಾವ ಸಾಧಕನಿಗೆ ಯಾವ ರೀತಿಯ ತೊಂದರೆಗಳನ್ನು ಕೊಡುತ್ತದೆ’, ಎಂಬುದರ ಬಗ್ಗೆ ಅವರು ಆಳವಾಗಿ ಅಧ್ಯಯನ ಮಾಡಿದರು ಮತ್ತು ಕೆಟ್ಟ ಶಕ್ತಿಗಳ ತೊಂದರೆಗಳ ಪ್ರಭಾವವನ್ನು ಕಡಿಮೆ ಮಾಡಲು ವಿವಿಧ ಪ್ರಕಾರದ ಆಧ್ಯಾತ್ಮಿಕ ಉಪಾಯಗಳನ್ನು ಕಂಡು ಹಿಡಿದರು. ಉದಾ. ಕುಟುಂಬಗಳಲ್ಲಿ ಜಗಳಗಳು ಆಗುತ್ತಿದ್ದರೆ, ಆ ತೊಂದರೆಗಳು ಸಾಧಕರ ಅತೃಪ್ತ ಪಿತೃಗಳಿಂದ ಆಗುತ್ತಿವೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ‘ಶ್ರೀ ಗುರುದೇವ ದತ್ತ |’ ಎಂಬ ನಾಮಜಪವನ್ನು ಮಾಡಲು ಹೇಳಿದರು. ಅದರಂತೆ ಯಾವುದಾದರೊಬ್ಬ ವ್ಯಕ್ತಿಗೆ ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುತ್ತಿದ್ದರೆ, ‘ಶ್ರೀ ಹನುಮತೇ ನಮಃ |’ ಅಥವಾ ‘ಹಂ ಹನುಮತೇ ನಮಃ | ಈ ನಾಮಜಪವನ್ನು ಮಾಡಲು ಹೇಳಿದರು ಮತ್ತು ತೆಂಗಿನಕಾಯಿಯಿಂದ ಆ ವ್ಯಕ್ತಿಯ ದೃಷ್ಟಿ ತೆಗೆದು ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯಲು ಹೇಳಿದರು. ಕೆಟ್ಟ ಶಕ್ತಿಗಳು ಸಾಧಕರ ಪ್ರಾಣಶಕ್ತಿಯನ್ನು ಕಡಿಮೆ ಮಾಡಿದ್ದರೆ, ಅವರ ಪ್ರಾಣಶಕ್ತಿಯನ್ನು ಹೆಚ್ಚಿಸಲು ಅವರಿಗೆ ‘ಶ್ರೀ ಗಣೇಶಾಯ ನಮಃ | ಅಥವಾ ‘ಓಂ ಗಂ ಗಣಪತಯೇ ನಮಃ |’

ಈ ನಾಮಜಪವನ್ನು ಮಾಡಲು ಹೇಳಿದರು. ಅದರಂತೆಯೇ ಅವರು ಪಂಚಮಹಾಭೂತಗಳ ಸ್ತರದಲ್ಲಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನೂ ಕಂಡು ಹಿಡಿದರು. ಇದರಿಂದ ಸಾಧಕರಿಗೆ ೨೦೦೦ ನೇ ಇಸ್ವಿಯಿಂದ ಆಗುತ್ತಿರುವ ಕೆಟ್ಟ ಶಕ್ತಿಗಳ ಸೂಕ್ಷ್ಮದಲ್ಲಿನ ತೊಂದರೆಗಳನ್ನು ಸಹಿಸಲು ಸಾಧ್ಯವಾಯಿತು ಮತ್ತು ಕೆಟ್ಟ ಶಕ್ತಿಗಳ ತೀವ್ರ ತೊಂದರೆಗಳನ್ನು ಭೋಗಿಸುತ್ತಾ ಸಾಧಕರ ಸಾಧನೆಯೂ ಆಯಿತು.

ಕೃತಜ್ಞತೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದಲೇ ಕೆಟ್ಟ ಶಕ್ತಿಗಳು ಮಾಡಿದ ಮಾರಣಾಂತಿಕ ಆಕ್ರಮಣಗಳಿಂದ ಸನಾತನದ ಸಾವಿರಾರು ಸಾಧಕರ ರಕ್ಷಣೆಯಾಗುತ್ತಿದೆ. ಇದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ. ಅವರು ಕೇವಲ ಕೆಟ್ಟ ಶಕ್ತಿಗಳ ತೊಂದರೆಗಳಿಂದಷ್ಟೇ ಅಲ್ಲ, ಅವರು ಪೃಥ್ವಿಯ ಮೇಲೆ ಪುನಃ ಪುನಃ ಜನ್ಮಕ್ಕೆ ಬರುವ ಈ ಭವರೋಗದಿಂದಲೂ ಸಾಧಕರನ್ನು ಬಿಡುಗಡೆ ಮಾಡುತ್ತಿದ್ದಾರೆ’, ಇದಕ್ಕಾಗಿ ಮೋಕ್ಷಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’ – ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೪) (ಸೂಕ್ಷದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೭.೯.೨೦೨೧)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.