|

ನವದೆಹಲಿ – ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಇವರು ಒಂದು ರಹಸ್ಯ ಬಯಲು ಪಡಿಸಿದ್ದಾರೆ. ಅವರು, ‘೧೯೯೯ ರಲ್ಲಿ ಮೊಹಾಲಿ (ಪಂಜಾಬ) ಅಲ್ಲಿ ಒಂದು ಪಂದ್ಯದಲ್ಲಿ ನಾನು ಭಾರತದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಇವರ ಮೂಳೆಮುರಿಯಲು ಬಯಸಿದ್ದೆ.’ ಎಂದು ಅವರು ಹೇಳಿದರು. ಬರುವ ಆಗಸ್ಟ್ ೨೮ ರಂದು ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಏಷ್ಯಾ ಕಪ್ ಸ್ಪರ್ಧೆಯ ಪಂದ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟ ಆಟಗಾರ ವೀರೇಂದ್ರ ಸೆಹ್ವಾಗ್ ಇವರ ಜೊತೆ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಅಖ್ತರ್ ಇವರು ಮೇಲಿನ ರಹಸ್ಯ ಬಯಲು ಮಾಡಿದ್ದಾರೆ. ಈ ಮೊದಲು ಸಹ ಶೋಯಬ್ ಅಖ್ತರ್ ಇವರು ಸಚಿನ್ ತೆಂಡೂಲ್ಕರ್ ಇವರ ಬಗ್ಗೆ ಇದೇ ರೀತಿಯ ರಹಸ್ಯ ಬಯಲು ಮಾಡಿದ್ದರು.
ಅಖ್ತರ್ ತಮ್ಮ ಮಾತು ಮುಂದುವರೆಸುತ್ತಾ, ಈ ಪಂದ್ಯದ ಮೊದಲು ನಾನು ಭಾರತೀಯ ಆಟಗಾರರನ್ನು ಗಾಯಗೊಳಿಸುವ ಯೋಜನೆ ಮಾಡಿದ್ದೆ. ಅದರ ಪ್ರಕಾರ ನಾನು ಅವರ ತಲೆ ಮತ್ತು ಮೂಳೆಯನ್ನು ಗುರಿಯಾಗಿಸಿ, ಬೌಲಿಂಗ್ ಮಾಡುತ್ತಿದ್ದೆ. ಸೌರವ್ ಗಂಗೂಲಿ ಇವರಿಗಾಗಿಯೇ ಈ ಯೋಜನೆ ಮಾಡಲಾಗಿತ್ತು. ನಮ್ಮ ಸಂಘದ ಸಭೆಯಲ್ಲಿ ಇದರ ಬಗ್ಗೆ ಚರ್ಚೆಯೂ ಆಗಿತ್ತು. ನನಗೆ, ನೀನು ವೇಗವಾಗಿ ಬೌಲಿಂಗ್ ಮಾಡುವಾಗ ಭಾರತೀಯ ಆಟಗಾರರನ್ನು ಗಾಯಗೊಳಿಸು. ಆಟಗಾರರನ್ನು ಔಟ್ ಮಾಡುವ ಕೆಲಸ ಬೇರೆ ಬೌಲರ್ಗಳು ಮಾಡುತ್ತಾರೆ ಎಂದು ಹೇಳಿದ್ದರು. ಇದರ ಮಾಹಿತಿ ಪಂದ್ಯ ಮುಗಿದ ನಂತರ ನಾನು ಗಾಂಗೂಲಿಯವರಿಗೆ ನೀಡಿದ್ದೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ಡೊಮಿನಿಕನ್ ರಿಪಬ್ಲಿಕ್’ನಲ್ಲಿ ಜೆಟ್ ವಿಮಾನ ಪತನ : ಪೈಲಟ್ ಮತ್ತು ಸಹ-ಪೈಲಟ್ ಸಾವು !
ಮುಸ್ಲಿಂ ಜೊತೆ ನಿಕಾಹ್: 2 ದಿನ ಶವಾಗಾರದಲ್ಲಿ ಪಾರ್ಸಿ ಮಹಿಳೆ ಶವ
ಕೋಟ್ಯಧಿಪತಿ ಹಿಂದೂ ಯುವಕನ ಮತಾಂತರ ಪ್ರಕರಣದಲ್ಲಿ ಮುಸ್ಲಿಂ ಮಹಿಳಾ ಜಿಮ್ ಟ್ರೈನರ್ ಮತ್ತು ಆಕೆಯ ತಂದೆಯ ಬಂಧನ : Shamli Conversion
ಭಾರತ-ನೇಪಾಳ ಗಡಿಯ ಬಳಿ ಸಿಕ್ಕಿಬಿದ್ದ ತೃಣಮೂಲ ಕಾಂಗ್ರೆಸ್ ನಾಯಕ ಜಹಾಂಗೀರ್ ಖಾನ್ : Jahangir Khan Arrest
‘ಬ್ರಿಕ್ಸ್’ ಜಾಗತಿಕ ಆರ್ಥಿಕತೆಯ ಹೊಸ ಮಹಾಶಕ್ತಿ ! – ವ್ಲಾಡಿಮಿರ್ ಪುಟಿನ್