೧೯೯೯ ರ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ಆಟಗಾರರನ್ನು ಗಾಯಗೊಳಿಸುವ ಯೋಜನೆ ಆಗಿತ್ತು !

  • ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಕ್ತರ್ ಇವರ ರಹಸ್ಯ ಸ್ಪೋಟ

  • ಏಷಿಯಾ ಕಪ್ ಸ್ಪರ್ಧೆಯಲ್ಲಿ ಆಗಸ್ಟ್ ೨೮ ರಂದು ಭಾರತ ಪಾಕಿಸ್ತಾನ ಇಬ್ಬರಲ್ಲಿ ಮತ್ತೆ ಪಂದ್ಯ !

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್

ನವದೆಹಲಿ – ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಇವರು ಒಂದು ರಹಸ್ಯ ಬಯಲು ಪಡಿಸಿದ್ದಾರೆ. ಅವರು, ‘೧೯೯೯ ರಲ್ಲಿ ಮೊಹಾಲಿ (ಪಂಜಾಬ) ಅಲ್ಲಿ ಒಂದು ಪಂದ್ಯದಲ್ಲಿ ನಾನು ಭಾರತದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಇವರ ಮೂಳೆಮುರಿಯಲು ಬಯಸಿದ್ದೆ.’ ಎಂದು ಅವರು ಹೇಳಿದರು. ಬರುವ ಆಗಸ್ಟ್ ೨೮ ರಂದು ಭಾರತ ಮತ್ತು ಪಾಕಿಸ್ತಾನ ಇವರಲ್ಲಿ ಏಷ್ಯಾ ಕಪ್ ಸ್ಪರ್ಧೆಯ ಪಂದ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟ ಆಟಗಾರ ವೀರೇಂದ್ರ ಸೆಹ್ವಾಗ್ ಇವರ ಜೊತೆ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಅಖ್ತರ್ ಇವರು ಮೇಲಿನ ರಹಸ್ಯ ಬಯಲು ಮಾಡಿದ್ದಾರೆ. ಈ ಮೊದಲು ಸಹ ಶೋಯಬ್ ಅಖ್ತರ್ ಇವರು ಸಚಿನ್ ತೆಂಡೂಲ್ಕರ್ ಇವರ ಬಗ್ಗೆ ಇದೇ ರೀತಿಯ ರಹಸ್ಯ ಬಯಲು ಮಾಡಿದ್ದರು.

ಅಖ್ತರ್ ತಮ್ಮ ಮಾತು ಮುಂದುವರೆಸುತ್ತಾ, ಈ ಪಂದ್ಯದ ಮೊದಲು ನಾನು ಭಾರತೀಯ ಆಟಗಾರರನ್ನು ಗಾಯಗೊಳಿಸುವ ಯೋಜನೆ ಮಾಡಿದ್ದೆ. ಅದರ ಪ್ರಕಾರ ನಾನು ಅವರ ತಲೆ ಮತ್ತು ಮೂಳೆಯನ್ನು ಗುರಿಯಾಗಿಸಿ, ಬೌಲಿಂಗ್ ಮಾಡುತ್ತಿದ್ದೆ. ಸೌರವ್ ಗಂಗೂಲಿ ಇವರಿಗಾಗಿಯೇ ಈ ಯೋಜನೆ ಮಾಡಲಾಗಿತ್ತು. ನಮ್ಮ ಸಂಘದ ಸಭೆಯಲ್ಲಿ ಇದರ ಬಗ್ಗೆ ಚರ್ಚೆಯೂ ಆಗಿತ್ತು. ನನಗೆ, ನೀನು ವೇಗವಾಗಿ ಬೌಲಿಂಗ್ ಮಾಡುವಾಗ ಭಾರತೀಯ ಆಟಗಾರರನ್ನು ಗಾಯಗೊಳಿಸು. ಆಟಗಾರರನ್ನು ಔಟ್ ಮಾಡುವ ಕೆಲಸ ಬೇರೆ ಬೌಲರ್‌ಗಳು ಮಾಡುತ್ತಾರೆ ಎಂದು ಹೇಳಿದ್ದರು. ಇದರ ಮಾಹಿತಿ ಪಂದ್ಯ ಮುಗಿದ ನಂತರ ನಾನು ಗಾಂಗೂಲಿಯವರಿಗೆ ನೀಡಿದ್ದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಪಾಕಿಸ್ತಾನಿ ಆಟಗಾರರು ಭಾರತದ ಜೊತೆ ಜಿಹಾದಿ ಮಾನಸಿಕತೆಯಿಂದ ಆಟವಾಡುತ್ತಾರೆ. ಇದು ಈಗ ಅಧಿಕೃತವಾಗಿ ಸ್ಪಷ್ಟವಾಗಿದೆ. ಈ ವಿಷಯವಾಗಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯ ಆಡಲು ಒತ್ತಾಯಿಸುವ ಭಾರತದ ಪಾಕಿಸ್ತಾನಿ ಪ್ರೇಮಿಗಳು ಉತ್ತರ ನೀಡುವರೆ ?
  • ಭಾರತದ ತಥಾಕಥಿತ ಸರ್ವಧರ್ಮ ಸಮಭಾವದವರು ‘ಪಾಕಿಸ್ತಾನ ಕ್ರಿಕೆಟ್ ಪಂದ್ಯ ಆಡುವುದರಿಂದ ಎರಡು ದೇಶದ ಸಂಬಂಧ ಸುಧಾರಿಸುವುದು’, ಎಂದು ಹೇಳುತ್ತಾರೆ. ತದ್ವಿರುದ್ಧ ಪಾಕಿಸ್ತಾನವು ಭಾರತದ ವಿರುದ್ಧ ಪಂದ್ಯ ಸೇಡು ತೀರಿಸಿ ಕೊಳ್ಳುವ ಅವಕಾಶವೆಂದು ನೋಡುತ್ತದೆ, ಇದು ಇದರಿಂದ ಸಾಬೀತಾಗಿದೆ !
  • ಇಂತಹ ಪಾಕಿಸ್ತಾನದ ಜೊತೆ ಆಡುವುದು ಎಂದರೆ ನಮ್ಮ ಆಟಗಾರರ ಜೀವದ ಜೊತೆ ಆಡುವ ಹಾಗೆ ! ಆದ್ದರಿಂದ ಕ್ರಿಕೆಟದಲ್ಲಿ ಪಾಕಿಸ್ತಾನಕ್ಕೆ ಸೋಲಿಸುವ ಬದಲು ಸರಕಾರ ಯುದ್ಧ ಭೂಮಿಯಲ್ಲಿ ಪಾಕಿಸ್ತಾನವನ್ನು ಶಾಶ್ವತವಾಗಿ ಸೋಲಿಸಬೇಕೆಂದು ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ !