

ಪರಾತ್ಪರ ಗುರು ಡಾ. ಆಠವಲೆಯವರ ೭೯ ನೇ ಜನ್ಮೋತ್ಸವದ ಸಮಯದಲ್ಲಿ ಸನಾತನದ ಸಂತರಾದ ಪೂ. ರಮಾನಂದ ಗೌಡರಿಗೆ ಬಂದ ಅನುಭೂತಿ
೧. ಪ.ಪೂ. ಗುರುದೇವರ ಜನ್ಮೋತ್ಸವದ ದಿನದಂದು ಅವರ ಮಾರ್ಗದರ್ಶನದ ಚಿತ್ರ ಸುರುಳಿಯನ್ನು ನೋಡುವಾಗ ‘ಗುರುದೇವರನ್ನು ನೋಡುತ್ತಲೇ ಇರಬೇಕು’, ಎಂದೆನಿಸಿ ಅತ್ಯಂತ ಆನಂದವಾಗುವುದು
‘೨೦೨೧ ನೇ ಇಸವಿಯಲ್ಲಿ ಪ.ಪೂ. ಗುರುದೇವರ ಜನ್ಮೋತ್ಸವದ ದಿನದಂದು ಅವರು ಸಾಧಕರಿಗೆ ಮಾರ್ಗದರ್ಶನ ಮಾಡುತ್ತಿರುವ ಚಿತ್ರಸುರುಳಿಯನ್ನು ನೋಡುತ್ತಿರುವಾಗ ‘ಗುರುದೇವರನ್ನು ಇನ್ನೂ ನೋಡಬೇಕು, ಅವರನ್ನು ನೋಡುತ್ತಲೇ ಇರಬೇಕು’, ಎಂದು ಅನಿಸುತ್ತಿತ್ತು. ಅವರನ್ನು ನೋಡಿ ನನ್ನ ಭಾವಜಾಗೃತಿಯಾಗುತ್ತಿತ್ತು. ಅಂತಃಕರಣದಿಂದ ‘ನನ್ನ ದೇವರು, ನನ್ನ ದೇವರು’, ಎಂಬ ಶಬ್ದ ಬರುತ್ತಿತ್ತು. ಅದರಿಂದ ನನಗೆ ಅತ್ಯಂತ ಆನಂದವಾಗುತ್ತಿತ್ತು.
೨. ಪ.ಪೂ. ಗುರುದೇವರ ಜನ್ಮೋತ್ಸವದ ನಿಮಿತ್ತ ಪ್ರಕಾಶಿತವಾದ ದೈನಿಕ ‘ಸನಾತನ ಪ್ರಭಾತ’ದ ವಿಶೇಷಾಂಕದಲ್ಲಿನ ಅವರ ಚಿತ್ರವನ್ನು ನೋಡಿದಾಗ ‘ಅವರನ್ನು ನೋಡುತ್ತಲೇ ಇರಬೇಕು’, ಎಂದೆನಿಸಿ ಆನಂದವಾಗುವುದು
ಪ.ಪೂ. ಗುರುದೇವರ ೯.೫.೨೦೨೧ ಈ ದಿನದ ದೈನಿಕ ‘ಸನಾತನ ಪ್ರಭಾತ’ದ ಜನ್ಮೋತ್ಸವ ವಿಶೇಷಾಂಕವನ್ನು ನೋಡುವಾಗಲೂ ಅದರಲ್ಲಿನ ಪ.ಪೂ. ಗುರುದೇವರ ಛಾಯಾಚಿತ್ರವನ್ನು ನೋಡಿ ನನಗೆ ಬಹಳ ಭಾವಜಾಗೃತಿಯಾಗುತ್ತಿತ್ತು. ‘ಅವರನ್ನು ಇನ್ನು ನೋಡಬೇಕು, ನೋಡುತ್ತಲೇ ಇರಬೇಕು’, ಎಂದು ನನಗೆ ಅನಿಸುತ್ತಿತ್ತು. ಆಗಲೂ ಒಳಗಿನಿಂದ ‘ನನ್ನ ದೇವರು, ನನ್ನ ದೇವರು’, ಎಂಬ ಶಬ್ದ ಬರುತ್ತಿತ್ತು. ನನಗೆ ಆನಂದವೆನಿಸುತ್ತಿತ್ತು. ಈ ರೀತಿ ನನಗೆ ಬಹಳ ಕಾಲಾವಧಿಯವರೆಗೆ ಅನುಭವಿಸಲು ಸಾಧ್ಯವಾಯಿತು. ನಂತರ ನನ್ನಿಂದ ಶರಣಾಗತಭಾವದಿಂದ, ‘ಈ ಜನ್ಮದಲ್ಲಿಯೇ ನನ್ನನ್ನು ನಿಮ್ಮ ಚರಣಗಳಲ್ಲಿ ಸಮರ್ಪಿಸಿಕೊಳ್ಳಿರಿ’, ಎಂದು ಪ್ರಾರ್ಥನೆಯಾಗುತ್ತಿತ್ತು.
ಪ.ಪೂ. ಗುರುದೇವರ ಅಪಾರ ಕೃಪೆಯಿಂದಲೇ ಇಂತಹ ಅನುಭೂತಿಯು ಬಂದಿತು. ಆ ಬಗ್ಗೆ ಅವರ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞನಾಗಿದ್ದೇನೆ.’
– (ಪೂ.) ರಮಾನಂದ ಗೌಡ, ಮಂಗಳೂರು (೨೧.೬.೨೦೨೧)
ರಾಜಮಾತಂಗಿ ಯಜ್ಞದಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮ ಪರಿಸರದಲ್ಲಿ ಅನುಭವವಾದ ಅಂಶಗಳು
‘ನಾವು ಮಾಡುತ್ತಿರುವ ಪ್ರತಿಯೊಂದು ವಿಚಾರ, ಕೃತಿ ಅಥವಾ ನಮ್ಮ ಬಾಯಿಯಿಂದ ಬರುವ ಪ್ರತಿಯೊಂದು ಮಾತು’ ಇವುಗಳ ದಾಖಲೆಯನ್ನು ಭಗವಂತನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಲ್ಲಿ ಇಡುತ್ತಾನೆ !’
ಅನಂತಪುರದ (ಶಿವಮೊಗ್ಗ ಜಿಲ್ಲೆ) ಶ್ರೀ. ನಾಗಪ್ಪ ಅವರಿಗೆ ಬಂದ ವಿವಿಧ ಅನುಭೂತಿಗಳು !
ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ರಾಮನಾಥಿ ಆಶ್ರಮದ ಶ್ರೀಮತಿ ಕ್ಷಮಾ ರಾಣೆ (ವಯಸ್ಸು ೭೫ ವರ್ಷಗಳು), ಸೌ. ವಿಜಯಲಕ್ಷ್ಮೀ ದಂಡಮುಡಿ (ವಯಸ್ಸು ೬೯ ವರ್ಷಗಳು) ಮತ್ತು ಡಾ. (ಸೌ.) ಸಂಗೀತಾ ಚೌಧರಿ (ವಯಸ್ಸು ೪೫ ವರ್ಷಗಳು) !
ದೆಹಲಿಯಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದದ ನಿಮಿತ್ತ ಸನಾತನ ಸಂಸ್ಥೆಯ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಗೆ ಅಗ್ನಿಹೋತ್ರ ಮಾಡುವಾಗ ದೇವರು ನೀಡಿದ ಸಾಕ್ಷಿ !
‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಾಧಕರಿಗೆ ಅರಿವಾದ ಅಂಶಗಳು ಮತ್ತು ಬಂದ ಅನುಭೂತಿಗಳು