
ಪುಣೆ – ಪ್ರೇಮಭಾವ, ಸ್ಥಿರತೆ ಮತ್ತು ದೇವರ ಮೇಲೆ ದೃಢ ಶ್ರದ್ಧೆ ಇರುವ ಪುಣೆಯ ಶ್ರೀಮತಿ ಮಾಲತಿ ನವನೀತದಾಸ ಶಹಾ (ವಯಸ್ಸು ೮೩ ವರ್ಷಗಳು) ಇವರು ಸನಾತನದ ೧೨೦ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದ ಆನಂದ ವಾರ್ತೆಯನ್ನು ಸದ್ಗುರು ಸ್ವಾತಿ ಖಾಡ್ಯೆ ಇವರು ೪ ಆಗಸ್ಟ್ ಈ ದಿನದಂದು ನೀಡಿದರು. ಸದ್ಗುರು ಸ್ವಾತಿ ಖಾಡ್ಯೆ ಇವರು ಪೂ. (ಶ್ರೀಮತಿ) ಶಹಾಅಜ್ಜಿ ಮತ್ತು ಅವರ ಕುಟುಂಬದವರನ್ನು ಭೇಟಿಯಾಗಲು ವಾಯಿಯಲ್ಲಿರುವ ಅವರ ಮನೆಗೆ ಹೋಗಿದ್ದರು. ಆ ಸಮಯದಲ್ಲಿ ಅವರು ಈ ಆನಂದವಾರ್ತೆಯನ್ನು ಎಲ್ಲರಿಗೂ ನೀಡಿದರು. ಸದ್ಗುರು ಸ್ವಾತಿ ಖಾಡ್ಯೆ ಇವರು ಪೂ. (ಶ್ರೀಮತಿ) ಮಾಲತಿ ಶಹಾ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರ, ಹಾಗೆಯೇ ಶಾಲು ಮತ್ತು ಶ್ರೀಫಲವನ್ನು ನೀಡಿ ಅವರನ್ನು ಸನ್ಮಾನಿಸಿದರು. ‘ಈ ಆನಂದವಾರ್ತೆಯ ಮಾಧ್ಯಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯರು ಕೃಪಾಶೀರ್ವಾದವನ್ನೇ ನೀಡಿದ್ದಾರೆ, ಎಂಬ ಭಾವವು ಅಲ್ಲಿನ ಸಾಧಕರಿಗೆಲ್ಲ ಅರಿವಾಯಿತು.
ದೇವಸ್ಥಾನಗಳ ಪ್ರತಿನಿಧಿಗಳು ಮತ್ತು ಹಿಂದೂಗಳ ಸಂಘಟನೆ ಅಗತ್ಯ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!
ಶ್ರೀ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಮತ್ತು ಸಂತರಿಂದ ಪ್ರಾರ್ಥನೆ !
ಸದ್ಗುರು ಅನುರಾಧಾ ವಾಡೇಕರ್ ಅವರ ಶುಭಹಸ್ತದಿಂದ ಮುಂಬಯಿನಲ್ಲಿ ಶ್ರೀ ಮಹಾಗಣಪತಿ ಮತ್ತು ಭೂಮಿ ಪೂಜೆ !
ಗುರುಕಾರ್ಯದ ಧ್ಯಾಸವಿರುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಅವರ ಬಗ್ಗೆ ಭಾವವಿರುವ ಪೂ. ಸಾಂತಪ್ಪ ಗೌಡ !
‘ನಮ್ಮ ಮನಸ್ಸಿನತ್ತ ನೋಡುವ ದೃಷ್ಟಿಕೋನವು ಹೇಗಿರಬೇಕು ?’, ಎಂಬುದರ ಬಗ್ಗೆ ಜ್ಞಾನಯೋಗಿ ಪೂ. ಅನಂತ ಆಠವಲೆ ಇವರ ಅಮೂಲ್ಯ ಮಾರ್ಗದರ್ಶನ !