ಪ್ರಾಣಿಗಳ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮುಖಂಡನ ಬಂಧನ

ಕೊಲ್ಕತ್ತಾ (ಬಂಗಾಲ) – ಪ್ರಾಣಿಗಳ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಕೇಂದ್ರೀಯ ಅನ್ವೇಷಣ ಇಲಾಖೆಯು ಬೋಲ್ಪೂರ್ ಇಲ್ಲಿ ದಾಳಿ ನಡೆಸಿ ತೃಣಮೂಲ ಕಾಂಗ್ರೆಸ್ಸಿನ ನಾಯಕ ಅನುಬ್ರತ ಮಂಡಲ ಇವರನ್ನು ಬಂಧಿಸಿದ್ದಾರೆ. ಅವರು ತೃಣಮೂಲದ ವೀರಭೂಮ ಪ್ರದೇಶದ ಜಿಲ್ಲಾಧ್ಯಕ್ಷರಾಗಿದ್ದಾರೆ. ಈ ಪ್ರಕರಣದಲ್ಲಿ ಅವರ ಅಂಗರಕ್ಷಕ ಸೈಗಲ್ ಹುಸೇನ್ ಇವನನ್ನು ಈ ಮೊದಲೇ ಬಂಧಿಸಲಾಗಿತ್ತು .೨೦೨೦ ನೇ ಇಸ್ವಿಯಲ್ಲಿ ಇವರ ವಿರುದ್ಧ ದೂರು ದಾಖಲಿಸಲಾಗಿತ್ತು. ಅದರ ನಂತರ ಎರಡು ಬಾರಿ ಅವರ ವಿಚಾರಣೆಯನ್ನು ನಡೆಸಲಾಗಿತ್ತು.೨೦೧೫ ರಿಂದ ೨೦೧೭ ನೇ ಇಸ್ವಿಯ ಕಾಲಾವಧಿಯಲ್ಲಿ ಗಡಿ ಸುರಕ್ಷಾ ದಳಕ್ಕೆ ೨೦ ಸಾವಿರಕ್ಕೂ ಹೆಚ್ಚಿನ ಪ್ರಾಣಿಗಳ ತಲೆಗಳು ದೊರೆತಿದ್ದವು.

ಸಂಪಾದಕೀಯ ನಿಲುವು

ಪ್ರಾಣಿಗಳ ಕಳ್ಳ ಸಾಗಾಣಿಕೆ, ಎಂದರೆ ಗೋವುಗಳ ಕಳ್ಳ ಸಾಗಾಣಿಕೆಯೇ ಎಂಬುದರಲ್ಲಿ ಅನುಮಾನವಿಲ್ಲ. ಗೋವುಗಳ ಕಳ್ಳ ಸಾಗಾಣಿಕೆ ಮಾಡುವ ಮುಖಂಡರಿರುವ ತೃಣಮೂಲ ಕಾಂಗ್ರೆಸ ಹಿಂದೂದ್ರೋಹಿ ಆಗಿದೆ !