ಶ್ರಾವಣದ ಮೊದಲನೇ ಸೋಮವಾರದಂದು ತ್ರ್ಯಂಬಕೇಶ್ವರ ದೇವಸ್ಥಾನದಿಂದ ಭಕ್ತರ ಲೂಟಿ

ನಾಶಿಕ – ಜೈ ಭೋಲೆನಾಥ ಎಂಬ ಘೋಷದೊಂದಿಗೆ ೧ ಲಕ್ಷಕ್ಕಿಂತ ಹೆಚ್ಚು ಭಕ್ತರು ಆಗಸ್ಟ್ ೧ ರಂದು ಶ್ರಾವಣದ ಮೊದಲನೇ ಸೋಮವಾರದಂದು ತ್ರ್ಯಂಬಕೇಶ್ವರನ ದರ್ಶನ ಪಡೆದರು. ಮುಂಜಾನೆ ನಾಲ್ಕು ಗಂಟೆಯಿಂದ ಭಕ್ತರು ಸಾಲಿನಲ್ಲಿ ನಿಂತಿದ್ದರು. ತ್ರ್ಯಂಬಕೇಶ್ವರ ದೇವಸ್ಥಾನವು ಹಣ ನೀಡುವ ಭಕ್ತರಿಗೆ ೨:೩೦ ಗಂಟೆಗಳಲ್ಲಿ ದೇವರ ದರ್ಶನ ಹಾಗೂ ಧರ್ಮದರ್ಶನಕ್ಕಾಗಿ ಬಂದಿರುವ ಭಕ್ತರಿಗೆ ೬ ಗಂಟೆಗಿಂತ ಹೆಚ್ಚಿನ ಸಮಯ ಸಾಲಿನಲ್ಲಿ ನಿಲ್ಲಿಸಿತ್ತು. ದೇವಸ್ಥಾನವು ಪ್ರತಿಯೊಬ್ಬ ವ್ಯಕ್ತಿಗೆ ೨೦೦ ರೂಪಾಯಿ ಶುಲ್ಕ ವಿಧಿಸಿ ದರ್ಶನ ಕಲ್ಪಿಸಿತು. ಸಂಜೆಯವರೆಗೆ ೫ ಸಾವಿರಕ್ಕೂ ಹೆಚ್ಚಿನ ಭಕ್ತರು ಇದರ ಲಾಭ ಪಡೆದರು. ಆದ್ದರಿಂದ ೧೦ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಉತ್ಪನ್ನ ದೇವಸ್ಥಾನಕ್ಕೆ ಸಿಕ್ಕಿದೆ.
ಭಕ್ತರ ಜನಸಂದಣಿ ನೋಡಿ ೩ ಸಾರಿ ‘ಹಣ ಪಡೆದು ದರ್ಶನ’ ನಿಲ್ಲಿಸಬೇಕಾಯಿತು. ಕೊರೊನಾ ಮಹಾಮಾರಿಯ ಕಾಲಾವಧಿಯ ನಂತರ ಬಂದಿರುವ ಇದು ಮೊದಲನೆಯ ಶ್ರಾವಣ ಸೋಮವಾರ ಆಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅದರಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ವಾಹನ ನಿಲುಗಡೆಗಾಗಿ ವಾಹನ ನಿಲ್ದಾಣ ನಗರದಿಂದ ಹೊರಗೆ ಹೋಗಿರುವುದರಿಂದ ಭಕ್ತರಿಗೆ ತೊಂದರೆಯೂ ಆಯಿತು.
ಸಂಪಾದಕೀಯ ನಿಲುವು
|
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ