ಶ್ರಾವಣದ ಮೊದಲನೇ ಸೋಮವಾರದಂದು ತ್ರ್ಯಂಬಕೇಶ್ವರ ದೇವಸ್ಥಾನದಿಂದ ಭಕ್ತರ ಲೂಟಿ

ನಾಶಿಕ – ಜೈ ಭೋಲೆನಾಥ ಎಂಬ ಘೋಷದೊಂದಿಗೆ ೧ ಲಕ್ಷಕ್ಕಿಂತ ಹೆಚ್ಚು ಭಕ್ತರು ಆಗಸ್ಟ್ ೧ ರಂದು ಶ್ರಾವಣದ ಮೊದಲನೇ ಸೋಮವಾರದಂದು ತ್ರ್ಯಂಬಕೇಶ್ವರನ ದರ್ಶನ ಪಡೆದರು. ಮುಂಜಾನೆ ನಾಲ್ಕು ಗಂಟೆಯಿಂದ ಭಕ್ತರು ಸಾಲಿನಲ್ಲಿ ನಿಂತಿದ್ದರು. ತ್ರ್ಯಂಬಕೇಶ್ವರ ದೇವಸ್ಥಾನವು ಹಣ ನೀಡುವ ಭಕ್ತರಿಗೆ ೨:೩೦ ಗಂಟೆಗಳಲ್ಲಿ ದೇವರ ದರ್ಶನ ಹಾಗೂ ಧರ್ಮದರ್ಶನಕ್ಕಾಗಿ ಬಂದಿರುವ ಭಕ್ತರಿಗೆ ೬ ಗಂಟೆಗಿಂತ ಹೆಚ್ಚಿನ ಸಮಯ ಸಾಲಿನಲ್ಲಿ ನಿಲ್ಲಿಸಿತ್ತು. ದೇವಸ್ಥಾನವು ಪ್ರತಿಯೊಬ್ಬ ವ್ಯಕ್ತಿಗೆ ೨೦೦ ರೂಪಾಯಿ ಶುಲ್ಕ ವಿಧಿಸಿ ದರ್ಶನ ಕಲ್ಪಿಸಿತು. ಸಂಜೆಯವರೆಗೆ ೫ ಸಾವಿರಕ್ಕೂ ಹೆಚ್ಚಿನ ಭಕ್ತರು ಇದರ ಲಾಭ ಪಡೆದರು. ಆದ್ದರಿಂದ ೧೦ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಉತ್ಪನ್ನ ದೇವಸ್ಥಾನಕ್ಕೆ ಸಿಕ್ಕಿದೆ.
ಭಕ್ತರ ಜನಸಂದಣಿ ನೋಡಿ ೩ ಸಾರಿ ‘ಹಣ ಪಡೆದು ದರ್ಶನ’ ನಿಲ್ಲಿಸಬೇಕಾಯಿತು. ಕೊರೊನಾ ಮಹಾಮಾರಿಯ ಕಾಲಾವಧಿಯ ನಂತರ ಬಂದಿರುವ ಇದು ಮೊದಲನೆಯ ಶ್ರಾವಣ ಸೋಮವಾರ ಆಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅದರಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ವಾಹನ ನಿಲುಗಡೆಗಾಗಿ ವಾಹನ ನಿಲ್ದಾಣ ನಗರದಿಂದ ಹೊರಗೆ ಹೋಗಿರುವುದರಿಂದ ಭಕ್ತರಿಗೆ ತೊಂದರೆಯೂ ಆಯಿತು.
ಸಂಪಾದಕೀಯ ನಿಲುವು
|
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !