(ಮೌಲ್ವಿ- ಇಸ್ಲಾಂ ಧರ್ಮಗುರು)

ಕೊಚ್ಚಿ (ಕೇರಳ) – ಕೇರಳದ ಮಲಪ್ಪುರಂ ಜಿಲ್ಲೆಯ ಕೊಡೊಟ್ಟಿ ನಿವಾಸಿ ಮೌಲ್ವಿ ವಾಸಿಂ ಅಲ-ಹಿಕಾಮಿ ಎಂಬಾತನ ವಿರುದ್ಧ ಕೊಚ್ಚಿ ಸೈಬರ ಪೊಲೀಸರು ಯೇಸುಕ್ರಿಸ್ತನ ಬಗ್ಗೆ ಅವಮಾನಕರ ಹೇಳಿಕೆಗಳನ್ನು ನೀಡುವ ಮೂಲಕ ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಮುಖಂಡ ಅನೂಪ ಅಂಟನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ‘ಮೌಲ್ವಿ ವಾಸಿಂ ಅಲ-ಹಿಕಾಮಿ ಯೇಸು ಕ್ರಿಸ್ತನ ಜನನದ ಬಗ್ಗೆ ಅವಮಾನಕಾರ ಹೇಳಿಕೆ ನೀಡಿದ್ದಾರೆ. ಅವನ ಮಾತುಗಳು ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ದೂರಿನಲ್ಲಿ ಅಂಟನಿ ಹೇಳಿದ್ದಾರೆ. ಇದಕ್ಕೂ ಮೊದಲು ಜನವರಿ ೨೦೨೨ರಲ್ಲಿ ವಾಸಿಂ ಅಲ-ಹಿಕಾಮಿ ವಿರುದ್ಧ ಇದೇ ರೀತಿಯ ಪ್ರಕರಣ ದಾಖಲಾಗಿತ್ತು.
Kerala: Muslim cleric Waseem Al Hikami booked for passing derogatory remarks against Jesus Christ on social media, was booked earlier in January toohttps://t.co/C2HVRj6VFl
— OpIndia.com (@OpIndia_com) July 6, 2022
ಸಂಪಾದಕೀಯ ನಿಲುವುಕಮ್ಯುನಿಸ್ಟ ರಾಜ್ಯದಲ್ಲಿ ಕ್ರೈಸ್ತರ ಅಥವಾ ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಅವರು ಕೂಡಲೇ ಅದಕ್ಕೆ ಸ್ಪಂದಿಸುತ್ತಾರೆ, ಆದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾದರೆ ಎಷ್ಟೇ ದೂರುಗಳು ನೋಂದಾಯಿಸಿದರೂ ನಿರ್ಲಕ್ಷಿಸುತ್ತಾರೆ, ನೆನಪಿನಲ್ಲಿಡಿ! |
ಛತ್ತೀಸಗಢದ ಅಲೀಶಾ ಖಾತೂನ್ ಉತ್ತರ ಪ್ರದೇಶದ ಜೋಗೇಂದ್ರ ಸೈನಿಯನ್ನು ವಿವಾಹವಾದರು!
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ಅವ್ಯವಹಾರ ಅತ್ಯಂತ ಗಂಭೀರ ಘಟನೆ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ
ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple
ಮಧ್ಯಪ್ರದೇಶದ ರಿವಾದಲ್ಲಿ ಗೋ-ಕಳ್ಳಸಾಗಣೆ: ಇಬ್ಬರು ಮುಸಲ್ಮಾನ ಮಹಿಳೆಯರ ಸೆರೆ : Rewa Beef Smuggling Arrests
ನ್ಯಾಯಾಲಯದ ಬೇಸಿಗೆ ರಜೆಗಳ ನಂತರ ವಿಚಾರಣೆಯಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ! : Supreme Court