ಇಮ್ರಾನ ವಿವಾಹಿತನೆಂದು ಆಶಾಳಿಗೆ ತಿಳಿದಾಗ ದಾಳಿ ಮಾಡಿದನು !

ಬದಾಯೂಂ (ಉತ್ತರಪ್ರದೇಶ) : ಇಲ್ಲಿ ಇಮ್ರಾನ ಹೆಸರಿನ ಒಬ್ಬ ಮುಸ್ಲಿಂ ಯುವಕನು ಆಶಾ ಹೆಸರಿನ ಹಿಂದೂ ಪ್ರೇಯಸಿಯ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ದಾಳಿಯಲ್ಲಿ ಆಶಾ ಗಾಯಗೊಂಡಿದ್ದಾಳೆ. ಇಮ್ರಾನ ಈಗಾಗಲೇ ಮದುವೆಯಾಗಿರುವುದಾಗಿ ಆಶಾಗೆ ಗೊತ್ತಾಗಿದೆ ಎಂಬುದೇ ದಾಳಿಗೆ ಕಾರಣ ಎನ್ನಲಾಗಿದೆ. ದಾಳಿಯಲ್ಲಿ ಇಮ್ರಾನ ಸ್ನೇಹಿತ ಜೀಶಾನ ಕೂಡಾ ಭಾಗಿಯಾಗಿದ್ದ. ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
उत्तर प्रदेश के बदायूं जिले में एक युवक ने अपनी पोल खुलने के बाद प्रेमिका को गोली मार दी और मौके से फरार हो गया #CrimeNewshttps://t.co/t7bjDzjZtc
— AajTak (@aajtak) June 2, 2022
ಮೂಲಗಳ ಪ್ರಕಾರ ಪೀಡಿತೆ ಅಮೇಠಿ ಜಿಲ್ಲೆಯವಳು. ಅವಳು ತನ್ನ ಕುಟುಂಬದೊಂದಿಗೆ ಹರಿಯಾಣಾದ ಗುರುಗ್ರಾಮದಲ್ಲಿ ವಾಸಿಸುತ್ತಾಳೆ. ಮನೆ-ಮನೆಗಳಲ್ಲಿ ಅಡುಗೆ ಕೆಲಸ ಮಾಡಿ ಜೇವನ ನಡೆಸುತ್ತಾಳೆ. ಇಮ್ರಾನ ಗುರುಗ್ರಾಮದಲ್ಲಿ ಕೇಶ ವಿನ್ಯಾಸಕನಾಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರೂ ಒಮ್ಮೆ ಭೇಟಿಯಾದರು. ನಂತರ ಇಮ್ರಾನ ಆಶಾಳನ್ನು ಪ್ರೇಮ ಬಲೆಯಲ್ಲಿ ಎಳೆದ. ಅಂತಿಮವಾಗಿ ಅವಳು ತನ್ನನ್ನು ಮದುವೆಯಾಗುವಂತೆ ಇಮ್ರಾನಗೆ ಒತ್ತಾಯಿಸಲು ಪ್ರಾರಂಭಿಸಿದಳು. ಆದಾಗ್ಯೂ ಇಮ್ರಾನ ತಪ್ಪಿಸಿಕೊಳ್ಳುವುದನ್ನು ಮುಂದುವರೆಸಿದನು. ನಂತರ ಅವನಿಗೆ ಮದುವೆಯಾಗಿರುವುದು ಆಶಾಳಿಗೆ ಗೊತ್ತಾಯಿತು. ಒಂದು ದಿನ ಇಮ್ರಾನ ಅವಳಿಗೆ ಬದಾಯೂಂಗೆ ಕರೆತಂದನು. ಅಲ್ಲಿ ಸ್ನೇಹಿತ ಜೀಶಾನನ ಸಹಾಯದಿಂದ ಆಕೆಯನ್ನು ಥಳಿಸಿದ್ದಾನೆ. ಘಟನೆ ಸ್ಥಳದಿಂದ ಓಡಿಹೋಗುವಾಗ ಅವನು ಅವಳ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಆಕೆ ಗಾಯಗೊಂಡಳು ಆದರೂ ಆ ಸ್ಥಿತಿಯಲ್ಲೂ ಆಕೆ ಓಡುತ್ತಲೇ ಇದ್ದಳು. ಸ್ವಲ್ಪ ದೂರದಲ್ಲಿರುವ ದೇವಸ್ಥಾನವನ್ನು ತಲುಪಿದ ಆಕೆ ಪ್ರಜ್ಞೆ ತಪ್ಪಿ ಬಿದ್ದಳು. ಸ್ಥಳಿಯರ ನೆರವಿನಿಂದ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಪೊಲೀಸರು ಇಬ್ಬರನ್ನೂ ಬಂಧಿಸಿ ಆಶಾಳನ್ನು ಅವಳ ಮನೆಗೆ ಕರೆದೊಯ್ದಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ಹುಡುಗಿಯರೇ ‘ಲವ ಜಿಹಾದ’ ಬಗ್ಗೆ ಎಚ್ಚರ! ಮುಸಲ್ಮಾನರ ಇಂತಹ ಷಡ್ಯಂತ್ರಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವದಕ್ಕಾಗಿ ಧರ್ಮಶಿಕ್ಷಣವನ್ನು ಪಡೆದು ಸಾಧನೆ ಮಾಡಿ ಮತ್ತು ಆತ್ಮಬಲವನ್ನು ಹೆಚ್ಚಿಸಿಕೊಳ್ಳಿ, ಜೊತೆಗೆ ಆತ್ಮ ರಕ್ಷಣೆಗಾಗಿ ತರಬೇತಿಯನ್ನು ಪಡೆದುಕೊಳ್ಳಿ ! |
Ram Mandir Theft Confession : ಕಳ್ಳತನದ ಹಣವನ್ನು ಶೌಚಾಲಯದಲ್ಲಿ ಅಡಗಿಸಿಡುತ್ತಿದ್ದೆವು!
ವಿಶೇಷ ನ್ಯಾಯಾಲಯದಿಂದ ಶಾಸಕ ಟಿ. ರಾಜಾ ಸಿಂಗ್ ಖುಲಾಸೆ!
ತಾಲಿಬಾನ್ನಿಂದ ಪಾಕಿಸ್ತಾನದಲ್ಲಿರುವ ಇಸ್ಲಾಮಿಕ್ ಸ್ಟೇಟ್ ನೆಲೆಗಳ ಮೇಲೆ ಡ್ರೋನ್ ದಾಳಿ
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ