ನಮ್ಮ ಪ್ರಣಾಳಿಕೆಯಲ್ಲಿ ಕಾಶಿ ಮತ್ತು ಮಥುರಾದ ದೇವಾಲಯಗಳ ವಿಷಯವಿಲ್ಲ! – ಬಿಜೆಪಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ ನಡ್ಡಾ

ಹೊಸ ದೆಹಲಿ– ಜೆಪಿಯ ಪ್ರಣಾಳಿಕೆಯಲ್ಲಿ ಕಾಶಿ ಮತ್ತು ಮಥುರಾದಲ್ಲಿರುವ ದೇವಾಲಯಗಳ ವಿಷಯವಿಲ್ಲ. ಆ ದೇವಾಲಯಗಳ ಬಗ್ಗೆ ನ್ಯಾಯಾಲಯವು ತೀರ್ಮಾನಿಸಲಿದೆ. ನ್ಯಾಯಾಲಯದ ತೀರ್ಪನ್ನು ಬಿಜೆಪಿ ಜಾರಿಗೊಳಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ ನಡ್ಡಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಶ್ರಿರಾಮ ಮಂದಿರದ ಕುರಿತು ನಿರ್ಣಯ ಅಂಗಿಕರಿಸಲಾಗಿದೆ. ಅಂದರ ನಂತರ ಯಾವುದೇ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ’ ಎಂದು ನಡ್ಡಾ ಹೇಳಿದರು.

ಸಂಪಾದಕೀಯ ನಿಲುವು

* ಕಾಶಿ ಮತ್ತು ಮಥುರಾದ ದೇವಾಲಯಗಳು ಹಿಂದೂಗಳ ತೀರ್ಥಸ್ಥಳಗಳಾಗಿರುವುದರಿಂದ ಧರ್ಮಾಭಿಮಾನಿ ಹಿಂದೂಗಳು ಅವುಗಳನ್ನು ಮುಕ್ತಗೊಳಿಸಲು ಪ್ರಯತ್ನ ಮಾಡುವರು ಮತ್ತು ಯಶಸ್ಸನ್ನೂ ಪಡೆಯುವರು!