ಜ್ಞಾನವಾಪಿ ಮಸೀದಿಯ ಚಿತ್ರೀಕರಣವನ್ನು ಸಾರ್ವಜನಿಕಗೊಳಿಸಲು ನಿರ್ಬಂಧ ಹೇರಬೇಕು ! – ಮುಸಲ್ಮಾನ ಪಕ್ಷದಿಂದ ನ್ಯಾಯಾಲಯದಲ್ಲಿ ಮನವಿ

ವಾರಾಣಸಿ (ಉತ್ತರಪ್ರದೇಶ) – ಜ್ಞಾನವಾಪಿ ಮಸೀದಿಯ ನ್ಯಾಯಾಲಯದ ಆಯುಕ್ತರಿಂದ ಸಮೀಕ್ಷೆಯ ಸಮಯದಲ್ಲಿ ನಡೆದ ಚಿತ್ರೀಕರಣವನ್ನು ಮೇ ೩೦ರಂದು ಹಿಂದೂ ಹಾಗೂ ಮುಸಲ್ಮಾನ ಹೀಗೆ ಎರಡೂ ಪಕ್ಷಗಳಿಗೆ ನ್ಯಾಯಾಲಯದ ಆದೇಶದ ನಂತರ ನೀಡಲಾಗುವುದು. ಈ ಚಿತ್ರೀಕರಣವನ್ನು ಸಾರ್ವಜನಿಕಗೊಳಿಸಬಾರದು, ಎಂದು ಮುಸಲ್ಮಾನ ಪಕ್ಷವು ಪಟ್ಟು ಹಿಡಿದಿದೆ. ನ್ಯಾಯಾಲಯದಲ್ಲಿ ಈ ರೀತಿಯಲ್ಲಿ ಮನವಿ ಮಾಡಲಾಗಿದೆ.

ಸಂಪಾದಕೀಯ ನಿಲುವು

* ಚಿತ್ರೀಕರಣವು ಸಾರ್ವಜನಿಕವಾದರೆ ಸಂಪೂರ್ಣ ಜಗತ್ತಿಗೆ ಜ್ಞಾನವಾಪಿಯು ಮಸೀದಿಯಾಗಿರದೇ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನವಾಗಿತ್ತು ಎಂಬುದು ತಿಳಿಯುತ್ತದೆ. ಆದುದರಿಂದಲೇ ಮುಸಲ್ಮಾನ ಪಕ್ಷವು ಇದನ್ನು ವಿರೋಧಿಸುತ್ತಿದೆ, ಎಂಬುದನ್ನು ಗಮನದಲ್ಲಿಡಿ !