ಗೌಹಟ್ಟಿ (ಅಸ್ಸಾಂ) ಯಲ್ಲಿ ಅಜ್ಞಾತರಿಂದ ೨ ದೇವಾಲಯಗಳ ಮೂರ್ತಿಗಳು ಧ್ವಂಸ : ಶಿವಲಿಂಗವನ್ನು ಮೋರಿಯಲ್ಲಿ ಎಸೆದರು !

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು

ಗೌಹಟ್ಟಿ (ಅಸ್ಸಾಂ) – ಇಲ್ಲಿ ಕೆಲವು ಅಜ್ಞಾತರು ಎರಡು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿ ಅಲ್ಲಿದ್ದ ಶಿವಲಿಂಗಗಳನ್ನು ತೆಗೆದು ಮೋರಿಗೆ ಎಸೆದಿದ್ದಾರೆ. ಮೇ ೨೪ ರ ರಾತ್ರಿ ಕೆಲವರು ದೇವಸ್ಥಾನಕ್ಕೆ ನುಗ್ಗಿ ಭಗವಾನ ಶಿವನ ಚಿತ್ರ ಮತ್ತು ಶಿವಲಿಂಗವನ್ನು ಕೊಂಡೊಯ್ದು ಎಸೆದರು. ಅವರು ಇನ್ನೊಂದು ದೇವಸ್ಥಾನದಲ್ಲಿದ್ದ ಶ್ರೀ ಗಣೇಶನ ಮೂರ್ತಿಯನ್ನು ತೆಗೆಯಲು ಪ್ರಯತ್ನಿಸಿದರು; ಆದರೆ ಅದು ಸಾಧ್ಯವಾಗದ ಕಾರಣ ಹೊರಗಿದ್ದ ಮೂರ್ತಿಗೆ ಹಾನಿ ಮಾಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ದೇವಾಲಯಗಳ ಮೇಲೆ ಈ ರೀತಿ ಆಗಾಗ ದಾಳಿಯನ್ನು ಮಾಡುವವರನ್ನು ಇನ್ನು ಗಲ್ಲಿಗೇರಿಸಲು ಕೇಂದ್ರ ಸರಕಾರ ಕಾನೂನನ್ನು ರೂಪಿಸಬೇಕು ಎಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ !